ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿಎಸ್‌ಸಿಯಲ್ಲಿ ಮತ್ತೊಂದು ಭ್ರಷ್ಟಾಚಾರ?; ಆಡಿಯೋ ವೈರಲ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 24: ಡಿಕೆಶಿ ಸಹೋದರರ ಬೆಂಬಲಿಗ, ಕೆಪಿಎಸ್‌ಸಿ ಸದಸ್ಯ ರಘುನಂದನ್ ರಾಮಣ್ಣ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಎಸಿ ಶ್ರೇಣಿ ಹುದ್ದೆ ಕೊಡಿಸುವುದಾಗಿ ರಘುನಂದನ್ ಆಪ್ತರು 1.50 ಕೋಟಿ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ರಘುನಂದನ್ ರಾಮಣ್ಣ ಆಪ್ತರಾದ ಚನ್ನಪಟ್ಟಣದ ಕಾಂಗ್ರೆಸ್ ಮುಖಂಡ, ಡಿಕೆಶಿ ಸಹೋದರರ ಆತ್ಮೀಯ ಪಿ. ಡಿ. ರಾಜು ಹಾಗೂ ನೂತನ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಹಣ ಪಡೆದಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

ಕೆಪಿಎಸ್‌ಸಿ ಮತ್ತೊಂದು ಅಕ್ರಮ ಬಯಲು; ಆಯ್ಕೆ ಪಟ್ಟಿ ರದ್ದು ಕೆಪಿಎಸ್‌ಸಿ ಮತ್ತೊಂದು ಅಕ್ರಮ ಬಯಲು; ಆಯ್ಕೆ ಪಟ್ಟಿ ರದ್ದು

KPSC Member Close Aides Received Bribe By Promising Jobs

ರಾಂಪುರ ಗ್ರಾಮದ ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ವೆಂಕಟೇಗೌಡ ಎಂಬುವವರ ಮಗಳಿಗೆ ಎಸಿ ಹುದ್ದೆ ಕೊಡಿಸುವ ವಿಚಾರದಲ್ಲಿ ಇಬ್ಬರು ಮುಖಂಡರು ಹಣ ಪಡೆದಿದ್ದಾರೆ. ಈ ಮಾತುಕತೆ ನಡೆಸಿರುವ ಆಡಿಯೋ ವೈರಲ್ ಆಗಿದೆ.

ಕೆಪಿಎಸ್‌ಸಿ: ಸಂಪುಟ ಉಪ ಸಮಿತಿ ರಚಿಸಲು ಸರ್ಕಾರ ನಿರ್ಧಾರಕೆಪಿಎಸ್‌ಸಿ: ಸಂಪುಟ ಉಪ ಸಮಿತಿ ರಚಿಸಲು ಸರ್ಕಾರ ನಿರ್ಧಾರ

ಪ್ರಮೋದ್

ಚನ್ನಪಟ್ಟಣದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ. ಸಿ. ವೀರೇಗೌಡ ಹಾಗೂ ಹಣ ಕೊಟ್ಟಿರುವ ವೆಂಕಟೇಗೌಡ ನಡುವಿನ ಪೋನ್ ಸಂಭಾಷಣೆ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ. 1.5 ಕೋಟಿ ಪೈಕಿ 1 ಕೋಟಿ ಅಡ್ವಾನ್ಸ್ ಹಣವನ್ನು ರಾಜು ಹಾಗೂ ಪ್ರಮೋದ್ ಪಡೆದಿದ್ದಾರೆ.

ಪಿ. ಡಿ. ರಾಜು

Recommended Video

'ಎಲ್ಲಾ ನಾಯಕರ ತನಿಖೆಯಾಗಲಿ ಯಾರು ಏಕಪತ್ನಿವ್ರತಸ್ಥರು? ಯಾರಿಗೆಲ್ಲ ಅನೈತಿಕ ಸಂಬಂಧ ಇದೆ ಗೊತ್ತಾಗುತ್ತೆ' ಸಚಿವ ಸುಧಾಕರ್ ಹೇಳಿಕೆ | Oneindia Kannada

ಆಡಿಯೋದಲ್ಲಿ ಕೆಲಸ ಆಗದ ಹಿನ್ನಲೆಯಲ್ಲಿ ವೆಂಕಟೇಗೌಡ ಹಣ ವಾಪಸ್ ಕೇಳಿರುವ ಮಾತುಗಳಿವೆ. ಈ ಕುರಿತು ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಯಾರೂ ಸಹ ಸ್ಪಷ್ಟನೆಯನ್ನು ನೀಡಿಲ್ಲ.

English summary
KPSC member Raghunandan Ramanna close aides received bribe of 1.5 crore by promising assistant controller (AC) jobs. Audio went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X