"ನನ್ನನ್ನು ಬೆಳೆಸಿದ ಕಾರ್ಯಕರ್ತರನ್ನು ದೇವರಂತೆ ಕಾಣುತ್ತೇನೆ; ಎಚ್ ಡಿಕೆ
ರಾಮನಗರ, ಅಕ್ಟೋಬರ್ 15: ದೇವರಿಗೆ ಎಷ್ಟು ಭಯ ಭಕ್ತಿಯಿಂದ ಕೈ ಮುಗಿಯುತ್ತೇನೋ, ಅಷ್ಟೇ ಗೌರವವನ್ನು, ನನ್ನನ್ನು ಬೆಳೆಸಿರುವ ಕಾರ್ಯಕರ್ತರ ಮೇಲೂ ಇಟ್ಟಿದ್ದೇನೆ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.
ರಾಜ್ಯದಲ್ಲಿ ನಡೆಯುತ್ತಿರುವ ಎರಡು ಉಪ ಚುನಾವಣೆಯ ಒತ್ತಡದ ನಡುವೆ ತಮ್ಮ ಜಿಲ್ಲೆಯ ಬಿಡದಿಯ ತೋಟದ ಮನೆಯಲ್ಲಿ ಕರೆದಿದ್ದ ಪ್ರಮುಖ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಹಲವು ಮುಖಂಡರು ಜೆಡಿಎಸ್ ಸೇರ್ಪಡೆಯಾದರು.
ಉಪ ಚುನಾವಣೆ ಬಿಡಿ, ಪ್ರವಾಹ ಪರಿಸ್ಥಿತಿ ನೋಡಿ; ಎಚ್ಡಿಕೆ
ಎರಡು ಉಪ ಚುನಾವಣೆಗಳ ಒತ್ತಡವಿದೆ. ಆದರೂ ನನ್ನನ್ನು ಬೆಳೆಸಿದ ಜಿಲ್ಲೆಯ ಜನರ ಕಷ್ಟ, ಸಮಸ್ಯೆಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ನಿನ್ನೆಯಿಂದ ನಾಲ್ಕು ದಿನಗಳ ಸರಣಿ ಸಭೆಗಳನ್ನು ಹಮ್ಮಿಕೊಂಡಿದ್ದೇನೆ. ಪ್ರತಿ ಹೋಬಳಿಯ ಕಾರ್ಯಕರ್ತರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳುತ್ತೇನೆ ಎಂದರು.
Recommended Video
ಮುಂದಿನ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಯಾರ ಹಂಗಿಲ್ಲದೇ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಪಕ್ಷವನ್ನು ಸಜ್ಜುಗೊಳಿಸಲು ಮುಂದಾಗಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.