ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನಕ್ಕೆ ಬೇಡಿಕೆಯಿಟ್ಟ ಜೆಡಿಎಸ್
ರಾಮನಗರ, ಸೆಪ್ಟೆಂಬರ್ 8: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದ ಹಿನ್ನಲೆಯಲ್ಲಿ ನಾಲ್ಕು ಸ್ಥಾನ ಗಳಿಸಿರುವ ಜೆಡಿಎಸ್ ಈಗ ಕಿಂಗ್ ಮೇಕರ್ ಆಗಿದ್ದು, ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಎರಡು ರಾಷ್ಟ್ರೀಯ ಪಕ್ಷಗಳಿಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲ ಬೇಕೇ ಬೇಕು.
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಪಾತ್ರವಹಿಸಿರುವ ನಾಲ್ಕು ಜೆಡಿಎಸ್ ಸದಸ್ಯರು ಬುಧವಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ಬಿಡದಿ ಸಮೀಪದ ಕೇತುಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.
ಕಲಬುರಗಿ ಪಾಲಿಕೆಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ, ಗೆಲುವಿನ ನಗೆ ಬೀರಿರುವ ಪಾಲಿಕೆ ನೂತನ ಸದಸ್ಯರರಾದ ಕೃಷ್ಣಾರೆಡ್ಡಿ, ನಾಸೀರ್, ಅಲಿಮುದ್ದಿನ್ ಪಟೇಲ್ ಹಾಗೂ ಸಾಜಿತ್ ಕಲ್ಯಾಣಿ ನಾಲ್ಕು ಮಂದಿ ಎಚ್ಡಿಕೆಯವರೊಂದಿಗೆ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕೆಂಬ ಕುರಿತು ಮಾತುಕತೆ ನಡೆಸಿದರು. ಮಂಗಳವಾರವೇ ಕಲಬುರಗಿಯಿಂದ ವಿಮಾನ ಮೂಲಕ ಬೆಂಗಳೂರಿಗೆ ಆಗಮಿಸಿದ್ದ ಜೆಡಿಎಸ್ ಪಾಲಿಕೆ ಸದಸ್ಯರು, ಎರಡು ಇನ್ನೋವಾ ಕಾರುಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿಯಾಗಿ ಕೆಲ ಕಾಲ ಚರ್ಚೆ ನಡೆಸಿದ ನಂತರ ಮತ್ತೆ ಬೆಂಗಳೂರಿನತ್ತ ನಾಲ್ಕು ಕಾರ್ಪೊರೇಟರ್ಗಳು ಪ್ರಯಾಣ ಬೆಳೆಸಿದರು.
ಕುದುರೆ ವ್ಯಾಪಾರದ ಭೀತಿ
ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಪಾಲಿಕೆಯ ಅಧಿಕಾರ ಹಿಡಿಯುವಷ್ಟು ಸಂಖ್ಯಾಬಲ ಸಿಗದ ಹಿನ್ನಲೆಯಲ್ಲಿ ಆಪರೇಷನ್ ಕಮಲ ಹಾಗೂ ಆಪರೇಷನ್ ಹಸ್ತಕ್ಕೆ ಒಳಗಾಗಬಹುದು ಎನ್ನುವ ಆತಂಕದ ಹಿನ್ನೆಲೆಯಲ್ಲಿ ನಾಲ್ಕು ಸದಸ್ಯರನ್ನು ಜೆಡಿಎಸ್ ವರಿಷ್ಠರು ಬೆಂಗಳೂರಿನ ಗೌಪ್ಯ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿಯ ಸ್ಥಳೀಯ ಮುಖಂಡರು ನಮ್ಮನ್ನು ಸಂಪರ್ಕ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಸಂಗತಿಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಮನಕ್ಕೆ ಸದಸ್ಯರು ತಂದರೆನ್ನಲಾಗಿದೆ. ಈ ವೇಳೆ ಕುಮಾರಸ್ವಾಮಿ ನೀವು ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬೇಡಿ ಎಂದು ನಾಲ್ಕು ಸದಸ್ಯರುಗಳಿಗೆ ಕಿವಿಮಾತು ಸಹ ಹೇಳಿದ್ದಾರೆ.ಮೇಯರ್ ಗಾದಿಗೆ ಬೇಡಿಕೆಯಿಟ್ಟ ಜೆಡಿಎಸ್
ಕಲಬುರಗಿ
ಮಹಾನಗರ
ಪಾಲಿಕೆಯ
ಮೇಯರ್
ಗಾದಿ
ಜೆಡಿಎಸ್ಗೆ
ಬಿಟ್ಟುಕೊಡಬೇಕೆಂದು
ಕಾಂಗ್ರೆಸ್
ಮತ್ತು
ಬಿಜೆಪಿ
ಎರಡು
ಪಕ್ಷಗಳಿಗೆ
ಬೇಡಿಕೆ
ಇಟ್ಟಿದ್ದೇವೆ
ಎಂದು
ಜೆಡಿಎಸ್
ಅಲ್ಪಸಂಖ್ಯಾತ
ಘಟಕದ
ರಾಜ್ಯಾಧ್ಯಕ್ಷ
ನಾಸೀರ್
ಹುಸೇನ್
ಮಾಧ್ಯಮಗಳಿಗೆ
ತಿಳಿಸಿದರು.
