ರಾಮನಗರದಲ್ಲಿ ಕ್ರಿಮಿನಾಶಕ ಇಂಜೆಕ್ಷನ್ ಕೊಟ್ಟು ಪತ್ನಿ ಕೊಲೆ ಮಾಡಿದ ಪತಿ
ರಾಮನಗರ, ಜನವರಿ 15 : ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ವಿಕೃತ ಮನಸ್ಸಿನ ಪತಿ ಆಕೆಗೆ ವಿಷದ ಇಂಜೆಕ್ಷನ್ ಕೊಟ್ಟು ಮನೆಯಲ್ಲಿಯೇ ಉಸಿರುಗಟ್ಟಿಸಿ ಸಾಯಿಸಿರುವ ವಿಲಕ್ಷಣ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರದ ಹನುಮಂತನಗರ ಮನೆಯೊಂದರಲ್ಲಿ ವಾಸವಾಗಿದ್ದ ಕೊಳಮಾರನಕುಪ್ಪೆ ಮೂಲದ ದೀಪಾ (22) ಎಂಬಾಕೆಯೇ ಕೊಲೆಯಾಗಿರುವ ದುರ್ದೈವಿ. ದೀಪಾಳನ್ನ ವಡ್ಡರದೊಡ್ಡಿಯ ವೆಂಕಟೇಶ ಎಂಬಾತನೊಂದಿಗೆ ವಿವಾಹ ಮಾಡೊಕೊಡಲಾಗಿತ್ತು. ವೆಂಕಟೇಶ ಅನುಮಾನದ ಪಿಶಾಚಿಯಂತೆ ವರ್ತಿಸುತ್ತಿದ್ದ ಅಲ್ಲದೆ ಮಾನಸಿಕ ಹಾಗೂ ದೈಹಿಕವಾಗಿಯೂ ಹಿಂಸಿಸುತ್ತಿದ್ದ ಎನ್ನಲಾಗಿದೆ.
ಅಪಘಾತದಿಂದ ಗಾಯಗೊಂಡಿದ್ದ ಎಎಸ್ಐ ಚಿಕಿತ್ಸೆ ಫಲಕಾರಿಯಾಗದೆ ಸಾವು
ಸರ್ಕಾರಿ ಆಸ್ಪತ್ರೆಯಲ್ಲಿ ದಿನಗೂಲಿ ನೌಕರನಾಗಿರುವ ವೆಂಕಟೇಶನಿಗೆ ಅಕ್ರಮ ಸಂಭಂದವಿತ್ತು ಎನ್ನಲಾಗಿದೆ. ಇದು ದೀಪಾಳ ಗಮನಕ್ಕೆ ಬಂದಿದ್ದು, ಅದನ್ನ ತನ್ನ ಕುಟುಂಬಸ್ಥರಿಗೆ ತಿಳಿಸುವ ಬೆದರಿಕೆ ಹಾಕಿದ್ದರಿಂದ ವೆಂಕಟೇಶ್ ಹೆದರಿದ್ದಾನೆ.
ಹೀಗಾಗಿ ವೆಂಕಟೇಶ ಪರ್ಟಿಲೈಸರ್ ಅಂಗಡಿಯಿಂದ (ಕ್ರಿಮಿನಾಶಕ)ವಿಷದ ಬಾಟಲಿ ತಂದು ಅದನ್ನ ಬೇರೆ ಬಾಟಲಿಗೆ ಹಾಕಿ ತನ್ನ ಹೆಂಡತಿ ದೀಪಾಳಿಗೆ ಇಂಜೆಕ್ಷನ್ ಕೊಟ್ಟಿದ್ದಾನೆ. ಹಾಗೂ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ತನಗೇನು ಗೊತ್ತಿಲ್ಲ ಎನ್ನುವಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಹುಷಾರಿಲ್ಲ ಎಂದು ಹಾಸಿಗೆ ಮೇಲೆ ಡ್ರಿಪ್ಸ್ ಹಾಕಿಸಿಕೊಂಡು ಮಲಗಿ ನಾಟಕವಾಡಿದ್ದಾನೆ.
ಕಾರಿನ ಗಾಜು ಒಡೆದು 3 ಲಕ್ಷ ರೂ, ದೋಚಿದ ಕಳ್ಳರು
ಆರೋಪಿ ವೆಂಕಟೇಶ್ ನನ್ನು ಪೋಲೀಸರು ಎಷ್ಟೇ ವಿಚಾರಿಸಿದರೂ ಚಾಲಾಕಿ ವೆಂಕಟೇಶ ಬಾಯಿಬಿಟ್ಟಿರಲಿಲ್ಲ. ಕಡೆಗೆ ಅನುಮಾನದಿಂದಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ತಾನೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಮೃತ ದೀಪಾಳ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟುತ್ತಿತ್ತು. ಈ ಸಂಬಂಧ ಐಜೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.