ಎಸಿಪಿ ಸಹೋದರಿ ಮನೆ ದರೋಡೆ ಮಾಡಿದ್ದ ಆರೋಪಿಗಳ ಬಂಧನ
ರಾಮನಗರ, ಮಾರ್ಚ್ 19: ಮಾರ್ಚ್ 8 ರಂದು ಹಾಡಹಗಲೇ ಚನ್ನಪಟ್ಟಣ ನಗರದ ಕೆ.ಹೆಚ್.ಬಿ ಬಡಾವಣೆ ಎಸಿಪಿ ಗೋಪಾಲ್ ರವರ ತಂಗಿ ಸುವರ್ಣ ಹುತ್ತೇಶ್ ಮನೆಗೆ ನುಗ್ಗಿದ ದರೋಡೆಕೊರರು ಸುವರ್ಣ ಮತ್ತು ಮಗಳಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ರಾಮನಗರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಮನಗರ ಎಸ್ಪಿ ಅನೂಪ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದ ಪ್ರಮುಖ ಆರೋಪಿ ರಮೇಶ್ ಅಲಿಯಾಸ್ ಜಾಕಿ ಪೋಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೋಲೀಸರು ಆತ್ಮ ರಕ್ಷಣೆಗೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ, ಆರೋಪಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದರು.
ದರೋಡೆ
ನಡೆದಿದ್ದ
ಎಸಿಪಿ
ಸಹೋದರಿ
ಮನೆಗೆ
ಐಜಿ
ಶರತ್
ಚಂದ್ರ
ಭೇಟಿ
ಪ್ರಮುಖ ಆರೋಪಿ ರಮೇಶ್ ನ ಸಹಚರರಾದ ಪ್ರಜ್ವಲ್, ಮಧು ಮತ್ತು ನೆಲ್ಸನ್ ಎಂಬುವರರನ್ನು ಬಂಧಿಸಿರುವ ಪೋಲೀಸರು, ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಒಂದು ಮಾರುತಿ ಸ್ವಿಫ್ಟ್ ಡಿಸೈರ್ ಕಾರು, ಮಾರಕಾಸ್ತ್ರಗಳು, 4.10 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದ್ದು, ಚನ್ನಪಟ್ಟಣದ ಎರಡು, ಬೆಂಗಳೂರಿನ ಪರಪ್ಪನ ಅಗ್ರಹಾರದ ಒಂದು ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ದರೋಡೆ ಬದಲಿಗೆ ಸುಪಾರಿ ಪಡೆದು ರೌಡಿ ಶೀಟರ್ ಲಕ್ಷ್ಮಣ್ ಹತ್ಯೆಗೆ ಸಪೋರ್ಟ್ ಮಾಡಿದ್ದ ಚನ್ನಪಟ್ಟಣದ ಮತ್ತೊಬ್ಬ ರೌಡಿಶೀಟರ್ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿದ್ದರು. ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದ್ದು, ಈ ಸಮಯದಲ್ಲಿ ಚನ್ನಪಟ್ಟಣದ ರೌಡಿ ಶೀಟರ್ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೋಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ತಿಳಿಸಿದರು.