ರಾಯಚೂರಲ್ಲಿ ಗ್ರಾಮ ವಾಸ್ತವ್ಯ, ಕುಮಾರಸ್ವಾಮಿ ಕಾರ್ಯಕ್ರಮಗಳು
ಬೆಂಗಳೂರು, ಜೂನ್ 25 : ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಜೂನ್ 26ರಂದು ಗ್ರಾಮ ವಾಸ್ತವ್ಯ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈಲಿನ ಮೂಲಕ ಬೆಂಗಳೂರಿನಿಂದ ಪ್ರಯಾಣಿಸಿದರು.
ಮಂಗಳವಾರ ರಾತ್ರಿ 9 ಗಂಟೆಗೆ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಎಚ್.ಡಿ.ಕುಮಾರಸ್ವಾಮಿ ಅವರು ಉದ್ಯಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಬೆಳಗ್ಗೆ 5.20ಕ್ಕೆ ರೈಲು ರಾಯಚೂರನ್ನು ತಲುಪಲಿದೆ.
ರಾಯಚೂರು : ಜೂ.26ರಂದು ಕರೇಗುಡ್ಡದಲ್ಲಿ ಸಿಎಂ ಗ್ರಾಮ ವಾಸ್ತವ್ಯ
ಗ್ರಾಮ ವಾಸ್ತವ್ಯ: ಯಾದಗಿರಿ ಜಿಲ್ಲೆಗೆ ಕುಮಾರಸ್ವಾಮಿ ಕೊಟ್ಟಿದ್ದು ಏನೇನು?
ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಜೂನ್ 26ರ ಬುಧವಾರ ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಮುಖ್ಯಮಂತ್ರಿಗಳ ಆಗಮನಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ. ಕುಮಾರಸ್ವಾಮಿ ಅವರ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ....
'ಗ್ರಾಮ ವಾಸ್ತವ್ಯದಲ್ಲಿ 1.24 ಕೋಟಿ ರುಪಾಯಿ ಖರ್ಚು ಮಾಡಿದ್ದೇ ಸಾಧನೆ'
*
ಜೂನ್
26ರ
ಬೆಳಗ್ಗೆ
5.20ಕ್ಕೆ
ರಾಯಚೂರಿಗೆ
ಆಗಮನ
*
ಪ್ರವಾಸಿ
ಮಂದಿರದಲ್ಲಿ
ಸ್ವಲ್ಪ
ಸಮಯ
ವಿಶ್ರಾಂತಿ
*
ಸರ್ಕಾರಿ
ಬಸ್ನಲ್ಲಿ
ಮಾನ್ವಿಯತ್ತ
ಪ್ರಯಾಣ
*
ಕರೇಗುಡ್ಡಕ್ಕೆ
ಆಗಮನ,
ವೇದಿಕೆ
ಕಾರ್ಯಕ್ರಮದಲ್ಲಿ
ಭಾಗಿ
*
ಬೆಳಗ್ಗೆ
10
ರಿಂದ
ಜನರಿಂದ
ಅಹವಾಲು
ಸ್ವೀಕಾರ
*
ಸಂಜೆ
6
ಗಂಟೆ
ಬಳಿಕ
ಮಕ್ಕಳ
ಸಾಂಸ್ಕೃತಿಕ
ಕಾರ್ಯಕ್ರಮದಲ್ಲಿ
ಭಾಗಿ
*
ಕರೇಗುಡ್ಡ
ಸರ್ಕಾರಿ
ಹಿರಿಯ
ಪ್ರಾಥಮಿಕ
ಶಾಲೆಯಲ್ಲಿ
ವಾಸ್ತವ್ಯ
*
ಜೂನ್
27ರ
ಬೆಳಗ್ಗೆ
ಹೆಲಿಕಾಪ್ಟರ್
ಮೂಲಕ
ಬೀದರ್ಗೆ
ಪ್ರಯಾಣ