ಎಸ್ಎಸ್ಎಲ್ಸಿ ಮರು ಮೌಲ್ಯಮಾಪನ: ಪ್ರಜ್ಞಾ ರಾಜ್ಯಕ್ಕೆ ಪ್ರಥಮ
ರಾಮನಗರ, ಸೆಪ್ಟೆಂಬರ್ 6: ಎಸ್ಎಸ್ಎಲ್ಸಿ ಮರು ಮೌಲ್ಯಮಾಪನದ ನಂತರ 625ಕ್ಕೆ 625 ಅಂಕ ಪಡೆದ ರಾಮನಗರ ಜಿಲ್ಲೆಯ ಮಾಗಡಿ ವಿದ್ಯಾರ್ಥಿನಿ ಪ್ರಜ್ಞಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
Recommended Video
ರಾಮನಗರ ಜಿಲ್ಲೆಯ ಮಾಗಡಿ ಪಟ್ಟದ ವಾಸವಿ ಶಾಲೆಯ ವಿದ್ಯಾರ್ಥಿನಿ ಪ್ರಜ್ಞಾ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಬಂದಾಗ 620 ಅಂಕಗಳಿಸಿದ್ದಳು. ಎಸ್ಎಸ್ಎಲ್ಸಿ ಮರು ಮೌಲ್ಯಮಾಪನದಲ್ಲಿ ಐದು ಹೆಚ್ಚುವರಿ ಅಂಕಗಳನ್ನು ಗಳಿಸಿದ್ದಾಳೆ.
SSLC ಫಲಿತಾಂಶ: 625/625 ಗಳಿಸಿದ ವಿದ್ಯಾರ್ಥಿಗಳ ವಿವರ
ಕೊರೊನಾ ವೈರಸ್ ನ ಲಾಕ್ ಡೌನ್ ನಿಂದಾಗಿ ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಲಾಗಿತ್ತು. ಆದ ಕಾರಣ ಹೆಚ್ಚು ಸಮಯ ಓದಲು ಅವಕಾಶವಿತ್ತು. ಹೀಗಾಗಿ ಯಾವುದೇ ಪ್ರಶ್ನೆ ಬಿಡದೆ ನಾನು ಉತ್ತರಿಸಿದ್ದೆ, ಆಗಸ್ಟ್ 10 ರಂದು ಎಸ್ಎಸ್ಎಲ್ಸಿ ಫಲಿತಾಂಶ ಬಂದಾಗ 620 ಅಂಕ ಬಂದಿತ್ತು ಎಂದಿದ್ದಾಳೆ.
620 ಅಂಕ ಬಂದಾಗ ಅನುಮಾನಗೊಂಡು ವಿದ್ಯಾರ್ಥಿನಿ ಪ್ರಜ್ಞಾ ಮರು ಮೌಲ್ಯಮಾಪನ ಮಾಡಲು ಅರ್ಜಿ ಹಾಕಿದ್ದಳು. ಈಗ ಬಂದ ಫಲಿತಾಂಶದಲ್ಲಿ ವಿದ್ಯಾರ್ಥಿನಿ ಪ್ರಜ್ಞಾ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.