ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುತೂಹಲ ಕೆರಳಿಸಿದ ಡಿಕೆ ಶಿವಕುಮಾರ್ -ನಿತ್ಯಾನಂದ ಸ್ವಾಮೀಜಿ ಭೇಟಿ

By Mahesh
|
Google Oneindia Kannada News

Recommended Video

ಡಿ ಕೆ ಶಿವಕುಮಾರ್ ನಿತ್ಯಾನಂದ ಸ್ವಾಮೀಜಿಯನ್ನ ಭೇಟಿ ಮಾಡಿರುವ ಫೋಟೋಗಳು ವೈರಲ್ | Oneindia Kannada

ಬಿಡದಿ, ಏಪ್ರಿಲ್ 20: ಇಂಧನ ಸಚಿವ, ಕನಕಪುರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್ ಹಾಗೂ ಮಾಗಡಿ ಶಾಸಕ ಎಚ್. ಸಿ ಬಾಲಕೃಷ್ಣ ಅವರು ಇತ್ತೀಚೆಗೆ ಬಿಡದಿಯ ಶ್ರೀನಿತ್ಯಾನಂದ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿದ್ದರು. ನಿತ್ಯಾನಂದ ಸ್ವಾಮೀಜಿ ಅವರ ಜತೆ ಕೆಲ ಕಾಲ ಮಾತುಕತೆ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಮತಯಾಚನೆ ಸಂದರ್ಭದಲ್ಲಿ ಎಲ್ಲಾ ಆಶ್ರಮ, ಮನೆ ಮಠಗಳಿಗೆ ತೆರಳಬೇಕಾಗುತ್ತದೆ. ಅದೇ ರೀತಿ ಬಿಡದಿ ಆಶ್ರಮಕ್ಕೆ ಬಂದು ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಕೇಳಿಕೊಳ್ಳಲಾಗಿದೆ ಎಂದರು.

Elections 2018 : DK Shivakumar meets Nithyananada Swamiji Bidadi Ashram

ಇಂಧನ ಸಚಿವ ಡಿ.ಕೆ. ಶಿವಕುಮಾರ್​ ಅವರು ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮೀಜಿ ಅವರಿಗೆ ಶಾಲು ಹೊದೆಸಿ, ಗೌರವ ನೀಡಿದ ಚಿತ್ರಗಳನ್ನು ಆಶ್ರಮದವರು ಫೇಸ್ ಬುಕ್ ನಲ್ಲಿ ಹಾಕಿದ್ದು, ಈಗ ಸಾಮಾಜಿಕ ಜಾಲ ತಾಣಗಳ ಮೂಲೆ ಮೂಲೆ ತಲುಪುತ್ತಿವೆ.

ಡಿಕೆ ಶಿವಕುಮಾರ್ ಆಸ್ತಿ ವಿವರ ಬಹಿರಂಗಡಿಕೆ ಶಿವಕುಮಾರ್ ಆಸ್ತಿ ವಿವರ ಬಹಿರಂಗ

ಡಿ.ಕೆ ಶಿವಕುಮಾರ್​​ ಕೂಡ ಕನಕಪುರ ಕ್ಷೇತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಿತ್ಯಾನಂದ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್ ಮ್ಯಾಜಿಕ್ ನಂಬರ್(113 ಪ್ಲಸ್) ಸುಲಭವಾಗಿ ದಾಟಲಿದೆ, ಅಧಿಕಾರ ಉಳಿಸಿಕೊಳ್ಳುತ್ತೀರಾ ಎಂದು ಡಿಕೆಶಿ ಅವರನ್ನು ಹರಿಸಿದ್ದಾರೆ ಎಂಬ ಮಾತುಗಳು ಹರಡಿವೆ. ಏನಾಗುವುದೋ ಕಾದು ನೋಡಬೇಕಿದೆ.

English summary
Elections 2018 : Energy Minister, Kanakapura Congress candidate DK Shivakumar and Magadi condidate HC Balakrishna visited Bidadi ashram and had discussion with Nithyananda Swamiji and seeks his blessings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X