ಮಹಾನಗರ
ಪಾಲಿಕೆ
ಈ
ನಾಲ್ಕು
ಸದಸ್ಯರೊಂದಿಗೆ
ಕುಮಾರಸ್ವಾಮಿಯವರನ್ನು
ಭೇಟಿ
ಮಾಡಿ,
ಚರ್ಚೆ
ನಡೆಸಿ
ಹೊರಬಂದ
ನಂತರ
ಮಾಧ್ಯಮಗಳೊಂದಿಗೆ
ಮಾತನಾಡಿದ
ನಾಸೀರ್
ಹುಸೇನ್,
ನಾವು
4
ಮಂದಿ
ಸದಸ್ಯರು
ಮಾಜಿ
ಸಿಎಂ
ಕುಮಾರಸ್ವಾಮಿಯವರನ್ನು
ಭೇಟಿಯಾಗಿ
ತಮ್ಮ
ಅನಿಸಿಕೆ,
ಅಭಿಪ್ರಾಯಗಳನ್ನು
ವ್ಯಕ್ತಪಡಿಸಿದ್ದೇವೆ
ಎಂದರು.
ನಮ್ಮ
ಪಕ್ಷದ
ಸದಸ್ಯರಿಗೆ
ಮೇಯರ್
ಹುದ್ದೆ
ನೀಡಿ
ಅಂತಾ
ನಾವು
ಬೇಡಿಕೆ
ಇಟ್ಟಿದ್ದೇವೆ,
ಕುಮಾರಸ್ವಾಮಿಯವರ
ಭೇಟಿ
ಸಮಯದಲ್ಲಿ
ಯಾವುದೇ
ಪಕ್ಷಕ್ಕೆ
ಬೆಂಬಲ
ಕೊಡುವ
ಬಗ್ಗೆ
ಚರ್ಚೆ
ಆಗಿಲ್ಲ,
ಅಂತ್ತಿಮ
ನಿರ್ಧಾರವನ್ನು
ನಮ್ಮ
ಪಕ್ಷದ
ವರಿಷ್ಠರು
ತೆಗೆದುಕೊಳ್ಳುತ್ತಾರೆ
ಎಂದು
ನೂತನ
ಕಲಬುರಗಿ
ಪಾಲಿಕೆ
ಸದಸ್ಯರು
ತಿಳಿಸಿದರು.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಪ್ರತಿಕ್ರಿಯೆ
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡುಬೇಕೆಂಬ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ನನ್ನ ಬಳಿ ಮಾತಾಡಿದ್ದಾರೆ. ಕುಮಾರಸ್ವಾಮಿ ಹತ್ತಿರವೂ ಮಾತಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
ಕಲಬುರಗಿ ಮಹಾನಗರ ವ್ಯಾಪ್ತಿಯ ಜೆಡಿಎಸ್ ಮುಖಂಡರ ಅಭಿಪ್ರಾಯ ಪಡೆಯದೇ ನಾವೇ ನಿರ್ಧಾರ ಮಾಡಬಾರದು ಎಂದು ಕುಮಾರಸ್ವಾಮಿಗೂ ಸೂಚಿಸಿದ್ದೇನೆ ಎಂದು ಜೆಡಿಎಸ್ ವರಿಷ್ಠರೂ ಹಾಗೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಪ್ರತಿಕ್ರಿಯಿಸಿದರು.27 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ದೊಡ್ಡ ಪಕ್ಷ
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಹಿಡಿತ ಸಾಧಿಸಲು ಬಿಜೆಪಿ ಪಕ್ಷಕ್ಕೆ ಜೆಡಿಎಸ್ ಬೆಂಬಲ ಅಗತ್ಯವಾಗಿದೆ. ಕಲಬುರಗಿಯ 55 ವಾರ್ಡ್ಗಳಲ್ಲಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದೇ ವೇಳೆ ಬಿಜೆಪಿ 23, ಜೆಡಿಎಸ್ ನಾಲ್ಕು ಗೆದ್ದಿದ್ದರೆ, ಒಬ್ಬ ಸ್ವತಂತ್ರ ಅಭ್ಯರ್ಥಿ ಜಯ ಗಳಿಸಿದ್ದಾನೆ. ಜೆಡಿಎಸ್ ಶಾಸಕರ ನಿಯೋಗವು ತಮ್ಮ ನಾಯಕ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿತ್ತು.
Recommended Video