ಏಸು ಪ್ರತಿಮೆ ವಿರೋಧಿ ಹೋರಾಟಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಎಂಟ್ರಿ
ರಾಮನಗರ, ಜನವರಿ 06: ಕನಕಪುರ ತಾಲ್ಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಜಗತ್ತಿನ ಎತ್ತರದ ಏಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜನವರಿ 13 ರಂದು ಕನಕಪುರ ಚಲೋ ನಡೆಯಲಿದೆ. ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ನಡೆಯಲಿರುವ ಹೋರಾಟಕ್ಕೆ 10 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆ ಇದೇ ಎಂದು ಮುಖಂಡರು ಇಂದು ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ತಿಳಿಸಿದರು.
ಕಪಾಲ
ಬೆಟ್ಟದ
ಜಮೀನನ್ನು
ಭೂ
ರಹಿತ
ರೈತರಿಗೆ
ಹಂಚಿ
ಎಂದ
ಬಿಜೆಪಿ
ನಿಯೋಗ
ಕಪಾಲ
ಬೆಟ್ಟದಲ್ಲಿ
144
ಅಡಿ
ಎತ್ತರದ
ಏಸುವಿನ
ಪ್ರತಿಮೆ
ನಿರ್ಮಾಣ
ವಿಚಾರದಲ್ಲಿ
ಈಗಾಗಲೇ
ಸಾಕಷ್ಟು
ವಿರೋಧ
ವ್ಯಕ್ತವಾಗಿದೆ.
ಬಿಜೆಪಿ
ಸೇರಿದಂತೆ
ಹಲವು
ಸಂಘಟನೆಗಳ
ಮುಖಂಡರು
ಕಪಾಲ
ಬೆಟ್ಟದಲ್ಲಿ
ಏಸು
ಪ್ರತಿಮೆ
ನಿರ್ಮಾಣವಾಗುವುದನ್ನು
ವಿರೋಧ
ಮಾಡಿದ್ದಾರೆ
ಎಂದರು.
ಈ ಹೋರಾಟಕ್ಕೆ ರಾಮನಗರ ಜಿಲ್ಲೆ ಸೇರಿದಂತೆ ಮಂಡ್ಯ, ಬೆಂಗಳೂರು, ಮೈಸೂರು ಭಾಗಗಳ ಜನರು ನಮ್ಮ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. ಪ್ರಮುಖವಾಗಿ ಕಲ್ಲಡ್ಕ ಪ್ರಭಾಕರ್ ಭಟ್ವರು ನಮ್ಮ ಹೋರಾಟದಲ್ಲಿ ಭಾಗವಹಿಸಿ ಮುಖ್ಯ ಭಾಷಣ ಮಾಡಲಿದ್ದಾರೆಂದು ತಿಳಿಸಿದರು.
ಕ್ರೈಸ್ತ
ಪ್ರತಿಮೆಯನ್ನು
ನಾನು
ಪ್ರಬಲವಾಗಿ
ವಿರೋಧಿಸುತ್ತೇನೆ:
ಕಾಳಿಕಾ
ಸ್ವಾಮಿ
ಹಳೆ
ಮೈಸೂರು
ಪ್ರಾಂತ್ಯದಲ್ಲಿ
ಪ್ರಬಲರಾದ
ಒಕ್ಕಲಿಗ
ಸಮುದಾಯವನ್ನೇ
ಟಾರ್ಗೆಟ್
ಮಾಡಿ
ಕ್ರೈಸ್ತ
ಧರ್ಮಕ್ಕೆ
ಮತಾಂತರ
ಮಾಡುವ
ದೃಷ್ಟಿಯಿಂದ
ಕಪಾಲ
ಬೆಟ್ಟದಲ್ಲಿ
ಏಸು
ಪ್ರತಿಮೆ
ನಿರ್ಮಾಣ
ಮಾಡಲು
ಮುಂದಾಗಿದ್ದಾರೆ
ಎಂದು
ಆರೋಪಿಸಿದ್ದಾರೆ.
ಸರ್ಕಾರಿ ಜಾಗವನ್ನು ಅಕ್ರಮವಾಗಿ ಒಂದು ಟ್ರಸ್ಟ್ಗೆ ನೀಡಿರುವ ಬಗ್ಗೆ ನಾವು ಹೋರಾಟ ಮಾಡುವ ಜೊತೆಗೆ ಕಪಾಲ ಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಪ್ರತಿಮೆ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ ಎಂದು ಹಿಂದೂ ಜಾಗರಣೆ ಸದಸ್ಯರು ತಿಳಿಸಿದರು.