ರಾಯಚೂರು: ಬಸ್ ಟಾಪ್ ಮೇಲೆ ಕುಳಿತು ವಿದ್ಯಾರ್ಥಿಗಳು ಅಪಾಯಕಾರಿ ಪ್ರಯಾಣ
ರಾಯಚೂರು, ಜುಲೈ, 26: ರಾಯಚೂರು ಜಿಲ್ಲೆಯ ಸಗಮಕುಂಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು, ಜನಸಾಮಾನ್ಯರು ಪರದಾಡುತ್ತಿದ್ದಾರೆ. ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಹೋಗುವ ಜನರು ಮತ್ತು ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ್ ಸೌಲಭ್ಯ ಇಲ್ಲದೆ ದಿನನಿತ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಜಿಲ್ಲೆಯ ಸುಮಾರು ಗ್ರಾಮಗಳಲ್ಲಿ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಇಲ್ಲ. ಕೆಲವೇ ಕೆಲವು ಬಸ್ಗಳು ಮಾತ್ರ ಸಂಚರಿಸುತ್ತಿದ್ದು, ತಿಕ್ಕಾಟದ ನಡುವೆ ಜನರು ಪ್ರಯಾಣ ಮಾಡುತ್ತಿದ್ದಾರೆ. ಯಾವುದೇ ದಾರಿ ಇಲ್ಲದೆ ವಿದ್ಯಾರ್ಥಿಗಳು ಸೇರಿದಂತೆ ಇತರರು ಬಸ್ ಟಾಪ್ ಮೇಲೆ ಕುಳಿತು ಪ್ರಯಾಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲದಿದ್ದರೆ ದುಬಾರಿ ಹಣ ತೆತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡಬೇಕಾದ ಸ್ಥಿತಿ ಇದೆ.
ಬಡವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹೆಚ್ಚು ಹಣ ನೀಡುವ ಶಕ್ತಿ ಯಾರಿಗೂ ಇಲ್ಲ. ಸಗಮಕುಂಟ, ಕೊರವಿಹಾಳ್, ಕೊರ್ತಕುಂದ, ಮಾಮನದೊಡ್ಡಿ , ಇಬ್ರಾಹಿಂ ದೊಡ್ಡಿ ಗ್ರಾಮಗಳಿಗೆ ತೆರಳಲು ಬೆರಳೆಣಿಕೆಯ ಬಸ್ಗಳನ್ನು ಬಿಟ್ಟಿದ್ದಾರೆ ಅಷ್ಟೇ. 'ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ದೂರದ ರಾಯಚೂರು ನಗರಕ್ಕೆ ಹೋಗಬೇಕು. ಒಂದೆರಡು ಬಸ್ಗಳು ಸಂಚರಿಸುತ್ತಿದ್ದು, ಬೇರೆ ಸಮಯದಲ್ಲಿ ಬಸ್ ಸೌಲಭ್ಯವಿಲ್ಲ. ಬಸ್ ಸೌಕರ್ಯವಿಲ್ಲದೆ ಇಂದಿಗೂ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕೊರವಿಹಾಳ್ ಗ್ರಾಮದ ರವೀಂದ್ರ ಅಸಮಾಧಾನ ಹೊರಹಾಕಿದರು'.
ಸಾರಿಗೆ
ಇಲಾಖೆ
ವಿರುದ್ಧ
ಆಕ್ರೋಶ:
'ಬೆಳಗ್ಗೆ
ಹಾಗೂ
ಸಂಜೆ
ವೇಳೆ
ವಿದ್ಯಾರ್ಥಿಗಳು
ಸಾರಿಗೆ
ವ್ಯವಸ್ಥೆ
ಇಲ್ಲದೆ
ಖಾಸಗಿ
ವಾಹನಗಳ
ಮೊರೆ
ಹೋಗಬೇಕು.
ಅವು
ನಿಗದಿತ
ಸಮಯಕ್ಕೆ
ಬರದಿದ್ದಾಗ
ಮಕ್ಕಳು
ಆ
ದಿನ
ಶಾಲೆಗೆ
ಹೋಗದೇ
ಮನೆಯಲ್ಲೇ
ಉಳಿಯಬೇಕಾಗುತ್ತದೆ.
ಈ
ಬಗ್ಗೆ
ಸಾಕಷ್ಟು
ಬಾರಿ
ಸಾರಿಗೆ
ಇಲಾಖೆಗೆ
ಮಾಹಿತಿ
ನೀಡಿದರೂ
ಯಾವುದೇ
ಪ್ರಯೋಜನವಾಗಿಲ್ಲ'
ಎಂದು
ಗ್ರಾಮಸ್ಥರು
ದೂರಿದರು.
