ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸಿಎಂ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಂಸದ ಡಿ.ಕೆ ಸುರೇಶ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 4: ""ಅವನಿಗೆ ಪಂಚಾಯತಿ ಎಂದರೆ ಏನು ಅಂತಾ ಗೊತ್ತಿಲ್ಲ'' ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.

ಶುಕ್ರವಾರ ರಾಮನಗರದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಗ್ರಾಮ ಸ್ವರಾಜ್ಯ ಅಂದರೆ ಗೊತ್ತಿದೆಯೋ ಇಲ್ಲವೋ, ಮೊದಲು ಅದನ್ನ ಮೊದಲು ಅರ್ಥ ಮಾಡಿಕೊಳ್ಳಲಿ. ನರೇಗಾ ತಂದಿದ್ದು ಪ್ರಧಾನಿ ಮೋದಿನಾ ಎಂದು ಪ್ರಶ್ನೆ ಮಾಡಿದರು.

ಡಿಕೆ ಬ್ರದರ್ಸ್‌ಗೆ ಎಚ್ಚರಿಕೆ ಕೊಟ್ಟ ಡಿಸಿಎಂ ಅಶ್ವತ್ಥ ನಾರಾಯಣ್ಡಿಕೆ ಬ್ರದರ್ಸ್‌ಗೆ ಎಚ್ಚರಿಕೆ ಕೊಟ್ಟ ಡಿಸಿಎಂ ಅಶ್ವತ್ಥ ನಾರಾಯಣ್

ಗ್ರಾಮ ಸ್ವರಾಜ್ಯ ಏನು ಅನ್ನೋದು ಅವರಿಗೆ ಗೊತ್ತಿಲ್ಲ, ಸುಮ್ಮನೆ ಭಾಷಣ ಮಾಡುತ್ತಾರೆ. ಇವರು ಉಪ ಮುಖ್ಯಮಂತ್ರಿಗಳಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ಕಡಿದು ಕಟ್ಟೆ ಹಾಕಿರೋದು ಏನು ಎಂದು ಪ್ರಶ್ನಿಸಿದರು.

Ramanagara: DK Suresh Expressed Outrage On DCM Ashwath Narayana

ಕಳೆದ ಒಂದೂವರೆ ವರ್ಷದಿಂದ ಏನ್ ಮಾಡಿದ್ದಾರೆ ಇವರು. ಕಾರ್ಯಕರ್ತರನ್ನು ಹುರಿದುಂಬಿಸಲು ಭಾಷಣ ಮಾಡುತ್ತಿದ್ದಾರೆ, ಒಂದಷ್ಟು ಜನರನ್ನು ಹಿಡಿಯಬೇಕು ಅದಕ್ಕೆ ಕಷ್ಟಪಡುತ್ತಿದ್ದಾರೆ, ಒಳ್ಳೆಯದಾಗಲಿ ಎಂದು ಡಿ.ಕೆ ಸುರೇಶ್ ಕುಟುಕಿದರು.

Recommended Video

ಸ್ತಬ್ದವಾಗತ್ತಾ ಕರ್ನಾಟಕ | Oneindia Kannada

ಇನ್ನು ಬಿಜೆಪಿಗೆ ಬಹುಮತ ನೀಡಿದರೆ ಪ್ರತಿ ಪಂಚಾಯತಿಗೆ 1.5 ಕೋಟಿ ಅನುದಾನ ನೀಡುವುದಾಗಿ ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ.ಸುರೇಶ್, ಪ್ರತಿ ಪಂಚಾಯತಿಗೆ ಕೇವಲ 5 ಲಕ್ಷ ನೀಡುವ ಯೋಗ್ಯತೆ ಇಲ್ಲ ಇವರಿಗೆ. ರಾಮನಗರ ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ 250 ಕೋಟಿ ರೂ. ಹಣ ಖರ್ಚು ಮಾಡಿದ್ದಾರಂತೆ. ಏನ್ ಡಿಸಿಎಂ ಬಂದ್ಮೇಲೆ ಹಣ ಖರ್ಚು ಮಾಡಿದ್ದಾರಾ ಎಂದು ವ್ಯಂಗ್ಯವಾಡಿದರು.

English summary
Ramanagara: Bengaluru Rural MP DK Suresh criticized DCM Dr Ashwath Narayan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X