ರಾಮನಗರದಲ್ಲೂ ಹೈ ಅಲರ್ಟ್; ಪ್ರವಾಸಿ ತಾಣ, ಬಸ್ ನಿಲ್ದಾಣಗಳಲ್ಲಿ ತಪಾಸಣೆ
ರಾಮನಗರ, ಆಗಸ್ಟ್ 17: ಉಗ್ರರು ನುಸುಳಿರುವ ಶಂಕೆಯಿಂದ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಹೈ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲೂ ಎಚ್ಚರಿಕೆ ರವಾನಿಸಲಾಗಿದೆ.
ಉಗ್ರರ ದಾಳಿಯ ಎಚ್ಚರಿಕೆ: ಉತ್ತರ ಕನ್ನಡ ಜಿಲ್ಲೆಯಲ್ಲಿ 'ಹೈ ಅಲರ್ಟ್' ಘೋಷಣೆ
ಕೇಂದ್ರ ಗುಪ್ತಚರ ದಳದ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಕಡೆ ಎಚ್ಚರಿಕೆಯನ್ನು ರವಾನಿಸಲಾಗಿದ್ದು, ರಾಮನಗರದಲ್ಲೂ ನಾಲ್ಕು ತಾಲ್ಲೂಕುಗಳ ಪ್ರಮುಖ ಪ್ರವಾಸಿ ತಾಣಗಳು, ಸರಕಾರಿ ಬಸ್ ನಿಲ್ದಾಣಗಳಲ್ಲಿ ತಪಾಸಣೆ ನಡೆಯುತ್ತಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿ ತಪಾಸಣೆ ಕಾರ್ಯ ಕೈಗೊಂಡಿದ್ದಾರೆ.
ಉಗ್ರರ ಕುರಿತು ಗುಪ್ತಚರ ವರದಿ: ಮಂಗಳೂರಿನಲ್ಲಿಯೂ ಕಟ್ಟೆಚ್ಚರ
ವರ್ಷದ ಹಿಂದೆ ರಾಮನಗರದಲ್ಲಿ ಉಗ್ರ ಮುನೀರ್ ಶೇಖ್ ಸೆರೆ ಸಿಕ್ಕಿದ್ದನು. ಅಲ್ಲದೇ ಎರಡು ಜೀವಂತ ಬಾಂಬ್ ಗಳು ಕೂಡ ರಾಮನಗರದಲ್ಲಿ ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಇಂದು ರಾಮನಗರ ಜಿಲ್ಲೆಯಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿ ತಪಾಸಣೆ ಕೈಗೊಂಡಿದ್ದಾರೆ.
Comments
English summary
The high alert has been issued in Ramanagar district as several cities including Bangalore due to militants intrusion.
Story first published: Saturday, August 17, 2019, 17:42 [IST]