ಕೊರವಿಹಾಳ್
ಗ್ರಾಮಕ್ಕೆ
ತೆರಳುವ
ಮಾರ್ಗದಲ್ಲಿ
ಬಸ್ಗಳ
ಕೊರತೆ
ಎದ್ದು
ಕಾಣುತ್ತಿದ್ದು,
ಅಲ್ಲಿನ
ಸ್ಥಳೀಯರು
ಸಾರಿಗೆ
ಇಲಾಖೆ
ವಿರುದ್ಧ
ಆಕ್ರೋಶ
ಹೊರಹಾಕಿದರು.
ಅಲ್ಲಿನ ಜನರು ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೆ ಬರುವ ಬಸ್ಗಳ ಟಾಪ್ ಮೇಲೆಯೇ ಕುಳಿತು ಸಂಚರಿಸುತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಗ್ರಾಮದಿಂದ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ರಾಯಚೂರು ನಗರಕ್ಕೆ ಹೋಗುತ್ತಾರೆ. ಆ ಸಮಯಲ್ಲಿ ಟಾಪ್ ಮೇಲೆಯೇ ಕುಳಿತು ತಮ್ಮ ಗ್ರಾಮಗಳಿಗೆ ವಿದ್ಯಾರ್ಥಿಗಳು ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡುತ್ತಾರೆ. ಇದರ ಬೆನ್ನಲ್ಲೇ ಈ ಮಾರ್ಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್ಗಳನ್ನು ಬಿಡಬೇಕು ಎಂಬ ಕೂಗು ಕೇಳಿ ಎದ್ದಿದ್ದು, ಮುಂದೆ ನಡೆಯುವ ಅವಘಡಗಳವನ್ನು ತಪ್ಪಿಸಬೇಕು. ಕೆಎಸ್ಆರ್ಟಿಸಿ ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳ ವ್ಯವಸ್ಥೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೂ ಕೂಡ ಎಚ್ಚೆತ್ತುಕೊಳ್ಳದ ಸಾರಿಗೆ ಇಲಾಖೆ ಅಧಿಕಾರಿಗಳು ಆಡಿದ್ದೇ ಆಟ ಅನ್ನುವ ಹಾಗೆ ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿದ್ದಾರೆ.
ಟಾಪ್
ಮೇಲೆ
ಪ್ರಯಾಣ
ಅಪಾಯಕಾರಿ:
ಇತ್ತೀಚೆಗಷ್ಟೇ
ಬಳ್ಳಾರಿ
ಸಮೀಪ
ಬಸ್
ಅಪಘಾತದಲ್ಲಿ
ಸುಮಾರು
ಜನರು
ಪ್ರಾಣ
ಕಳೆದುಕೊಂಡಿದ್ದರು.
ಇನ್ನು
ಕೆಲವರು
ಈಗಲೂ
ಕೂಡ
ಆಸ್ಪತ್ರೆಗಳಲ್ಲಿ
ಚಿಕಿತ್ಸೆ
ಪಡೆಯುತ್ತಲೇ
ಇದ್ದಾರೆ.
ಇದನ್ನೆಲ್ಲ
ನೋಡಿಯೂ
ನೋಡದಂತೆ
ಇರುವ
ಸಾರಿಗೆ
ಇಲಾಖೆ
ಅಧಿಕಾರಿಗಳು
ನಿರ್ಲಕ್ಷ್ಯ
ತೋರಿ
ಪ್ರಯಾಣಿಕರ
ಜೀವನದ
ಜೊತೆ
ಆಟವಾಡುತ್ತಿದ್ದಾರೆ
ಎನ್ನುವ
ಆಕ್ರೋಶದ
ಮಾತುಗಳು
ಕೂಡ
ಕೇಳಿ
ಬರುತ್ತಿವೆ.
ವಿದ್ಯಾರ್ಥಿಗಳು
ತರಗತಿಗೆ
ಹೋಗಲು
ಯಾವುದೇ
ದಾರಿ
ಇಲ್ಲದೆ
ತುಂಬಿದ
ಬಸ್ಸನ್ನೇ
ಹತ್ತಬೇಕಾಗುತ್ತದೆ.
ಅದರಲ್ಲೂ
ಬಸ್
ಟಾಪ್ಗಳ
ಮೇಲೆ
ಪ್ರಯಾಣ
ಮಾಡುತ್ತಿರುವುದು
ತುಂಬಾ
ಅಪಾಯಕಾರಿಯಾಗಿದೆ.
ಸಾರಿಗೆ
ಇಲಾಖೆ
ಅಧಿಕಾರಿಗಳು
ಹೆಚ್ಚಿನದಾಗಿ
ಬಸ್ಗಳ
ವ್ಯವಸ್ಥೆ
ಮಾಡಿದರೆ
ಮುಂದಾಗುವ
ಅವಘಡಗಳನ್ನು
ತಪ್ಪಿಸಬಹುದಾಗಿದೆ
ಎನ್ನುವ
ಕೂಗುಗಳು
ಕೇಳಿಬರುತ್ತಿವೆ.