ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ: ಅಭ್ಯರ್ಥಿ ಕೈಕೊಟ್ಟರು ಬಿಜೆಪಿಯ ಪ್ರಚಾರ ನಿಂತಿಲ್ಲ! ಏನೀ ತಂತ್ರ?

|
Google Oneindia Kannada News

ರಾಮನಗರ, ನವೆಂಬರ್ 02: ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮರ್ಮಾಘಾತವನ್ನು ಅವರ ಅಭ್ಯರ್ಥಿ ನೀಡಿದ್ದಾರೆ. ಚುನಾವಣೆ ಒಂದು ದಿನ ಇದ್ದಾಗ ಅಭ್ಯರ್ಥಿ ಎಲ್‌.ಚಂದ್ರಶೇಖರ್ ಕಾಂಗ್ರೆಸ್‌ ತೆಕ್ಕೆಗೆ ಸೇರಿಕೊಂಡಿದ್ದಾರೆ. ಆದರೆ ರಾಮನಗರ ಬಿಜೆಪಿ ಕಾರ್ಯಕರ್ತರು ಛಲ ಬಿಟ್ಟಿಲ್ಲ.

ದೀಪಾವಳಿ ವಿಶೇಷ ಪುರವಣಿ

ಹೌದು, ಅಭ್ಯರ್ಥಿ ಕೈಕೊಟ್ಟರೇನಂತೆ ಕಾರ್ಯಕರ್ತರು ತಮ್ಮ ಛಲ ಬಿಟ್ಟಿಲ್ಲ, ಅಭ್ಯರ್ಥಿ ಇಲ್ಲದಿದ್ದರೂ ಬಿಜೆಪಿ ಪರ ಪ್ರಚಾರವನ್ನು ನಿಲ್ಲಿಸಿಲ್ಲ.

ಉಪಚುನಾವಣೆ: ಬಿಜೆಪಿಗೆ ಭರ್ಜರಿ ಶಾಕ್‌ ಕೊಟ್ಟ ಡಿ.ಕೆ.ಬ್ರದರ್ಸ್‌ ಉಪಚುನಾವಣೆ: ಬಿಜೆಪಿಗೆ ಭರ್ಜರಿ ಶಾಕ್‌ ಕೊಟ್ಟ ಡಿ.ಕೆ.ಬ್ರದರ್ಸ್‌

ನಿನ್ನೆಗೆ ಬಹಿರಂಗ ಪ್ರಚಾರ ಅಂತ್ಯವಾಗಿರುವ ಕಾರಣ ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹೊಸ ಕರಪತ್ರಗಳನ್ನು ಹಿಡಿದು ಮನೆ-ಮನೆಗೆ ಹೋಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಅಭ್ಯರ್ಥಿಗೆ ಬೇಡ ಬಿಜೆಪಿ ಪಕ್ಷವನ್ನು ನೋಡಿ ಮತ ಹಾಕಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಅಭ್ಯರ್ಥಿ ಎಲ್.ಚಂದ್ರಶೇಖರ್ ಕೈಕೊಡುತ್ತಿದ್ದಂತೆ ರಾತ್ರೋರಾತ್ರಿ ಹೊಸ ಕರಪತ್ರಗಳನ್ನು ಅಚ್ಚು ಮಾಡಿಸಿರುವ ರಾಮನಗರ ಬಿಜೆಪಿ, ಅಭ್ಯರ್ಥಿ ಚಿತ್ರದ ಜಾಗದಲ್ಲಿ ಬಿಜೆಪಿಯ ಚಿಹ್ನೆ ಕಮಲದ ಚಿಹ್ನೆ, ಅಭ್ಯರ್ಥಿ ಹೆಸರಿನ ಜಾಗದಲ್ಲಿ 'ದೇಶ ಮೊದಲು' ಎಂದು ಮುದ್ರಿಸಿ ಮತ ಕೇಳುತ್ತಿದೆ.

ಚಂದ್ರಶೇಖರ್‌ ಮೇಲೆ ಭಾರಿ ಆಕ್ರೋಶ

ಚಂದ್ರಶೇಖರ್‌ ಮೇಲೆ ಭಾರಿ ಆಕ್ರೋಶ

ಮತದಾನ ಎರಡು ದಿನ ಇದ್ದಾಗ ಕೈಕೊಟ್ಟ ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ಮೇಲೆ ರಾಮನಗರ ಬಿಜೆಪಿ ಕಾರ್ಯಕರ್ತರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ್‌ ಅವರ ಪ್ರತಿಕೃತಿ ದಹಿಸಿದ್ದಾರೆ, ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದಾರೆ. ಅಣಕು ಶವಯಾತ್ರೆ ನಡೆಸಿದ್ದಾರೆ.

