ರಾಯಚೂರು: ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ 6 ಬಾಲ ಕಾರ್ಮಿಕರ ರಕ್ಷಣೆ
ರಾಯಚೂರು, ನವೆಂಬರ್ 10 : ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ 6 ಬಾಲ ಕಾರ್ಮಿಕರನ್ನ ರಾಯಚೂರು ಜಿಲ್ಲಾ ಬಾಲ ಕಾರ್ಮಿಕ ಯೋಜನಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಕ್ರಾಸ್, ನೀರಮಾನ್ವಿ ಕ್ರಾಸ್, ಕೋನಾಪುರ, ಸಿಕಲ್ ಕ್ರಾಸ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹೊಲಗಳಿಗೆ 13 ವಾಹನಗಳ ಕೆಲಸಗಾರರನ್ನು ಕರೆದುಕೊಂಡ ಹೋಗಲಾಗುತಿತ್ತು. ಈ ವೇಳೆ ದಾಳಿ ನಡೆಸಿದ ಬಾಲ ಕಾರ್ಮಿಕ ಯೋಜನಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ 6 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ಶಾಲೆ ಬಿಡಿಸಿ 6 ಜನ ಬಾಲ ಕಾರ್ಮಿಕರನ್ನು ಹೊಲದ ಕೆಲಸಕ್ಕಾಗಿ ಕರೆದೊಯ್ಯಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ತಿಳಿದ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ದಾಳಿ ವೇಳೆ 13 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Comments
English summary
The Raichur district education and Child labour department officers 6 child labourers at Manvi. officers seized 13 vehicles and complement regestered in Manvi police station.
Story first published: Friday, November 10, 2017, 11:41 [IST]