ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಸಂಬಂಧದ ಗಲಾಟೆಯಲ್ಲಿ 75 ವರ್ಷದ ವೃದ್ಧರ ಕೊಲೆಯಾಯಿತಾ?

By ರಾಮನಗರ ಪ್ರತಿನಿಧಿ
|
Google Oneindia Kannada News

ಮಾಗಡಿ (ರಾಮನಗರ ಜಿಲ್ಲೆ), ಜುಲೈ 26: ಹಾಡಹಗಲೇ ವೃದ್ಧರೊಬ್ಬರನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಮಾಗಡಿ ತಾಲೂಕಿನ ಮೋಟಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬದಕಲ್ಲು ಬಳಿಯ ಜಮಿನಿನಲ್ಲಿ ನಡೆದಿದೆ.

ಮಾಗಡಿ ತಾಲೂಕಿನ ಕೊತ್ತಗಾನಹಳ್ಳಿ ಗ್ರಾಮದ ನಿವಾಸಿ ನಡುಕೆರಯ್ಯ (75) ಕೊಲೆಯಾದವರು. ಕಂಬದಕಲ್ಲಿನ ಬಳಿ ಇರುವ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಇವರಿಗೆ ಮೂವರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದು, ಎಲ್ಲರಿಗೂ ವಿವಾಹವಾಗಿದೆ.

ಸಹೋದ್ಯೋಗಿ ಸೇನಾಧಿಕಾರಿ ಪತ್ನಿ ಜತೆ ಅನೈತಿಕ ಸಂಬಂಧ, ಕೋರ್ಟ್ ವಿಚಾರಣೆಸಹೋದ್ಯೋಗಿ ಸೇನಾಧಿಕಾರಿ ಪತ್ನಿ ಜತೆ ಅನೈತಿಕ ಸಂಬಂಧ, ಕೋರ್ಟ್ ವಿಚಾರಣೆ

ಶುಕ್ರವಾರ ಬೆಳಗ್ಗೆ ನಡುಕೆರಯ್ಯ ಹಾಗೂ ಅವರ ಪತ್ನಿ ಕೆಂಪಮ್ಮ ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಇವರಿಗೆ ಬದು ನಿರ್ಮಿಸಲು ಸಹಾಯ ಮಾಡಿದ್ದ. ಆ ನಂತರ ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಅಪರಿಚಿತ ವ್ಯಕ್ತಿ ಕುಡುಗೋಲಿನಿಂದ ನಡುಕೆರಯ್ಯ ಅವರ ಕತ್ತು ಹಾಗೂ ಬುರುಡೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದಾರೆ.

Did 75 year old Nadukeraiah murdered in illicit relationship quarrel?

ಆ ನಂತರ ನಡುಕೇರಯ್ಯ ಅವರ ಪತ್ನಿ ಕೆಂಪಮ್ಮ ಮೇಲೂ ಕುಡುಗೋಲಿನಿಂದ ಹಲ್ಲೆ ನಡೆಸಿ, ಕಿವಿಯಲ್ಲಿದ್ದ ಚಿನ್ನದ ಗುಂಡು, ಮಾಂಗಲ್ಯದ ಸರ ಹಾಗೂ ಕಾಲಿನ ಚೈನ್ ಸೇರಿದಂತೆ ಸುಮಾರು 70 ಸಾವಿರ ರುಪಾಯಿ ಬೆಲೆ ಬಾಳುವ ಒಡವೆಗಳನ್ನು ಕಸಿದುಕೊಂಡ ನಂತರ, "ಈ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ನಿನ್ನನ್ನು ಕೊಲೆ ಮಾಡುವೆ" ಎಂದು ಬೆದರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಅಕ್ರಮ ಸಂಬಂಧ ಒಪ್ಪದ ಯುವತಿಗೆ ಇರಿದ ಆರೋಪಿ ತಾನೂ ಕತ್ತು ಕುಯ್ದುಕೊಂಡ ಅಕ್ರಮ ಸಂಬಂಧ ಒಪ್ಪದ ಯುವತಿಗೆ ಇರಿದ ಆರೋಪಿ ತಾನೂ ಕತ್ತು ಕುಯ್ದುಕೊಂಡ

ಹಲ್ಲೆಗೊಳ್ಳಗಾದ ಕೆಂಪಮ್ಮ ಸುಮಾರು 2 ಕಿ.ಮೀ. ನಡೆದು, ಗ್ರಾಮದ ಬಳಿ ಬಂದವರು ಅಪರಿಚಿತ ವ್ಯಕ್ತಿ ತನ್ನ ಪತಿಯನ್ನು ಕೊಲೆ ಮಾಡಿದ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದರು. ಸ್ಥಳಕ್ಕೆ ಧಾವಿಸಿದ ತಾವರೆಕೆರೆ ಪೊಲೀಸರು ಸ್ಥಳ ಹಾಗೂ ಶವದ ಪರಿಶೀಲನೆ ನಡೆಸಿದರು. ಆ ನಂತರ ಮೃತ ನಡುಕೆರಯ್ಯನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು, ಮೃತನ ಸಂಬಂಧಿಕರ ಹೇಳಿಕೆ ಪಡೆದು, ಎಫ್‍ ಐಆರ್ ದಾಖಲಿಸಿದ್ದಾರೆ.

Did 75 year old Nadukeraiah murdered in illicit relationship quarrel?

ಅಕ್ರಮ ಸಂಬಂಧ ಶಂಕೆ
ಮೃತ ನಡುಕೆರಯ್ಯ ಅವರ ಮಗ ಬೆಂಗಳೂರಿನ ಉಲ್ಲಾಳದ ಯುವತಿಯೊಬ್ಬಳನ್ನು ವಿವಾಹವಾಗಿದ್ದ. ಈ ಯುವತಿಯು ಕೊತ್ತಗಾನಹಳ್ಳಿಯ ಯುವಕನೊಬ್ಬನೊಂದಿಗೆ ಆಕ್ರಮ ಸಂಬಂಧವ ಇಟ್ಟುಕೊಂಡಿದ್ದು, ನಡುಕೆರಯ್ಯ ಹಾಗೂ ಅವರ ಪತ್ನಿಯ ಗಮನಕ್ಕೆ ಬಂದಿತ್ತು.

ಈ ಬಗ್ಗೆ ಮನೆಯಲ್ಲಿ ಹಲವು ಬಾರಿ ಗಲಾಟೆ ನಡೆದಿದ್ದು, 4 ತಿಂಗಳ ಹಿಂದೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಸಹ ದಾಖಲಿಸಲಾಗಿತ್ತು ಎಂದು ಮೃತರ ಸಂಬಂಧಿಕರು ತಿಳಿಸಿದ್ದು, ಕೊಲೆಗೆ ಈ ಘಟನೆಯೂ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.

English summary
75 year old Nadekeraiah murdered in Ramanagar on Friday. There is a doubt about illicit relationship quarrel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X