ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆ ಶಿವಕುಮಾರ್ ಭದ್ರಕೋಟೆ ಕನಕಪುರ ಕ್ಷೇತ್ರದ ಅಂತರಂಗ

By ರಾಮನಗರ ಪ್ರತಿನಿಧಿ
|
Google Oneindia Kannada News

ಇಲ್ಲಿನ ಬಹುತೇಕ ಜನರಿಗೆ ಮರೆತು ಹೋಗಿರಲಿಕ್ಕೆ ಸಾಕು, ಅಂದಿನ ಹೆಸರು ಕಾಂಕನಳ್ಳಿ. ಅದೇ ಸ್ವಾಮಿ, ಇಂದಿನ ಕನಕಪುರ. ಈಗ ಕನಕಪುರ ಎಂದರೆ ನೆನಪಾಗುವುದು ಗ್ರಾನೈಟ್ ಕಲ್ಲು. ಇಲ್ಲಿ ಸಿಗುವ ಕರಿಕಲ್ಲಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಬೇಡಿಕೆ. ಈ ಭಾಗದ ಶಿಕ್ಷಣ ಕ್ರಾಂತಿಯ ಹರಿಕಾರರಾದ ಕನಕಪುರದ ಗಾಂಧಿಯೆಂದೇ ಪ್ರಸಿದ್ಧವಾಗಿದ್ದ ಕರಿಯಪ್ಪನವರು ಜನಿಸಿದ ಭೂಮಿ.

ಆದರೆ, ಈಗ ರಾಜ್ಯ ರಾಜಕಾರಣದಲ್ಲಿ ಪವರ್ ಫುಲ್ ಸಚಿವ ಅಂತಲೇ ಗುರುತಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು ಸತತ‌ ಪ್ರತಿನಿಧಿಸುತ್ತಿರುವ ವಿಧಾನಸಭೆ ಕ್ಷೇತ್ರ ಇದು. ಒಂದು ಕಾಲದಲ್ಲಿ ಪ್ರಭಾವಿ ನಾಯಕರೆಂದು ಹೆಸರು ಮಾಡಿದ್ದ ಪಿ.ಜಿ.ಆರ್.ಸಿಂಧ್ಯಾ ಅವರನ್ನು ಮಣಿಸಿ, ರಾಜಕೀಯ ಜೀವನ ಆರಂಭಿಸಿದ ಡಿ.ಕೆ.ಶಿವಕುಮಾರ್ ಮತ್ತೆ ಹಿಂತಿರುಗಿ ನೋಡಿಲ್ಲ.

ಬಿಜೆಪಿ, ಜೆಡಿಎಸ್ ಅಪಪ್ರಚಾರಕ್ಕೆ ಜನ ತಕ್ಕ ಪಾಠ ಕಲಿಸ್ತಾರೆ: ಡಿಕೆಶಿಬಿಜೆಪಿ, ಜೆಡಿಎಸ್ ಅಪಪ್ರಚಾರಕ್ಕೆ ಜನ ತಕ್ಕ ಪಾಠ ಕಲಿಸ್ತಾರೆ: ಡಿಕೆಶಿ

2008ರಲ್ಲಿ ಸಾತನೂರು ವಿಧಾನ ಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿದ್ದ ಶಿವಕುಮಾರ್ ಕ್ಷೇತ್ರ ಪುರ್ನವಿಂಗಡಣೆ ಆದಾಗ ಕನಕಪುರ ಸೇರಿತ್ತು. ಕನಕಪುರದಲ್ಲಿ ಸಿಂಧ್ಯ ಕಟ್ಟಿದ ಕೋಟೆಯನ್ನು ಛಿದ್ರಪಡಿಸಿ ಇದೀಗ ಶಿವಕುಮಾರ್ ಪಾರುಪತ್ಯೆ ಮಾಡುತ್ತಿದ್ದಾರೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಲವತ್ತು ಸಾವಿರ ಮತಗಳಿಂದ ಜಯ ಗಳಿಸಿದ ಶಿವಕುಮಾರ್ ಎದುರಿಗೆ ಪ್ರಬಲ ಎದುರಾಳಿಗಳ ಕೊರತೆ ಇದೆ.

