ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಜೆಡಿಎಸ್ ಏನು 120 ಸ್ಥಾನ ಗೆಲ್ಲುತ್ತಾ? 30 ರಿಂದ 40 ಗೆಲ್ಲಬಹುದು'

By ರಾಮನಗರ ಪ್ರತಿನಿಧಿ
|
Google Oneindia Kannada News

Recommended Video

Karnataka Elections 2018 : ಎಚ್ ಡಿ ದೇವೇಗೌಡ ಬಗ್ಗೆ ಮಾತನಾಡಿದ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ

ರಾಮನಗರ, ಮಾರ್ಚ್ 16: ಜೆಡಿಎಸ್ 120 ಸ್ಥಾನ ಗೆಲ್ಲಲು ಸಾಧ್ಯವೇ? 30 ರಿಂದ 40 ರೊಳಗೆ ಗೆಲ್ಲಬಹುದು ಅಷ್ಟೇ. ಜೆಡಿಎಸ್ 30 ರಿಂದ 40 ಸ್ಥಾನ ಗೆದ್ದು, ಸರಕಾರ ರಚನೆ ಮಾಡಿ, ಕುಮಾರಸ್ವಾಮಿ ಅವರು ಅದು ಹೇಗೆ ಮುಖ್ಯಮಂತ್ರಿಗಳಾಗುತ್ತಾರೋ ಗೊತ್ತಿಲ್ಲ ಎಂದು ಜೆಡಿಎಸ್ ಭಿನ್ನಮತೀಯ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಮಾಗಡಿ ತಾಲೂಕಿನ ವರದೇನಹಳ್ಳಿ ಹ್ಯಾಂಡ್ ಪೋಸ್ಟ್‌ನಲ್ಲಿ ಬೆಸ್ಕಾಂ ವತಿಯಿಂದ ಆಯೋಜಿಸಿದ್ದ ಉಚಿತ ಟಿಸಿ ಅಳವಡಿಕೆ ಮತ್ತು ನಿರಂತರ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ಇಳಿದಾಗ ಅವರ ಕಾಲು ಹಿಡಿದು ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಿ, ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರೂ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ ಎಂದರು.

ನಾವು ಏಳೂ ಶಾಸಕರ ಮತ ಕಾಂಗ್ರೆಸ್ ಗೆ, ದೇವೇಗೌಡರಿಗೆ ಈಗ ನಮ್ಮ ನೆನಪುನಾವು ಏಳೂ ಶಾಸಕರ ಮತ ಕಾಂಗ್ರೆಸ್ ಗೆ, ದೇವೇಗೌಡರಿಗೆ ಈಗ ನಮ್ಮ ನೆನಪು

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರೆ ನಾನು ಮಂತ್ರಿಯಾಗುತ್ತಿದ್ದೆ. ಮಂತ್ರಿಯಾಗುತ್ತೇನೆ ಎಂದು ನನ್ನ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆಲ್ಲ ತಿಳಿಸಿದ್ದೆ. ನನ್ನ ದುರದೃಷ್ಟ ಸರಕಾರ ಅಸ್ತಿತ್ವಕ್ಕೆ ಬರಲಿಲ್ಲ, ನಾನು ಮಂತ್ರಿಯಾಗಲಿಲ್ಲ ಎಂದು ಶಾಸಕ ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.

ಯಾರೋ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡರೆ ನಾನು ಹೊಣೆಯಾಗಬೇಕಾ?

ಯಾರೋ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡರೆ ನಾನು ಹೊಣೆಯಾಗಬೇಕಾ?

ಇನ್ನು ಮಾಗಡಿಯ ಜೆಡಿಎಸ್ ಅಭ್ಯರ್ಥಿ ಎ.ಮಂಜು ಬೆಂಬಲಿಗರ ಮೇಲೆ ನಡೆದ ಹಲ್ಲೆ ಬಗ್ಗೆ ಮಾತನಾಡಿದ ಶಾಸಕರು, ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡರೆ ನಾನು ಹೊಣೆಯಾಗಬೇಕಾ? ಕುಡಿದು ಗಲಾಟೆ ಮಾಡಿಕೊಳ್ಳಿ ಎಂದು ನಾನು ಇವರಿಗೆ ಹೇಳಿದ್ದೇನಾ ಎಂದು ಪ್ರಶ್ನೆ ಮಾಡಿದರು.

