ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಪುಟ ವಿಸ್ತರಣೆಗೆ ಮುನ್ನವೇ ಚನ್ನಪಟ್ಟಣದಲ್ಲಿ ರಾರಾಜಿಸುತ್ತಿವೆ ಸಿಪಿವೈ ಪರ ಬ್ಯಾನರ್

By ರಾಮನಗರ ಪ್ರತಿನಿಧಿ
|
Google Oneindia Kannada News

ಚನ್ನಪಟ್ಟಣ, ಫೆಬ್ರವರಿ 05: ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ಒಂದು ದಿನ ಬಾಕಿ ಇದೆ. ಆದರೆ ಈ ಮೊದಲೇ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಭಾವಚಿತ್ರ ಹಾಕಿ ನೂತನ ಸಚಿವರಿಗೆ ಶುಭಾಶಯಗಳು ಎಂಬ ಬ್ಯಾನರ್ ಗಳು ಪಟ್ಟಣದ ತುಂಬೆಲ್ಲಾ ರಾರಾಜಿಸುತ್ತಿವೆ.

ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ಫಿಕ್ಸ್ ಅನ್ನುತಿದ್ದಂತೆ ಸಿಪಿವೈ ಅಭಿಮಾನಿಗಳು ಭರ್ಜರಿ ಸೆಲೆಬ್ರೇಷನ್ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹೀಗಾಗೇ ನೂತನ ಸಚಿವರಿಗೆ ಅಭಿನಂದನೆ ಕೋರುವ ಬ್ಯಾನರ್ ಗಳು ನಗರದ ರಸ್ತೆಗಳಲ್ಲಿ ತುಂಬಿಕೊಂಡಿವೆ.

CP Yogeshwar Banners In Channapatna Before Cabinet Expansion

"ಸೋತ ಯೋಗೇಶ್ವರ್ ಗೆ ಮಂತ್ರಿಗಿರಿ"; ಚರ್ಚೆಗೆ ಕಾರಣವಾದ ರೇಣು ಟ್ವೀಟ್

ಮತ್ತೊಂದೆಡೆ ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲು ಮೂಲ ಬಿಜೆಪಿಗರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಿಪಿವೈಗೆ ಸಚಿವ ಸ್ಥಾನ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಗೊಂದಲದ ನಡುವೆಯೇ ಬೆಂಬಲಿಗರು ಸಿದ್ಧತೆಯನ್ನೂ ನಡೆಸುತ್ತಿದ್ದಾರೆ.

English summary
one day is pending for the State government cabinet expansion. But earlier to this, CP Yogeshwar followers put banners of him at streets in channapatna
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X