ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೊಮ್ಮೆ ಮುಖ್ಯಮಂತ್ರಿ ಆಗೋ 'ಯೋಗ' ನನಗಿದೆ ಎಂದು ಹೇಳಿದ್ದಾರೆ: ಎಚ್ಡಿಕೆ

|
Google Oneindia Kannada News

ರಾಮನಗರ, ಮಾರ್ಚ್ 5: "ಹಿಂದೆ ಆರೋಗ್ಯವಾಗಿದ್ದೆ, ಹೆಚ್ಚು ಓಡಾಡುತ್ತಿದ್ದೆ. ಈಗ ಎರಡೆರಡು ಬಾರಿ ಚಿಕಿತ್ಸೆ ಆಗಿರುವುದರಿಂದ ಹಿಂದಿನ ಸ್ಪೀಡ್ ನನ್ನಲಿಲ್ಲ. ನನಗೂ ಅರವತ್ತು ವರ್ಷ ದಾಟಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

"ಹಿಂದೆ ಸಮಯ ಕೊಟ್ಟ ಹಾಗೆ, ಈಗ ನನಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಕಾರಣ ನನ್ನ ಆರೋಗ್ಯ. ನಾನೀಗ ಸೀನಿಯರ್ ಸಿಟಿಜನ್. ಕುಮಾರಸ್ವಾಮಿಯವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಯಡಿಯೂರಪ್ಪ ಬಜೆಟ್; ಎಚ್ ಡಿ ಕುಮಾರಸ್ವಾಮಿ ಏನಂದ್ರು?ಯಡಿಯೂರಪ್ಪ ಬಜೆಟ್; ಎಚ್ ಡಿ ಕುಮಾರಸ್ವಾಮಿ ಏನಂದ್ರು?

"ಇವತ್ತು ನಿಮ್ಮೆಲ್ಲರ ಆಶೀರ್ವಾದದಿಂದ ಈ ಮಟ್ಟಕ್ಕೆ ಬಂದಿದ್ದೇನೆ. ನಿಮ್ಮಂತಹ ತಂದೆ ತಾಯಿಗಳು ನನ್ನ ಮೇಲೆ ಇಟ್ಟ ನಂಬಿಕೆಗೆ ನಾನು ಎಂದೂ ದ್ರೋಹ ಬಗೆದವನಲ್ಲ" ಎಂದು ಎಚ್ಡಿಕೆ ಹೇಳಿದ್ದಾರೆ.

I Have A Confidence That I Will Become CM Again: HD Kumaraswamy

"ನನ್ನ ತಂದೆ ದೇವೇಗೌಡರನ್ನು ಮತ್ತು ನನ್ನನ್ನು ಪ್ರೀತಿಯಿಂದ ಕಾಣುತ್ತಿರುವಂತಹ ಲಕ್ಷಾಂತರ ಜನರಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎನ್ನುವ ವಿಶ್ವಾಸ ನನ್ನಲಿದೆ" ಎನ್ನುವ ಭರವಸೆಯ ಮಾತನ್ನು ಕುಮಾರಸ್ವಾಮಿ ಆಡಿದ್ದಾರೆ.

"ಆರೋಗ್ಯ ಕ್ಷೇತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನ ಸಾಕಾಗುವುದಿಲ್ಲ. ಆದರಲ್ಲಿ ಆಸ್ಪತ್ರೆಗಳಿಗೆ ಸುಣ್ಣ ಬಣ್ಣ ಬಳಿಯುವುದಕ್ಕೂ ಸಾಧ್ಯವಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಚನ್ನಪಟ್ಟಣದಿಂದಲೇ ಗೆದ್ದು ಮತ್ತೆ ಸಿಎಂ ಆಗುತ್ತೇನೆ: ಎಚ್ಡಿಕೆಚನ್ನಪಟ್ಟಣದಿಂದಲೇ ಗೆದ್ದು ಮತ್ತೆ ಸಿಎಂ ಆಗುತ್ತೇನೆ: ಎಚ್ಡಿಕೆ

"ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಯೋಜನೆಗಳನ್ನ ಮುಂದುವರಿಸಲಾಗಿದೆ. ಅಲ್ಲದೆ ಈ ಬಾರಿ ಮಂಡಿಸಲಾದ ಘೋಷಣೆಗಳಲ್ಲಿ ಸ್ಪಷ್ಟತೆ ಇಲ್ಲ. ಬಿಜೆಪಿಯವರಿಂದ ಹೊಸ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ" ಎಂದು ಕುಮಾರಸ್ವಾಮಿ ತಿಳಿಸಿದರು.

English summary
I Have A Confidence That I Will Become CM Again: HD Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X