ಮುಂದಿನ ಬಾರಿಯೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ

ಮುಂದಿನ ಬಾರಿಯೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ

ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ನೀಡಿರುವಷ್ಟು ಯೋಜನೆ ಯಾವ ಸರಕಾರವೂ ನೀಡಿಲ್ಲ. ಮುಂದಿನ ಬಾರಿಯೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು, ಜನತೆ ನನಗೂ ಆರ್ಶೀವಾದ ಮಾಡಿ ಎಂದು ಶಾಸಕ ಬಾಲಕೃಷ್ಣ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ನನ್ನನ್ನು ಸೋಲಿಸಲು ದೇವೇಗೌಡರು ಪಣ ತೊಟ್ಟಿದ್ದಾರೆ

ನನ್ನನ್ನು ಸೋಲಿಸಲು ದೇವೇಗೌಡರು ಪಣ ತೊಟ್ಟಿದ್ದಾರೆ

ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಹಲ್ಲೆಯಾಗಿದ್ದಕ್ಕೆ ಆಸ್ಪತ್ರೆಗೆ ಹೋಗಿ, ಬಾಲಕೃಷ್ಣನ ದೌರ್ಜನ್ಯ ಹೆಚ್ಚಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳುತ್ತಾರೆ. ಅದೇ ಯೋಧನೊಬ್ಬನ ಮೃತದೇಹ ಹಾಸನಕ್ಕೆ ಬಂದರೆ ಅಂತಿಮ ದರ್ಶನಕ್ಕೆ ಹೋಗಿಲ್ಲ. ಬಾಲಕೃಷ್ಣನನ್ನು ಸೋಲಿಸಲೇ ಬೇಕೆಂದು ದೇವೇಗೌಡರು ಪಣ ತೊಟ್ಟಿದ್ದಾರೆ ಎಂದರು.

ರಾಜ್ಯಮಟ್ಟದ ನಾಯಕರ ವಿರುದ್ಧ ಹೋರಾಡಲಿ

ರಾಜ್ಯಮಟ್ಟದ ನಾಯಕರ ವಿರುದ್ಧ ಹೋರಾಡಲಿ

ನಾನೊಬ್ಬ ಸಾಮಾನ್ಯ ಶಾಸಕ. ದೇವೇಗೌಡರು ಅವರ ಸರಿಸಮರಾದ ಸಿದ್ದರಾಮಯ್ಯ ಹಾಗೂ ರಾಜ್ಯ ಮಟ್ಟದ ನಾಯಕರ ವಿರುದ್ಧ ಹೋರಾಟ ಮಾಡಬೇಕು. ಅದನ್ನು ಬಿಟ್ಟು ನನ್ನ ಮೇಲೆ ಪ್ರಹಾರ ಮಾಡುವುದು ಸರಿಯಲ್ಲ ಎಂದು ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.

ಫೇಸ್‌ಬುಕ್, ವಾಟ್ಸ್‌ಆಪ್ ಚಕಮಕಿಯಿಂದ ಕೈ-ಕೈ ಮಿಲಾಯಿಸುವವರೆಗೆಫೇಸ್‌ಬುಕ್, ವಾಟ್ಸ್‌ಆಪ್ ಚಕಮಕಿಯಿಂದ ಕೈ-ಕೈ ಮಿಲಾಯಿಸುವವರೆಗೆ

English summary
JDS may win 30 to 40 seats in Karnataka assembly elections, said JDS rebel leader and Magadi MLA HC Balakrishna on Thursday. He also questioned HD Deve Gowda about verbal attack on JDS candidate assault issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X