ಪುಣೆಯಲ್ಲಿ ಭಾರೀ ಮಳೆಗೆ ಕನಿಷ್ಠ ಹನ್ನೊಂದು ಮಂದಿ ಸಾವು
Recommended Video
ಪುಣೆ, ಸೆಪ್ಟೆಂಬರ್ 26: ಭಾರೀ ಮಳೆಯಿಂದ ಏರ್ಪಟ್ಟ ನೆರೆ ಪರಿಸ್ಥಿತಿಯಿಂದ ಆದ ಪ್ರತ್ಯೇಕ ಅವಘಡಗಳಲ್ಲಿ ಕನಿಷ್ಠ ಹನ್ನೊಂದು ಮಂದಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿದ್ದು, ಪರಿಸ್ಥಿತಿಯನ್ನು ಸರ್ಕಾರ ಅವಲೋಕಿಸುತ್ತಿದೆ ಎಂದಿದ್ದಾರೆ.
ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ವಾರಾಂತ್ಯದಲ್ಲಿ ಭಾರಿ ಮಳೆ
ಪುಣೆಯಲ್ಲಿ ಬುಧವಾರ ರಾತ್ರಿ ಕೂಡ ಭಾರೀ ಮಳೆಯಾಗಿದೆ. ಐನೂರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಪುಣೆ ಸುತ್ತ ಮುತ್ತ ಭಾರೀ ಮಳೆಯಿಂದ ಜೀವ ಹಾನಿ ಆಗಿರುವುದು ನೋವಿನ ಸಂಗತಿ. ಕುಟುಂಬಗಳಿಗೆ ನನ್ನ ತೀವ್ರ ಸಂತಾಪ ಸೂಚಿಸುತ್ತೇನೆ. ಅಗತ್ಯ ಇರುವ ಎಲ್ಲ ನೆರವನ್ನು ನೀಡುತ್ತಿದ್ದೇವೆ. ರಾಜ್ಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಹಾಗೂ ಕಂಟ್ರೋಲ್ ರೂಮ್ ನಿರಂತರವಾಗಿ ಪುಣೆ ಕಲೆಕ್ಟರ್ ಹಾಗೂ ಪಿಎಂಸಿ ಜತೆಗೆ ಸಂಪರ್ಕದಲ್ಲಿ ಇದ್ದಾರೆ" ಎಂದು ಫಡ್ನವೀಸ್ ಟ್ವೀಟ್ ಮಾಡಿದ್ದಾರೆ.
100+ mm of heavy rain within 3-4 hours floods Pune, roads have turned into rivers. Stay safe & avoid travel. 🙏 #PuneRains
— Sir Jadeja fan (@SirJadeja) September 25, 2019
Emergency helplines:
Disaster Mgmt. : 020-25501269, 9689931511
Fire Brigade: 020-101, 9689931991
Police: 020-26208100, 020-25657171pic.twitter.com/e6yt0Zk5lg
ಅರ್ಣೇಶ್ವರ ಪ್ರದೇಶ ವೊಂದರಲ್ಲೇ ಬುಧವಾರ ರಾತ್ರಿ ಗೋಡೆ ಕುಸಿದು ಒಂಬತ್ತು ವರ್ಷದ ಬಾಲಕ ಸೇರಿ ಐವರು ಸಾವನ್ನಪ್ಪಿದ್ದಾರೆ. ಗುರುವಾರ ಬೆಳಗ್ಗೆ ಮಳೆ ನಿಂತಿದೆ. ಆದರೆ ತಗ್ಗು ಪ್ರದೇಶಗಳಲ್ಲಿ ಇನ್ನೂ ನೀರು ನಿಂತಿದೆ. ಗೋಡೆ ಕುಸಿತ, ಮರ ಬುಡಮೇಲು ಆಗಿರುವಂಥ ಹಲವು ವರದಿಗಳು ಬಂದಿವೆ.
Situation in sahakarnagar #Pune due to yesterday rainfall. #punerains #punerain pic.twitter.com/C8o5h3h8HH
— SkymetWeather (@SkymetWeather) September 26, 2019
ಪುಣೆಯ ಸುತ್ತ ಮುತ್ತ ಬುಧವಾರ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಸಿಂಘಡ್ ರಾಸ್ತೆ, ಧನಕ್ ವಾಡಿ, ಬಾಲಾಜಿನಗರ್, ಅಂಬೇಗಾಂವ್, ಸಹಕಾರ್ ನಗರ್, ಪಾರ್ವತಿ, ಕೊಲ್ಹೇವಾಡಿ ಹಾಗೂ ಕಿರ್ಕಾತ್ ವಾಡಿ, ರಣ್ ಪೈಸ್ ನಲ್ಲಿ ಮಳೆ ನೀರು ನಿಂತಿತ್ತು.