ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಸ್ಕಿಯಲ್ಲಿ ಬಿಜೆಪಿಗೆ ಸೋಲು: ಆದರೂ, ಸಿಎಂ ಬಿಎಸ್ವೈಗೆ ನಿರಾಳತೆ!

|
Google Oneindia Kannada News

ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರಿದ್ದ ಬಾಂಬೆ ಟೀಂನ ಮುಖಂಡರಲ್ಲೊಬ್ಬರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಮಸ್ಕಿ ಕ್ಷೇತ್ರದಲ್ಲಿ ಸೋಲಾಗಿದೆ. ಯಡಿಯೂರಪ್ಪನವರ ಪುತ್ರ, ಕ್ಷೇತ್ರದ ಉಸ್ತುವಾರಿಯಾಗಿದ್ದ ವಿಜಯೇಂದ್ರ ಅವರ ಗೇಂ ಪ್ಲ್ಯಾನ್ ಈ ಬಾರಿ ಕೆಲಸ ಮಾಡಲಿಲ್ಲ.

ಮಸ್ಕಿಯಲ್ಲಿ ಇದುವರೆಗಿನ ಮೂರೂ ಚುನಾವಣೆಯಲ್ಲಿ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್ಸಿನ ಅಭ್ಯರ್ಥಿ ಬಸನಗೌಡ ತುರ್ವಿಹಾಳ ವಿರುದ್ದ ಪರಾಭವಗೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಇದೇ ತುರ್ವಿಹಾಳ ವಿರುದ್ದ ಪ್ರತಾಪ್ ಗೌಡ್ರು ಕೇವಲ 213 ಮತಗಳ ಅಂತರದ ಗೆಲುವು ಸಾಧಿಸಿದ್ದರು.

ಮಸ್ಕಿಯಲ್ಲಿ ಬಿಜೆಪಿಗೆ ಮುಖಭಂಗ, ಪ್ರತಾಪಗೌಡ ಪ್ರತಿಕ್ರಿಯೆ ಏನು? ಮಸ್ಕಿಯಲ್ಲಿ ಬಿಜೆಪಿಗೆ ಮುಖಭಂಗ, ಪ್ರತಾಪಗೌಡ ಪ್ರತಿಕ್ರಿಯೆ ಏನು?

ಮಸ್ಕಿಯಲ್ಲಿ ಈ ಬಾರಿ ಬಿಜೆಪಿಗೆ ಸೋಲಾಗುವ ಮೂಲಕ, ಆಪರೇಶನ್ ಕಮಲಕ್ಕೆ ಮತದಾರ ಪಾಠ ಕಲಿಸಿದ್ದಾನೆ ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ. ಫಲಿತಾಂಶ ಬರುವ ಮುನ್ನವೇ ಮತ ಎಣಿಕೆ ಕೇಂದ್ರದಿಂದ ಬಿಜೆಪಿ ಅಭ್ಯರ್ಥಿ ಹೊರ ನಡೆದಿದ್ದಾರೆ.

Assembly Election Results 2021 Live Updates: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶAssembly Election Results 2021 Live Updates: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ

"ನನಗೆ ಸೋಲಾಗುವುದಿಲ್ಲ ಎಂದೇ ಬಾವಿಸಿದ್ದೆ, ಇನ್ನೂ ಎರಡು ವರ್ಷ ನಮ್ಮ ಪಕ್ಷದ ಸರಕಾರ ಅಧಿಕಾರದಲ್ಲಿ ಇರುತ್ತೆ. ಸೋತೆ ಎಂದು ಕ್ಷೇತ್ರವನ್ನು ನಿರ್ಲ್ಯಕ್ಷ ಮಾಡುವುದಿಲ್ಲ" ಎಂದು ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ. ಮಸ್ಕಿಯಲ್ಲಿ ಸೋತರೂ ಪಕ್ಷಕ್ಕೆ, ಬಿಎಸ್ವೈಗೆ ನಿರಾಳತೆ.

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿ ಮೆಟ್ರೋ ಮ್ಯಾನ್ ಶ್ರೀಧರನ್‌ಗೆ ಮುನ್ನಡೆ ಕೇರಳದಲ್ಲಿ ಬಿಜೆಪಿ ಅಭ್ಯರ್ಥಿ ಮೆಟ್ರೋ ಮ್ಯಾನ್ ಶ್ರೀಧರನ್‌ಗೆ ಮುನ್ನಡೆ

 ಎಂ.ಟಿ.ಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಬಿಎಸ್ವೈ ಹರಸಾಹಸ

ಎಂ.ಟಿ.ಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಬಿಎಸ್ವೈ ಹರಸಾಹಸ

ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರಿದ ಮುಖಂಡರಿಗೆ ಸಚಿವ ಸ್ಥಾನ ನೀಡುವಲ್ಲಿ ಯಡಿಯೂರಪ್ಪ ಸುಸ್ತಾಗಿ ಹೋಗಿದ್ದರು. ಎಂ.ಟಿ.ಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಬಿಎಸ್ವೈ ಹರಸಾಹಸವನ್ನೇ ಪಟ್ಟಿದ್ದರು. ಈಗ, ಪ್ರತಾಪ್ ಗೌಡ ಪಾಟೀಲ್ ಗೆದ್ದಿದ್ದರೆ ಪಕ್ಷದಲ್ಲಿ ಅವರಿಗೂ ಸಚಿವ ಸ್ಥಾನ ನೀಡುವ ಅನಿವಾರ್ಯತೆ ಎದುರಾಗುತ್ತಿತ್ತು.

