ನನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ: ಸೈಯದ್ ಯಾಸಿನ್
ರಾಯಚೂರು, ಜೂನ್.11: ನಗರ ಕ್ಷೇತ್ರದಲ್ಲಿ ನನ್ನ ಸೋಲಿಗೆ ಎಂಎಲ್ ಸಿ ಬೋಸರಾಜು ಸೇರಿ ಅನೇಕ ಕಾಂಗ್ರೆಸ್ ನಾಯಕರೇ ಕಾರಣ ಎಂದು ಮಾಜಿ ಶಾಸಕ ಸೈಯದ್ ಯಾಸಿನ್ ರಾಯಚೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಬೋಸರಾಜು ವಿರುದ್ಧ ಎಐಸಿಸಿಗೆ ದೂರು ನೀಡಲಾಗಿದ್ದು, ಅಂಥ ಪಕ್ಷ ವಿರೋಧಿಗಳಿಗೆ ಉನ್ನತ ಹುದ್ದೆ ನೀಡದಂತೆ ಒತ್ತಾಯಿಸಿದ್ದೇನೆ. ಚುನಾವಣೆಯಲ್ಲಿ ಅವರು ತಮ್ಮ ಪರ ಪ್ರಚಾರ ಮಾಡಿಲ್ಲ. ಪ್ರಚಾರ ಮಾಡಿ ಅಂತಾನೂ ಹೇಳಿಲ್ಲ.
ಎಐಸಿಸಿ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದ ಸತೀಶ್ ಜಾರಕಿಹೊಳಿ
ಪಕ್ಷದ ಪರ ಅಭ್ಯರ್ಥಿಗೆ ಬೆಂಬಲಿಸಿ, ಪ್ರಚಾರ ಮಾಡಬೇಕಾದ್ದು ಅವರ ಕರ್ತವ್ಯ. ಆದರೆ ಅವರು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರೂ ಸೇರಿದಂತೆ ಅನೇಕರ ಬಗ್ಗೆ ಡಾ.ಶೈಲೇಂದ್ರನಾಥ ಸಾಕೆ ಅವರಿಗೆ ದೂರು ಸಲ್ಲಿಸಿರುವೆ.
ಸ್ಥಳೀಯ ಆಡಳಿತದಲ್ಲಿ ಎಂಎಲ್ ಸಿ ಬೋಸರಾಜ್ ಮೂಗು ತೂರಿಸುವುದು ಒಳ್ಳೆಯದಲ್ಲ. ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರ, ಇತಿಮಿತಿ ಅವರು ಅರ್ಥೈಸಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಬೋಸರಾಜ್ ಮತಯಾಚನೆಗೆ ಅತ್ತನೂರು ಗ್ರಾಮಕ್ಕೆ ತೆರಳಿದ್ದಾಗ ಭತ್ತದ ಬೆಳೆಗೆ ಹಾಗೂ ಕುಡಿಯಲು ನೀರಿಲ್ಲ. ಈಗ ಮತ ಯಾಚನೆಗೆ ಬಂದಿದ್ದೀರಲ್ಲ ಅಂತ ರೈತ ಮಲ್ಲಪ್ಪ ಮಡಿವಾಳ ಖಾರವಾಗಿ ಪ್ರಶ್ನಿಸಿದ್ದಕ್ಕೆ ಕೊಪಗೊಂಡ ಬೋಸರಾಜ, ಸ್ವತಃ ರೈತನ ಕೈತಿರುವಿ ಹಲ್ಲೆಗೆ ಮುಂದಾಗಿದ್ದರು.