ರಾಜ್ಯ ಬಿಜೆಪಿ ಮೇಲೂ ಆಕ್ರೋಶ

ರಾಜ್ಯ ಬಿಜೆಪಿ ಮೇಲೂ ಆಕ್ರೋಶ

ರಾಜ್ಯ ಬಿಜೆಪಿ ಮೇಲೂ ರಾಮನಗರ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರಿದ್ದರೂ ಸಹ ಹೊರಗಿನಿಂದ (ಕಾಂಗ್ರೆಸ್‌) ಬಂದ ವ್ಯಕ್ತಿಗೆ ಟಿಕೆಟ್‌ ನೀಡಿದ ರಾಜ್ಯ ಬಿಜೆಪಿ ನಿರ್ಣಯಕ್ಕೂ ರಾಮನಗರ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂದ್ರಶೇಖರ್ ಬಿಜೆಪಿ ತೊರೆಯೋದು ಬಿಎಸ್ ವೈಗೆ ಮೊದಲೇ ಗೊತ್ತಿತ್ತಾ?!ಚಂದ್ರಶೇಖರ್ ಬಿಜೆಪಿ ತೊರೆಯೋದು ಬಿಎಸ್ ವೈಗೆ ಮೊದಲೇ ಗೊತ್ತಿತ್ತಾ?!

ನೋಟಾ ಪರವಾಗಿಯೂ ಕೆಲವರ ಪ್ರಚಾರ

ನೋಟಾ ಪರವಾಗಿಯೂ ಕೆಲವರ ಪ್ರಚಾರ

ಬಿಜೆಪಿಯ ಕೆಲವು ಕಾರ್ಯಕರ್ತರು ಮತದಾನದಂದು ನೋಟಾ ಬಟನ್‌ ಪ್ರಯೋಗಿಸುವಂತೆಯೂ ಪ್ರಚಾರ ಮಾಡುತ್ತಿದ್ದಾರೆ. ಸುಪ್ರಿಂ ಕೋರ್ಟ್‌ ಅನ್ವಯ ನೋಟಾಕ್ಕೆ ಬಹುಮತ ಬಂದರೆ ಮತದಾರರ ಆಯ್ಕೆ ಗೌರವಿಸಿ ಅಲ್ಲಿ ಮರು ಚುನಾವಣೆ ಮಾಡಲಾಗುವುದಿಲ್ಲ. ಆದರೆ ನೋಟಾಕ್ಕೆ ಬಹುಮತ ಬರುವುದು ಅತ್ಯಂತ ಕಷ್ಟ ಸಾಧ್ಯ.

ನೋಟಾ ಬಹುಮತವಾದರೆ ಮರು ಚುನಾವಣೆ ಇಲ್ಲನೋಟಾ ಬಹುಮತವಾದರೆ ಮರು ಚುನಾವಣೆ ಇಲ್ಲ

ಕಣದಲ್ಲಿ ಉಳಿದಿದ್ದು ಒಬ್ಬರೇ

ಕಣದಲ್ಲಿ ಉಳಿದಿದ್ದು ಒಬ್ಬರೇ

ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರು ಕಣದಿಂದ ಹಿಂದೆ ಸರಿದಂತೆ ಪ್ರಸ್ತುತ ರಾಮನಗರ ಉಪಚುನಾವಣೆ ಕಣದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಅವರು ಮಾತ್ರವೇ ಕಣದಲ್ಲಿ ಉಳಿದಿರುವ ಮುಖ್ಯ ಅಭ್ಯರ್ಥಿ ಹಾಗಾಗಿ ಅವರ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

ಬಿಜೆಪಿಗೆ ಕೈಕೊಟ್ಟ ಚಂದ್ರಶೇಖರ್ ನಡೆಯ ಬಗ್ಗೆ ಯಾರು, ಏನಂದರು?ಬಿಜೆಪಿಗೆ ಕೈಕೊಟ್ಟ ಚಂದ್ರಶೇಖರ್ ನಡೆಯ ಬಗ್ಗೆ ಯಾರು, ಏನಂದರು?

English summary
BJP Ramanagara candidate pulls him off from the by election before the voting bu BJP did not quit campaign in Ramanagar. Party workers asking vote for BJP and NOTA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X