ಕಾರಿನ ಗಾಜು ಒಡೆದು 3 ಲಕ್ಷ ರೂ, ದೋಚಿದ ಕಳ್ಳರು
ರಾಮನಗರ, ಜನವರಿ 08: ಹಾಡುಹಗಲೇ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು 3 ಲಕ್ಷ ರುಪಾಯಿಯನ್ನು ಕಳ್ಳರು ದೋಚಿದ್ದಾರೆ.
ಚನ್ನಪಟ್ಟಣ ನಗರದ ವಿವೇಕಾನಂದ ಬಡಾವಣೆ ನಿವಾಸಿ ಬಸವರಾಜೇ ಅರಸ್ ಎಂಬುವರು ಹಣ ಕಳೆದುಕೊಂಡವರು. ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದ ಕಾರಣ ಸ್ನೇಹಿತರಿಂದ 3 ಲಕ್ಷ ರೂ, ಹಣ ಸಾಲ ಪಡೆದುಕೊಂಡು ಬಂದಿದ್ದರು.
ಅಪಘಾತದಿಂದ ಗಾಯಗೊಂಡಿದ್ದ ಎಎಸ್ಐ ಚಿಕಿತ್ಸೆ ಫಲಕಾರಿಯಾಗದೆ ಸಾವು
ಅವಸರದಲ್ಲಿ ಕಾರಿನಲ್ಲೇ ಹಣದ ಬ್ಯಾಗ್ ಇಟ್ಟು ಮನೆ ಒಳಗೆ ಹೋದದನ್ನು ಕಾದುಕೊಂಡಿದ್ದ ಕಳ್ಳರು ಕೂಡಲೇ ಕಾರಿನ ಗಾಜು ಒಡೆದು ಹಣ ಲಪಟಾಯಿಸಿದ್ದಾರೆ.
ಬಸವರಾಜೇ ಅರಸ್ ಸ್ನೇಹಿತರಿಂದ ಹಣ ಪಡೆದು ಮನೆಗೆ ಬರುತ್ತಿದ್ದ ಕಾರನ್ನೇ ಹಿಂಬಾಲಿಸಿ ಬಂದಿದ್ದ ನಾಲ್ಕು ಜನ ಕಳ್ಳರು ಕೈಚಳಕ ತೋರಿದ್ದಾರೆ. ಈ ಸಂಬಂಧ ಚನ್ನಪಟ್ಟಣ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೋಲೀಸರು ಘಟನೆ ನಡೆದ ಸ್ಥಳದ ಸುತ್ತಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
Comments
English summary
3 Lakh Rupees were grabbed from a car parked in front of the house in Channapatna.
Story first published: Wednesday, January 8, 2020, 18:07 [IST]