ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಯಲ್ಲಿ ಮಲಗಿದ್ದ ಮಗುವನ್ನು ಎಳೆದೊಯ್ದು ಕೊಂದು ತಿಂದ ಚಿರತೆ

|
Google Oneindia Kannada News

ರಾಮನಗರ, ಮೇ 9: ಮನೆಯಲ್ಲಿ ಮಲಗಿದ್ದ ಮಗುವನ್ನು ಎಳೆದೊಯ್ದು ಚಿರತೆಯೊಂದು ಕೊಂದು ತಿಂದಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಮನೆಯಲ್ಲಿ ಮಲಗಿದ್ದ ಮೂರು ವರ್ಷದ ಗಂಡು ಮಗುವನ್ನು ಚಿರತೆ ಕೊಂದು ತಿಂದಿದೆ. ಇದು ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ತುಂಬಾ ಸೆಕೆ ಇದೆ ಎಂದು ಮನೆಯ ಬಾಗಿಲು ತೆರೆದು ಮಲಗಿದ್ದರು, ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಚಿರತೆ ಬಂದು ಮಗುವನ್ನು ಎಳೆದೊಯ್ದಿದೆ.

Lopard

ಕತ್ತಲೆಯಲ್ಲಿ ಹುಡುಕಿದಾಗ ಮನೆಯುಂದ ಸುಮಾರು ಅರವತ್ತು ಮೀಟರ್ ದೂರದಲ್ಲಿ ಮಗುವಿನ ಶವ ಪತ್ತೆಯಾಗಿದೆ.

ಚಿರತೆ ದಾಳಿಗೊಳಗಾದ ಮಗುವಿನ ಹೆಸರು ಹೇಮಂತ್, ಚಂದ್ರಪ್ಪ ಹಾಗೂ ಮಂಗಳಗೌರಮ್ಮ ದಂಪತಿಯ ಪ್ರೀತಿಯ ಪುತ್ರನಾಗಿದ್ದ. ಮಂಗಳಗೌರಮ್ಮ ಅವರ ತಾಯಿ ಮನೆ ಕದರಯ್ಯನ ಪಾಳ್ಯವಾಗಿದ್ದು ಕಳೆದ ವಾರವಷ್ಟೇ ಊರಿಗೆ ಮರಳಿದ್ದರು.

ತುಮಕೂರು; ಚಿರತೆ ಕೊಲ್ಲಲು ಸರ್ಕಾರದ ಆದೇಶತುಮಕೂರು; ಚಿರತೆ ಕೊಲ್ಲಲು ಸರ್ಕಾರದ ಆದೇಶ

ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಘಟನೆಯ ವಿವರ ಪಡೆದಿದ್ದಾರೆ, ಅಲ್ಲಿ ಹಿಂದೆ ಇಂಥದ್ದೇ ಘಟನೆ ನಡೆದಿತ್ತಾ ಎನ್ನುವುದರ ಕುರಿತು ಕೂಡ ಮಾಹಿತಿ ಕಲೆ ಹಾಕುತ್ತಿದ್ದಾರೆ.

English summary
A 3 year old boy was mauled to death , apparently by a leapard in a village in Ramanagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X