 ಮಸ್ಕಿ ಸೋಲು, ಯಡಿಯೂರಪ್ಪನವರಿಗೆ ಅಷ್ಟೇನೂ ತಲೆನೋವು ಪಡುವ ವಿಚಾರವಲ್ಲ

ಮಸ್ಕಿ ಸೋಲು, ಯಡಿಯೂರಪ್ಪನವರಿಗೆ ಅಷ್ಟೇನೂ ತಲೆನೋವು ಪಡುವ ವಿಚಾರವಲ್ಲ

ಹೈಕಮಾಂಡ್ ನಿಂದ ಯಾವುದೇ ವಿಚಾರಕ್ಕೂ ಅನುಮತಿ ಸಿಗುವುದು ಯಡಿಯೂರಪ್ಪನವರಿಗೆ ಸಿಗುವುದು ಕಷ್ಟವಾಗಿರುವ ಈ ಸಮಯದಲ್ಲಿ ಪ್ರತಾಪ್ ಗೌಡ ಪಾಟೀಲ್ ಸೋಲು, ಯಡಿಯೂರಪ್ಪನವರಿಗೆ ಅಷ್ಟೇನೂ ತಲೆನೋವು ಪಡುವ ವಿಚಾರ ಅಲ್ಲ ಎಂದೇ ಹೇಳಬಹುದಾಗಿದೆ. ಯಾಕೆಂದರೆ, ಕೇಂದ್ರದಿಂದ ಬರುವ ಅನುದಾನದಿಂದ ಹಿಡಿದು, ಪಕ್ಷಕ್ಕೆ ಸಂಬಂಧಿಸಿದ ವಿಚಾರದಲ್ಲೂ ಬಿಎಸ್ವೈಗೆ ವರಿಷ್ಠರ ಸಹಕಾರ ಅಷ್ಟಕಷ್ಟೇ..

Karnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶKarnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶ

 ಹುಣಸೂರಿನಿಂದ ಎಚ್.ವಿಶ್ವನಾಥ್ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಸೋತಿದ್ದರು

ಹುಣಸೂರಿನಿಂದ ಎಚ್.ವಿಶ್ವನಾಥ್ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಸೋತಿದ್ದರು

ಆದರೂ, ಹುಣಸೂರಿನಿಂದ ಎಚ್.ವಿಶ್ವನಾಥ್ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಸೋತಿದ್ದರೂ, ಪರಿಷತ್ ಸದಸ್ಯರನ್ನಾಗಿ ಮಾಡಲು ಬಿಎಸ್ವೈ ದಂಬಾಲು ಬಿದ್ದಿದ್ದರು. ಕೊನೆಗೆ, ಸಾಹಿತ್ಯ ಕ್ಷೇತ್ರದ ಕೋಟಾದಿಂದ ಅವರನ್ನು ಸದಸ್ಯರನ್ನಾಗಿ ಮಾಡಲಾಯಿತು. ಇದಾದ ಮೇಲೆ, ಸಚಿವ ಸ್ಥಾನ ಮಾಡುವಂತೆ ಸಿಎಂ ಹಿಂದೆ ವಿಶ್ವನಾಥ್ ಸುತ್ತುತ್ತಿದ್ದರೂ, ಬಿಎಸ್ವೈ ಇದಕ್ಕೆ ಸೊಪ್ಪು ಹಾಕಿರಲಿಲ್ಲ.

Recommended Video

ಮಸ್ಕಿ ಗೆಲುವಿನ ನಂತರ ಮಾತಾಡಿದ ಕೆಪಿಸಿಸಿ ಅಧ್ಯಕ್ಷ !!
 ಮಸ್ಕಿಯಲ್ಲಿನ ಸೋಲು, ಇನ್ನೊಂದು ಸಂಪುಟ ವಿಸ್ತರಣೆ ಸರ್ಕಸ್ ನಿಂದ ಬಚಾವ್

ಮಸ್ಕಿಯಲ್ಲಿನ ಸೋಲು, ಇನ್ನೊಂದು ಸಂಪುಟ ವಿಸ್ತರಣೆ ಸರ್ಕಸ್ ನಿಂದ ಬಚಾವ್

ಹೀಗಾಗಿ, ವಿಶ್ವನಾಥ್ ರೀತಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಕೂಡಾ ಪರಿಷತ್ ಸದಸ್ಯರನ್ನಾಗಿ ಮಾಡಲು ಯಡಿಯೂರಪ್ಪ ಹಿಂದೆ ಬೀಳುತ್ತಾರಾ ಎನ್ನುವುದಕ್ಕೆ ಸದ್ಯಕ್ಕೆ ಉತ್ತರವಿಲ್ಲದಿದ್ದರೂ, ಮಸ್ಕಿಯಲ್ಲಿನ ಸೋಲು, ಇನ್ನೊಂದು ಸಂಪುಟ ವಿಸ್ತರಣೆ ಸರ್ಕಸ್ ನಿಂದ ಬಿಜೆಪಿ ಮತ್ತು ಯಡಿಯೂರಪ್ಪ ಬಚಾವ್ ಆಗಿದ್ದಾರೆ.

English summary
Though BJP Lost In Maski Assembly By-Election, CM Yediyurappa Relief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X