ಪ್ರಧಾನಿ ಮೋದಿ ಅವರದು ಚಾಣಕ್ಯನ ನೀತಿ: ಅಮಿತ್ ಶಾ
Recommended Video
ಪುಣೆ, ಜುಲೈ 9: ರಾಜಕೀಯ ತಂತ್ರಗಳನ್ನು ಹೆಣೆದು ವಿರೋಧಪಕ್ಷಗಳಿಗೆ ಆಘಾತ ನೀಡುವುದರಲ್ಲಿ ನಿಸ್ಸೀಮರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಬಿಜೆಪಿ ಅಭಿಮಾನಿಗಳು ಚಾಣಕ್ಯ ಎಂದೇ ಕರೆಯುತ್ತಾರೆ.
ಆದರೆ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಚಾಣಕ್ಯನಿಗೆ ಹೋಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳು ಆರ್ಯ ಚಾಣಕ್ಯನ ನೀತಿಗಳನ್ನು ಹೋಲುತ್ತವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಮೋದಿ, ಶಾ, ಕಾಂಗ್ರೆಸ್ಸಿಗೆ ಸವಾಲೆಸೆದ ಅಸಾದುದ್ದಿನ್ ಓವೈಸಿ!
ಮಹಾರಾಷ್ಟ್ರದ ಪುಣೆಯಲ್ಲಿ ರಾಮಭಾವು ಮಾಲ್ಗಿ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಅಮಿತ್ ಶಾ, ಈ ಹೋಲಿಕೆ ಮಾಡಿದ್ದಾರೆ.
ರಾಮಭಾವು ಮಾಲ್ಗಿ ಅವರ 75ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ 12ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಪ್ರಸ್ತುತದ ಸನ್ನಿವೇಶದಲ್ಲಿ ಆರ್ಯ ಚಾಣಕ್ಯ: ಜೀವನ ಮತ್ತು ಕೆಲಸ' ಎಂಬ ವಿಚಾರದ ಕುರಿತಾಗಿ ಅಮಿತ್ ಶಾ ಉಪನ್ಯಾಸ ನೀಡಿದ್ದರು. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳು ಚಾಣಕ್ಯನ ನೀತಿಗಳನ್ನೇ ಹೋಲುತ್ತವೆ ಎಂದು ವ್ಯಾಖ್ಯಾನಿಸಿದ್ದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಹಾಜರಿದ್ದರು.
ಅಮಿತ್ ಶಾರನ್ನು 'ದಂಗೆಕೋರ' ಎಂದು ದೂರಿದ ಟಿಎಂಸಿ
ಬಳಿಕ ಬಿಜೆಪಿಯ ಸಂಪರ್ಕ್ ಸೆ ಸಮರ್ಥನ್ ಕಾರ್ಯಕ್ರಮದ ಅಂಗವಾಗಿ ಖ್ಯಾತ ಬರಹಗಾರ ಬಾಬಾಸಾಹೇಬ್ ಪುರಂದರ್ ಅವರನ್ನು ಪುಣೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ರಾಮಭಾವು ಮಾಲ್ಗಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗುತ್ತಿರುವ ಉಪನ್ಯಾಸದಲ್ಲಿ 1996ರಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಮಾತನಾಡಿದ್ದರು.
'ನಮ್ಮ ಸಂವಿಧಾನ ಮತ್ತು ರಾಷ್ಟ್ರೀಯ ಜಾತ್ಯತೀತತೆ' ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದ್ದರು.
ಅವರ ಬಳಿಕ ಸುಷ್ಮಾ ಸ್ವರಾಜ್, ರಾಮ್ ಮಾಧವ್, ಇಂದ್ರೇಶ್ ಕುಮಾರ್ ಸೇರಿದಂತೆ ಅನೇಕ ಮುಖಂಡರು ಇಲ್ಲಿ ಉಪನ್ಯಾಸ ನೀಡಿದ್ದಾರೆ.