ರಾಜ್ಯದ ಏಕೈಕ ರಣಹದ್ದು ತಾಣ ರಾಮದೇವರ ಬೆಟ್ಟದಲ್ಲಿ ರಣಹದ್ದು ಜಾಗೃತಿ ದಿನಾಚರಣೆ
ರಾಮನಗರ, ಸೆಪ್ಟೆಂಬರ್ 5: ರಾಜ್ಯದಲ್ಲೇ ಏಕೈಕ, ಅಪರೂಪದ ರಣಹದ್ದಿನ ತಾಣ ರಾಮದೇವರ ಬೆಟ್ಟದಲ್ಲಿ ಇಂದು ಅಂತರರಾಷ್ಟ್ರೀಯ ರಣಹದ್ದು ಜಾಗೃತಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಪರಿಸರ ಪ್ರೇಮಿಗಳು, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಹಾಗೂ ರಾಜ್ಯ ಅರಣ್ಯ ಇಲಾಖೆ ವತಿಯಿಂದ ಪ್ರಕೃತಿ ನಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಕೆಲವು ಮಂದಿ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Recommended Video
ನಗರದ ಹೊರವಲಯದಲ್ಲಿರುವ ಪುರಾಣ ಪ್ರಸಿದ್ಧ ರಾಮದೇವರ ಬೆಟ್ಟ ಉದ್ದಕೊಕ್ಕಿನ ರಣಹದ್ದಿಗೆ ಪ್ರಸಿದ್ಧಿ. ಆದರೆ ಸಾವಿರಾರು ಸಂಖ್ಯೆಯಲ್ಲಿದ್ದ ರಣಹದ್ದುಗಳು ಈಗ ಮಾನವನ ಅತಿಯಾಸೆ ಮತ್ತು ಅಜ್ಞಾನಕ್ಕೆ ಬಲಿಯಾಗಿವೆ.
ರಾಮನಗರದ ರಣಹದ್ದು, ರಾಮ ದೇಗುಲ, ವಾರಾಂತ್ಯದ ಚಾರಣ
ಜಾನುವಾರುಗಳಿಗೆ
ನೀಡುವ
ಡೈಕ್ಲೋಫೆನಾಕ್
ನಿಂದ
ರಣಹದ್ದುಗಳ
ಸಂತತಿ
ಬೆರಳೆಣಿಕೆಯಷ್ಟಾಗಿದೆ.
ಈ
ಕುರಿತು
ಅರಿವು
ಮೂಡಿಸುವ
ನಿಟ್ಟಿನಲ್ಲಿ
ಅಂತರರಾಷ್ಟ್ರೀಯ
ರಣಹದ್ದು
ಜಾಗೃತಿ
ದಿನವನ್ನು
ಹಮ್ಮಿಕೊಳ್ಳಲಾಗಿದೆ
ಎಂದು
ಪ್ರಾದೇಶಿಕ
ಅರಣ್ಯ
ಸಂರಕ್ಷಣಾಧಿಕಾರಿ
ಸದಾಶಿವ
ಹೆಗ್ಗಡೆ
ತಿಳಿಸಿದರು.
ಸಾಕಾರಗೊಳ್ಳದ ರಣಹದ್ದು ಬ್ರೀಡಿಂಗ್ ಸೆಂಟರ್: ಅಳಿವಿನಂಚಿನಲ್ಲಿರುವ ರಣಹದ್ದುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ರಾಮದೇವರ ಬೆಟ್ಟವನ್ನು ಸರ್ಕಾರ ರಣಹದ್ದು ವನ್ಯಧಾಮ ತಾಣ ಎಂದು ಘೋಷಿಸಿದೆ. ಕಳೆದ ವರ್ಷ ಇಲ್ಲಿ ರಣಹದ್ದು ಬ್ರೀಡಿಂಗ್ ಸೆಂಟರ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಈ ಯೋಜನೆ ಅನುಷ್ಠಾನಕ್ಕೆ ಬರದೇ ಇದ್ದುದು ಪಕ್ಷಿ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.
ಸರ್ಕಾರ
ಇದೀಗ
ರಣಹದ್ದು
ಸಂತಾನೋತ್ಪತ್ತಿ
ಕೇಂದ್ರ
ನಿರ್ಮಾಣದ
ಯೋಜನೆಯನ್ನು
ರಾಮನಗರದಿಂದ
ಬನ್ನೇರುಘಟ್ಟಕ್ಕೆ
ಸ್ಥಳಾಂತರ
ಮಾಡಲು
ಮುಂದಾಗಿರುವುದಕ್ಕೆ
ಪರಿಸರ
ಪ್ರೇಮಿಗಳಿಂದ
ವಿರೋಧ
ವ್ಯಕ್ತವಾಗಿದೆ.
ರಾಮನಗರದ
ರಾಮದೇವರ
ಬೆಟ್ಟದಲ್ಲೇ
ರಣಹದ್ದು
ಸಂತಾನೋತ್ಪತ್ತಿ
ಕೇಂದ್ರ
ತೆರೆದು
ಉದ್ದಕೊಕ್ಕಿನ
ರಣಹದ್ದುಗಳ
ಸಂತತಿ
ಉಳಿಸಬೇಕೆಂದು
ರಣಹದ್ದು
ಸಂರಕ್ಷಣಾ
ಟ್ರಸ್ಟ್
ನ
ಶಶಿಕುಮಾರ್
ಸರ್ಕಾರವನ್ನು
ಆಗ್ರಹಿಸಿದ್ದಾರೆ.