ಚನ್ನಪಟ್ಟಣದಲ್ಲಿ ಕ್ಯಾಂಟರ್ ಡಿಕ್ಕಿ: ಸ್ಥಳದಲ್ಲೇ 12 ವರ್ಷದ ಬಾಲಕ ಸಾವು
ರಾಮನಗರ, ಮೇ 24: ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಬಾಲಕನಿಗೆ ಹಾಲಿನ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ಮತ್ತೀಕೆರೆ ಗ್ರಾಮದಲ್ಲಿ ನಡೆದಿದೆ.
Recommended Video
ಬಸ್
ನಿಲ್ದಾಣದಲ್ಲೇ
ಟಿಕೆಟ್
ವಿತರಿಸಿ
ರಾಮನಗರದಿಂದ
ಬೆಂಗಳೂರಿಗೆ
ಬಸ್
ಪ್ರಯಾಣ
|
Ramanagar
to
Bangalore
ಚನ್ನಪಟ್ಟಣ ತಾಲ್ಲೂಕಿನ ಮತ್ತೀಕೆರೆ ಗ್ರಾಮದ ಮಯೂರ್ ಗೌಡ (12) ಅಪಘಾತದಲ್ಲಿ ಮೃತಪಟ್ಟ ದುರ್ವೈವಿ ಬಾಲಕ. ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲಿ ನಿಂತಿದ್ದ ಬಾಲಕನಿಗೆ ಹಾಲಿನ ಕ್ಯಾಂಟರ್ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕ ಮಯೂರ್ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಲಾಕ್
ಡೌನ್
ಯಶಸ್ವಿ:
ರಾಮನಗರದ
ರೇಷ್ಮೆ
ಮಾರುಕಟ್ಟೆ
ಸ್ಥಗಿತ
ಭಾನುವಾರದ
ಲಾಕ್
ಡೌನ್
ನಿಂದಾಗಿ
ವಾಹನ
ಸಂಚಾರ
ಇಲ್ಲದ
ಕಾರಣ
ಬಾಲಕ
ಹೆದ್ದಾರಿ
ಪಕ್ಕದಲ್ಲಿ
ನಿಂತಿದ್ದ.
ಘಟನೆ
ನಡೆದ
ಪಕ್ಕದ
ಗ್ರಾಮ
ಬೈರಾಪಟ್ಟಣದ
ಚಿಲ್ಲಿಂಗ್
ಸೆಂಟರ್
ಗೆ
ಹಾಲಿನ
ಕ್ಯಾಂಟರ್
ತೆರಳುತಿತ್ತು.
ಹೆದ್ದಾರಿಯಲ್ಲಿ
ವಾಹನ
ಇಲ್ಲದ
ಕಾರಣ
ಕ್ಯಾಂಟರ್
ಚಾಲಕನ
ಅತೀ
ವೇಗವೇ
ಘಟನೆಗೆ
ಕಾರಣ
ಎನ್ನಲಾಗಿದೆ.
ಇನ್ನು ಈ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಹಾಲಿನ ಕ್ಯಾಂಟರ್ ಚಾಲಕನನ್ನು ಬಂಧಿಸಿ, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Comments
ramanagara accident boy died highway police kannada news channapattana ರಾಮನಗರ ಅಪಘಾತ ಬಾಲಕ ಸಾವು ಹೆದ್ದಾರಿ ಪೊಲೀಸ್ ಕನ್ನಡ ಸುದ್ದಿ ಚನ್ನಪಟ್ಟಣ
English summary
A milk canter collision to boy, he standing beside the highway, Boy died on the spot.This incident that Happened in Mathikere village of Channapatna taluk.