ದರ್ಗಾ ತಲುಪುವ ಮೊದಲೇ ಜವರಾಯನ ಅಟ್ಟಹಾಸಕ್ಕೆ ಯುವಕ ಬಲಿ
Recommended Video
ರಾಮನಗರ, ಜೂನ್. 18 : ರಸ್ತೆಯ ಪಕ್ಕದ ವಿದ್ಯುತ್ ಕಂಬ ತುಂಡಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಮನಗರದ ಮುತ್ತಯ್ಯನಕಟ್ಟೆ ಗ್ರಾಮದ ಬಳಿ ಭಾನುವಾರ ನಡೆದಿದೆ.
ವಿದ್ಯುತ್ ಕಂಬದ ಅಡಿ ಸಿಲುಕಿ ಮೃತಪಟ್ಟ ಯುವಕ ರಾಮನಗರದ ನಿವಾಸಿ ಇಸ್ಮಾಯಿಲ್( 22). ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಹಂಚಿಕುಪ್ಪೆ ಗ್ರಾಮದಲ್ಲಿರುವ ದರ್ಗಾಕ್ಕೆ ತೆರಳುವ ಸಮಯದಲ್ಲಿ ದುರ್ಘಟನೆ ನಡೆದಿದೆ.
ಬೆಳಗಾವಿ: ತಮಾಷೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ
ಇನ್ನು ಕೇವಲ ಅರ್ಧ ಕಿಲೋಮೀಟರ್ ಕ್ರಮಿಸಿದ್ದರೆ ದರ್ಗಾ ತಲುಪುತ್ತಿದ್ದ ದುರ್ದೈವಿ ಯುವಕ. ಆದರೆ ದರ್ಗಾ ತಲುಪುವ ಮೊದಲೇ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ.
ಮಾಗಡಿ ರಸ್ತೆಯಲ್ಲಿ ವೀರೇಗೌಡನ ದೊಡ್ಡಿ ಹಾಗೂ ಅತ್ತಿಂಗೆರೆ ಮಧ್ಯ ಭಾಗದಲ್ಲಿರುವ ಮುತ್ತಯ್ಯನ ಕಟ್ಟೆಯ ಬಳಿ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬದ ಬುಡದ ಮಣ್ಣು ಸತತ ಮಳೆಯಿಂದ ಸಡಿಲವಾಗಿದ್ದ ಕಾರಣ ವಿದ್ಯುತ್ ಕಂಬ ತುಂಡಾಗಿ ರಸ್ತೆಯ ಮೇಲೆ ಬಿದ್ದಿದೆ.
ಅದೇ ಸಮಯಕ್ಕೆ ಸರಿಯಾಗಿ ದರ್ಗಾಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಇಸ್ಮಾಯಿಲ್ ಮೇಲೆ ಬಿದ್ದಿದೆ. ಹಬ್ಬದ ಸಂಭ್ರಮದಲ್ಲಿದ್ದ ಇಸ್ಮಾಯಿಲ್ ಕುಟುಂಬ ಮಗನ ಸಾವಿನಿಂದ ಕಣ್ಣೀರಿಡುತ್ತಾ ಶೋಕಸಾಗರದಲ್ಲಿ ಮುಳುಗಿದೆ.