ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಗ್ರರೊಂದಿನ ಕಾಳಗದಲ್ಲಿ ಕರ್ನಾಟಕದ ಯೋಧ ಹುತಾತ್ಮ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 15: ಉಗ್ರರೊಂದಿನ ಕಾದಾಟದಲ್ಲಿ ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ಮಾಗಡಿಯ ವೀರ ಯೋಧ ಹುತಾತ್ಮನಾಗಿರುವ ಘಟನೆ ಜಮ್ಮುವಿನ ಉದ್ಧಂಪುರ ಸೇನಾ ಕ್ಯಾಂಪ್‌ ಬಳಿ ನಡೆದಿದೆ.

ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯ ಪಾಪಣ್ಣನವರ ಪುತ್ರ ವೆಂಕಟ ನರಸಿಂಹಮೂರ್ತಿ(29) ಎಂಬುವರೇ ಹುತಾತ್ಮನಾಗಿರುವ ವೀರ ಯೋಧ. ಹುತಾತ್ಮ ಯೋಧ ಸೇನೆಯ ಸಿ.ಎಲ್.ಎಸ್.ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಇಬ್ಬರು ಬೇಟೆಗಾರರ ಬಂಧನ, 41 ಸಜೀವ ನಾಡ ಬಾಂಬ್ ವಶ ಇಬ್ಬರು ಬೇಟೆಗಾರರ ಬಂಧನ, 41 ಸಜೀವ ನಾಡ ಬಾಂಬ್ ವಶ

ಯೋಧ ವೆಂಕಟ ನರಸಿಂಹಮೂರ್ತಿ ಅವರು ನಿನ್ನೆ ನಡೆದ ಉಗ್ರರೊಂದಿಗಿನ ಸೆಣಸಾಟದಲ್ಲಿ ಮೃತಪಟ್ಟ ವಿಷಯ ಸೇನೆಯಿಂದ ಮಾಗಡಿ ಪೊಲೀಸ್ ಠಾಣೆಗೆ ಬಂದಿದೆ. ಪೋಲೀಸರು ಹುತಾತ್ಮ ಯೋಧನ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

Karnataka Soldier Martyr In Battle Against Terrorists

ಮೃತ ಯೋಧನ ಪಾರ್ಥಿವ ಶರೀರ ಮಾಗಡಿಗೆ ಯಾವಾಗ ಬರುತ್ತದೆ ಎಂಬ ಮಾಹಿತಿ ಸೇನೆಯಿಂದ ಬಂದಿಲ್ಲ. ಸಂಕ್ರಾಂತಿ ಹಬ್ಬ ಆಚರಣೆಯ ಸಂಭ್ರದಲ್ಲಿದ್ದ ಯೋಧನ ಕುಟುಂಬಕ್ಕೆ ವೀರ ಯೋಧ ಸಾವನ್ನಪ್ಪಿದ ವಿಚಾರ ತಿಳಿದು ಪೋಷಕರ ದುಃಖ ಮಡುಗಟ್ಟಿದೆ.

English summary
An incident where a brave warrior martyr was killed near Uddhampur Army Camp in Jammu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X