ರಾಮನಗರ: ಸರ್ಕಾರಿ ಬಾಲ ಮಂದಿರದಿಂದ 7 ಬಾಲಕಿಯರು ಪರಾರಿ
ರಾಮನಗರ, ಜುಲೈ 15: ಸರ್ಕಾರಿ ಬಾಲ ಮಂದಿರದ ರಕ್ಷಣೆಯಲ್ಲಿದ್ದ 7 ಬಾಲಕಿಯರು ಪರಾರಿಯಾಗಿರುವ ಘಟನೆ ರಾಮನಗರದ ಮಲ್ಲೇಶ್ವರ ಬಡಾವಣೆಯಲ್ಲಿರುವ ಬಾಲ ಮಂದಿರದಲ್ಲಿ ನಡೆದಿದೆ.
Recommended Video
ನಗರದ ಮಲ್ಲೇಶ್ವರ ಬಡಾವಣೆಯಲ್ಲಿ ಕೆಲ ದಿನಗಳ ಹಿಂದೆ ಸ್ಥಳಾಂತರಗೊಂಡಿದ್ದ ಬಾಲ ಮಂದಿರದಿಂದ 8 ಬಾಲಕಿಯರು ನಿನ್ನೆ ರಾತ್ರಿ 11 ಗಂಟೆ ವೇಳೆಯಲ್ಲಿ ಬಾಲಮಂದಿರದ ಮೇಲ್ಛಾವಣಿ ಹತ್ತಿ ಪರಾರಿಯಾಗಿದ್ದಾರೆ.
ಕೊರೊನಾ ವೈರಸ್ ಭೀತಿ: ಸ್ವಯಂ ಲಾಕ್ ಡೌನ್ ಗೆ ಶರಣಾದ ಮಾಗಡಿ
ತಕ್ಷಣವೇ ಎಚ್ಚೆತ್ತ ಪೊಲೀಸರು ಹಾಗೂ ಬಾಲ ಮಂದಿರದ ಸಿಬ್ಬಂದಿ ಓರ್ವ ಬಾಲಕಿಯನ್ನು ಸ್ವಲ್ಪ ದೂರದಲ್ಲಿ ಪತ್ತೆ ಮಾಡಿದ್ದು, ಇನ್ನುಳಿದ ಏಳು ಬಾಲಕಿಯರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಇನ್ನು ಬಾಲಕಿಯರು ಪರಾರಿಯಾಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾದ ಬಾಲಕಿಯರ ಪತ್ತೆಗೆ ಮುಂದಾಗಿದ್ದಾರೆ.
ರಾಮನಗರ: ಪಿಪಿಇ ಕಿಟ್ ಧರಿಸಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಡಿ.ಕೆ ಸುರೇಶ್
ಈ ಹಿಂದೆ ಬಾಲ ಮಂದಿರವು ಬೆಂಗಳೂರು-ಮೈಸೂರು ಹೆದ್ದಾರಿ ವಂದಾರಗುಪ್ಪೆ ಗ್ರಾಮದ ಬಳಿ ಇದ್ದಾಗ ಎರಡು ಬಾರಿ ಬಾಲಕಿಯರು ಪರಾರಿಯಾಗಲು ಯತ್ನಿಸಿ ವಿಫಲರಾಗಿದ್ದರು. ಇದೇ ಕಾರಣಕ್ಕಾಗಿ ಬಾಲ ಮಂದಿರವನ್ನು ಮಲ್ಲೇಶ್ವರ ಬಡವಾಣೆಗೆ ಸ್ಥಳಾಂತರ ಮಾಡಲಾಗಿತ್ತು. ಈ ಬಾರಿ ವಾರ್ಡನ್ ಕಣ್ತಪ್ಪಿಸಿ ಬಾಲಕಿಯರು ಎಸ್ಕೇಪ್ ಆಗಿದ್ದಾರೆ.