ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಕಪುರ ಬಳಿ ನೀರಿನ ತೊಟ್ಟಿಗೆ ಬಿದ್ದಿದ್ದ ಚಿರತೆ ರಕ್ಷಣೆ

By ರಾಮನಗರ ಪ್ರತಿನಿಧಿ
|
Google Oneindia Kannada News

ಕನಕಪುರ, ಏಪ್ರಿಲ್ 01: ಆಹಾರ ಅರಸಿ ನಾಡಿಗೆ ಬಂದು, ನೀರಿನ ತೊಟ್ಟಿಯಲ್ಲಿ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಕನಕಪುರ ತಾಲ್ಲೂಕಿನ ಕೆರಳಾಳುಸಂದ್ರ ಗ್ರಾಮದ ತೋಟದ ನೀರಿನ ಟ್ಯಾಂಕ್ ನಲ್ಲಿ ಇಂದು ಚಿರತೆಯೊಂದು ಬಿದ್ದಿತ್ತು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆ ಮೇಲೆ ಬರಲು ನೀರಿನ ತೊಟ್ಟಿಗೆ ಬಲೆ ಹಾಗೂ ಮರದ ದಿಮ್ಮಿ ಇಳಿಬಿಟ್ಟರು. ಬಲೆ ಸಹಾಯದಿಂದ ಮೇಲೆ ಬಂದ ಚಿರತೆ ಕಾಡಿನತ್ತ ದೌಡಾಯಿಸಿತು.

Forest Department Rescued Leopard From Water Tank In Kanakapura

 ತಿ.ನರಸೀಪುರದ ತಂಬಲದಲ್ಲಿ ಮತ್ತೊಂದು ಚಿರತೆ ಬೋನಿಗೆ ತಿ.ನರಸೀಪುರದ ತಂಬಲದಲ್ಲಿ ಮತ್ತೊಂದು ಚಿರತೆ ಬೋನಿಗೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಿಳಿಕಲ್ ಅರಣ್ಯ ಪ್ರದೇಶದ ಸನಿಹದ ಕೆರಳಾಳುಸಂದ್ರ ಗ್ರಾಮದ ಹೋಟೆಲ್ ನ ತೋಟದ ನೀರಿನ ಟ್ಯಾಂಕ್ ನಲ್ಲಿ ಚಿರತೆ ಬಿದ್ದಿದ್ದು, ವಿಷಯ ತಿಳಿದು ಸ್ಥಳಕ್ಕೆ ಕನಕಪುರ ತಾಲ್ಲೂಕು ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದರು. ಡಿಎಫ್ ಒ ದೇವರಾಜ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಚಿರತೆಯನ್ನು ರಕ್ಷಿಸಲಾಯಿತು.

English summary
Forest department staff has rescued leopard which fell into water tank near keralalugrama of kanakapura
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X