ಕ್ಷೇತ್ರ ದಲ್ಲಿ ಬಿಜೆಪಿಗೆ ನೆಲೆಯಿಲ್ಲ. ಆದರೆ ಜೆಡಿಎಸ್ ನಿಂದ ಡಿ.ಕೆ.ಶಿವಕುಮಾರ್ ನಾಗಾಲೋಟಕ್ಕೆ ಅಡ್ಡ ಹಾಕುವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.

ಈ ಹಿಂದೆ ಗೆದ್ದವರು ಡಿ.ಕೆ.ಶಿವಕುಮಾರ್

ಈ ಹಿಂದೆ ಗೆದ್ದವರು ಡಿ.ಕೆ.ಶಿವಕುಮಾರ್

ಕನಕಪುರ

2013: ಡಿ.ಕೆ ಶಿವಕುಮಾರ್(ಕಾಂಗ್ರೆಸ್)

ಪಡೆದ ಮತ- 1,00,007

-----------

ಈ ಹಿಂದೆ ಸೋತವರು

ಪಿ.ಜಿ.ಆರ್ ಸಿಂಧ್ಯಾ

ಪಡೆದ ಮತ- 68,583

------------

ಗೆಲುವಿನ ಅಂತರ:

31,424ಮತ (2013)

ಕ್ಷೇತ್ರದ ಮತದಾರರು(2013)

ಕ್ಷೇತ್ರದ ಮತದಾರರು(2013)

ಪುರುಷರು : 1,10,951

ಮಹಿಳೆಯರು : 1,06,967

ಒಟ್ಟು ಮತದಾರರು : 2,17,918

ಒಕ್ಕಲಿಗರ ಪ್ರಾಬಲ್ಯ

ಜಾತಿವಾರು ಮತಗಳ ಮಾಹಿತಿ

ಒಕ್ಕಲಿಗರು : 98,567

ದಲಿತರು : 44,344

ಮುಸ್ಲಿಮರು : 22,500

ಲಿಂಗಾಯತರು:18,500

ಕುರುಬರು :5600

ತಿಗಳರು :10500

ಕ್ರೈಸ್ತ ‌ :2507

ಬೆಸ್ತರು :6000

ಇತರೆ 9400

2018ರ ಜನ ಸಂಖ್ಯೆ ಮಾಹಿತಿ

2018ರ ಜನ ಸಂಖ್ಯೆ ಮಾಹಿತಿ

ಪುರುಷರು: 1,09,876

ಮಹಿಳೆಯರು: 1,10,504

ತೃತೀಯ ಲಿಂಗಿಗಳು: 11

ಒಟ್ಟು ಮತದಾರರು: 2,20,391

2018ರ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳು

2018ರ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳು

ಜೆಡಿಎಸ್: ಡಿ.ಎಂ‌.ವಿಶ್ವನಾಥ್ (ಸಂಭಾವ್ಯ ಅಭ್ಯರ್ಥಿ)

ಕಾಂಗ್ರೆಸ್: ಡಿ.ಕೆ.ಶಿವಕುಮಾರ್

ಬಿಜೆಪಿ: ‌ ನಂದಿನಿಗೌಡ (ಸಂಭಾವ್ಯ ಅಭ್ಯರ್ಥಿ)

ಡಿ.ಕೆ.ಶಿವಕುಮಾರ್ ಪ್ಲಸ್-ಮೈನಸ್

ಡಿ.ಕೆ.ಶಿವಕುಮಾರ್ ಪ್ಲಸ್-ಮೈನಸ್

ಪ್ಲಸ್

* ಪ್ರಬಲ ಎದುರಾಳಿಗಳೇ ಇಲ್ಲ

* ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು


ಮೈನಸ್

* ಅಕ್ರಮ ಗಣಿಗಾರಿಕೆ ಆರೋಪ ಮತ್ತು ಆದಾಯ ತೆರಿಗೆ ಇಲಾಖೆಯ ದಾಳಿ

* ರಿಪಬ್ಲಿಕ್ ಮಾದರಿ ಆಡಳಿತ ಹಾಗೂ ಸರ್ವಾಧಿಕಾರಿ ವರ್ತನೆ

English summary
Karnataka Assembly Elections 2018: Congress is very strong in Kanakapura assembly constituency, Ramanagara. Minister DK Shivakumar is very strong in this constituency. He is contesting for Karnataka assembly elections 2018 as Congress candidate. Nandini Gowda from BJP, DM Vishwanath from JDS likely to contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X