ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ಯಾಂಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೂರು: ಡಿಕೆಶಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಆಗಸ್ಟ್ 22: ರಾಜ್ಯದ ಯಾವ ಡ್ಯಾಂ ಗಳು ಬಿರುಕು ಬಿಟ್ಟಿಲ್ಲ. ಅದೆಲ್ಲವೂ ಕೇವಲ ಸುಳ್ಳು ಸುದ್ದಿ ಅಷ್ಟೇ. ಈ ಬಗ್ಗೆ ವಂದತಿ ಹಬ್ಬಿಸಿದವರ ವಿರುದ್ಧ ಸೈಬರ್ ಕ್ರೈಮ್ ಗೂ ಕೂಡ ದೂರು ನೀಡಲಾಗಿದೆ. ಇದೇ ವಿಚಾರವಾಗಿ ಸಿಎಂ ವರದಿ ಕೇಳಿದ್ದರು. ಅವರಿಗೂ ಕೂಡ ರಿಪೋರ್ಟ್ ನೀಡಿದ್ದೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೊಡಗಿನಲ್ಲಿ ರಣಮಳೆಯಿಂದ ಕಂಗೆಟ್ಟ ನೆರೆಸಂತ್ರಸ್ತರಿಗೆ ರಾಮನಗರ ಜಿಲ್ಲಾಡಳಿತದಿಂದ ಸಹಾಯಹಸ್ತ ಚಾಚಲಾಗಿದ್ದು, ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಿಂದ 5 ಕ್ಯಾಂಟರ್ ನಲ್ಲಿ ಅಗತ್ಯ ಆಹಾರ ಹಾಗೂ ಔಷಧಿ ಪದಾರ್ಥಗಳನ್ನು ಕಳುಹಿಸುತ್ತಿದ್ದು, ಕೊಡಗಿನ ಕಡೆಗೆ ಪಯಣ ಬೆಳೆಸಿದ ವಾಹನಗಳಿಗೆ ಡಿ.ಕೆ.ಶಿವಕುಮಾರ್ ಹಸಿರು ಬಾವುಟ ತೋರಿಸಿ ಚಾಲನೆ ಕೊಟ್ಟರು.

ಭಾರಿ ಮಳೆಯಿಂದ ಕರ್ನಾಟಕದ ಹಲವು ಜಲಾಶಯಗಳಲ್ಲಿ ಬಿರುಕುಭಾರಿ ಮಳೆಯಿಂದ ಕರ್ನಾಟಕದ ಹಲವು ಜಲಾಶಯಗಳಲ್ಲಿ ಬಿರುಕು

ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

DK Shivakumar said complaint has been lodged against the false news

ಇದೇ ಸಂದರ್ಭದಲ್ಲಿ ಕೊಡಗಿನ ಮಳೆ ಅವಾಂತರದ ಬಗ್ಗೆ ಮಾತನಾಡಿದ ಡಿಕೆಶಿ, ಸಂತ್ರಸ್ತರಿಗೆ ರಾಮನಗರ ಜಿಲ್ಲೆಯಿಂದಲೂ ಹಲವು ಖಾಸಗಿ ಕಂಪನಿಗಳು, ಕಾರ್ಖಾನೆಗಳು ಹಾಗೂ ಸಾರ್ವಜನಿಕರು ಸಹಾಯ ಮಾಡಿದ್ದಾರೆ.

ಹಾರಂಗಿ ಡ್ಯಾಮ್ ಒಡೆದಿಲ್ಲ, ಕೊಡಗಿನಲ್ಲಿ ಭೂಕಂಪವಾಗಲ್ಲ: ಸಿಎಂ ಟ್ವೀಟ್ಹಾರಂಗಿ ಡ್ಯಾಮ್ ಒಡೆದಿಲ್ಲ, ಕೊಡಗಿನಲ್ಲಿ ಭೂಕಂಪವಾಗಲ್ಲ: ಸಿಎಂ ಟ್ವೀಟ್

ಈಗಾಗಲೇ ನೆರೆಯಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಮುಖ್ಯವಾಗಿ ಅವರಿಗೆ ಶಾಶ್ವತವಾಗಿ ಪರಿಹಾರ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

English summary
Minister DK Shivakumar said that state dams have not cracked. All that's just false news. A complaint has been lodged against the false news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X