ನಗರಸಭೆ ಜೆಡಿಎಸ್ ಸದಸ್ಯ ಬರ್ಬರ ಹತ್ಯೆ: ದುಷ್ಕರ್ಮಿಗಳು ಪರಾರಿ
ಬೆಂಗಳೂರು, ಸೆ. 29: ಕೊರೊನಾ ವೈರಸ್ ಸಂಕಷ್ಟದಿಂದ ಅಪರಾಧ ಚಟುವಟಿಕೆಗಳು ಕಡಿಮೆ ಆಗುತ್ತಿಲ್ಲ. ಪರಿಚಯದವರೊಂದಿಗೆ ಮಾತನಾಡುತ್ತ ನಿಂತಿದ್ದಾಗಲೇ ನಾಲ್ವರು ದುಷ್ಕರ್ಮಿಗಳು ನಗರಸಭೆಯ ಜೆಡಿಎಸ್ ಪಕ್ಷದ ಸದಸ್ಯನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ನಗರದ ಝಾಕೀರ ಹುಸೇನ ವೃತ್ತದಲ್ಲಿ ಮಾತನಾಡುತ್ತ ನಿಂತಿದ್ದ ಮಕಬೂಲ್ ಎಂಬುವರೇ ಕೊಲೆಯಾಗಿರುವ ದುರ್ದೈವಿ ಎಂದು ತಿಳಿದು ಬಂದಿದೆ. ರಾಯಚೂರು ನರಸಭೆ ಜೆಡಿಎಸ್ ಸದಸ್ಯರನ್ನೇ ಕೊಲೆ ಮಾಡಿ ಆಗುಂತಕರು ಪರಾರಿಯಾಗಿದ್ದಾರೆ. ಮಾರಕಾಸ್ತ್ರಗಳಿಂದಾದ ಹಲ್ಲೆಯಿಂದಾಗಿ ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.
Recommended Video
ಕಷ್ಟ
ಪಟ್ಟು
IAS
ಮಾಡಿದ್ರು
NO
USE
!!
|Rohini
Sindhuri
|
Oneindia
Kannada
ತೀವ್ರ ಗಾಯಗಳಿಂದ ರಕ್ತಸ್ರಾವವಾದ ಪರಿಣಾಮ ಮಕಬೂಲ್ ಸಾವನ್ನಪ್ಪಿದ್ದು, ಕೊಲೆ ಮಾಡಿರುವ ನಾಲ್ವರು ಆರೋಪಿಗಳು ಪರಾರೊಯಾಗಿದ್ದಾರೆ. ಜನರ ಮಧ್ಯದಲ್ಲಿಯೇ ಘಟನೆ ನಡೆದಿದ್ದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಸದರ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.
Comments
English summary
Raichur Municipality JDS party member was brutally shot and killed in Zakira Hussain circle of Raichur city,