ಮೋದಿ, ಶಾ, ರಾಜ್ಯಪಾಲರ ಭಾವಚಿತ್ರಕ್ಕೆ ಉಗಿದು ದಲಿತರ ಪ್ರತಿಭಟನೆ
Recommended Video
ಮೋದಿ,
ಶಾ,
ರಾಜ್ಯಪಾಲರ
ಭಾವಚಿತ್ರಕ್ಕೆ
ಉಗಿದು
ದಲಿತರ
ಪ್ರತಿಭಟನೆ
|
Oneindia
Kannada
ರಾಮನಗರ, ಮೇ. 18 : ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡದ ರಾಜ್ಯಪಾಲರು ಮತ್ತು ಬಿಜೆಪಿ ನಾಯಕರ ವಿರುದ್ಧ ಚನ್ನಪಟ್ಟಣದಲ್ಲಿ ದಲಿತ ಮುಖಂಡರು ಶುಕ್ರವಾರ ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ ದಲಿತ ಸಂಘಟನೆಯ ಕಾರ್ಯಕರ್ತರು ಎಲೆ ಅಡಕೆ ಜಗಿದು ಮೋದಿ, ಅಮಿತ್ ಶಾ ಮತ್ತು ರಾಜ್ಯಪಾಲ ವಜುಬಾಯಿ ವಾಲ ಅವರುಗಳ ಭಾವಚಿತ್ರಕ್ಕೆ ಉಗಿಯುವ ಮೂಲಕ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ನಡೆದ ತುರುಸಿನ ರಾಜಕೀಯ ಬೆಳವಣಿಗೆಗಳ ವಿವರ
ಸಂವಿಧಾನದ ಅಶಯವನ್ನು ಧಿಕ್ಕರಿಸಿರುವ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಇತರ ನಾಲ್ಕು ರಾಜ್ಯಗಳಿಗೆ ಒಂದು ನ್ಯಾಯ. ಕರ್ನಾಟಕಕ್ಕೆ ಮತ್ತೊಂದು ನ್ಯಾಯ.
117 ಸಂಖ್ಯಾಬಲವಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವನ್ನು ಸರ್ಕಾರ ರಚನೆಗೆ ಆಹ್ವಾನ ಮಾಡದೆ, 104 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿ ಸಂವಿಧಾನದ ಕಗ್ಗೋಲೆ ಮಾಡಿದ್ದಾರೆ ಎಂದು ಆರೋಪಿಸಿದರು.
Comments
karnataka election results 2018 karnataka assembly elections 2018 karnataka governor dalit protest ramanagara ಕರ್ನಾಟಕ ವಿಧಾನಸಭೆ ಚುನಾವಣೆ 2018 ಕರ್ನಾಟಕ ರಾಜ್ಯಪಾಲ ಪ್ರತಿಭಟನೆ ದಲಿತರು ರಾಮನಗರ
English summary
Karnataka Election Results 2018: Dalit Leaders in Chandanapattana launched a new protest. During the protest time they spit to Modi, Shah, and the governor's portrait