ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲು ಹಿರಿಯ ಪುತ್ರ, ಸೊಸೆ ವಿಚ್ಛೇದನ ಸಮಾಲೋಚನೆಗೆ ಹಾಜರ್

|
Google Oneindia Kannada News

ಪಾಟ್ನ, ಜೂನ್ 28: ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಮತ್ತು ಅವರ ಪತ್ನಿ ಐಶ್ವರ್ಯಾ ರಾಯ್ ಮಂಗಳವಾರ ಪಾಟ್ನಾ ಹೈಕೋರ್ಟ್‌ಗೆ ವಿಚ್ಛೇದನದ ಸಮಾಲೋಚನೆಗಾಗಿ ಹಾಜರಾಗಿದ್ದರು. ಬಿಹಾರದ ಪ್ರಮುಖ ರಾಜಕೀಯ ಕುಟುಂಬದಿಂದ ಬಂದಿರುವ ರಾಯ್ ಅವರೊಂದಿಗೆ ವಿವಾಹವಾದ ಆರು ತಿಂಗಳೊಳಗೆ ಯಾದವ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಆರ್‌ಜೆಡಿ ನಾಯಕಿ ಮಾಜಿ ಮುಖ್ಯಮಂತ್ರಿ ತಾಯಿ ರಾಬ್ರಿ ದೇವಿ ನ್ಯಾಯಾಲಯಕ್ಕೆ ಬಂದಿದ್ದರು. ರಾಯ್ ಅವರ ತಂದೆ ಚಂದ್ರಿಕಾ ಜೊತೆಗಿದ್ದರು, ಬಹು ಅವಧಿಯ ಮಾಜಿ RJD ಶಾಸಕಿ ಅವರು ತಮ್ಮ ಮಗಳಿಗೆ ನಡೆದ ಅನ್ಯಾಯದ ವಿರುದ್ಧ "ರಾಜಕೀಯ" ಪ್ರತಿಭಟನೆಯ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ JD(U) ಗೆ ಸೇರಿದ್ದಾರೆ.

ಶಿವನ ವೇಷಧಾರಿ, ವಿವಾದಿತ ರಾಜಕಾರಣಿ ಪುತ್ರನಾರು?

"ವಿಚ್ಛೇದನ ಬಯಸುವ ಪ್ರತಿ ದಂಪತಿಗಳಿಗೆ ಕೌನ್ಸೆಲಿಂಗ್ ಕಡ್ಡಾಯ ಹಂತವಾಗಿದೆ. ಆದರೆ, ನ್ಯಾಯಾಲಯದ ಒಳಗೆ ಏನಾಯಿತು ಎಂಬುದರ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಏಕೆಂದರೆ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು" ಎಂದು ಯಾದವ್ ಪರ ವಕೀಲ ಶಿವಾನಂದನ್ ಭಾರ್ತಿ ಹೇಳಿದ್ದಾರೆ.

Tej Pratap, estranged wife undergo divorce counselling

ತೇಜ್ ಪ್ರತಾಪ್ ಯಾದವ್ ಹಾಗೂ ಐಶ್ವರ್ಯ ಮಧ್ಯೆ ಹೊಂದಾಣಿಕೆಯಿರಲಿಲ್ಲ. ತಂದೆಗೆ ಟಿಕೆಟ್ ನೀಡುವ ವಿಚಾರಕ್ಕೆ ಐಶ್ವರ್ಯ ಕಿರಿಕಿರಿ ಮಾಡಿದ್ದರು ಎಂದು ಆರೋಪಿಸಿ, ತೇಜ್ ಪ್ರತಾಪ್ ಯಾದವ್ ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಕೂಡ ಸಲ್ಲಿಸಿದ್ದರು.

ಮದುವೆಯಾಗಿ 6 ತಿಂಗಳುಗಳಲ್ಲೇ ವಿಚ್ಛೇದನಕ್ಕೆ ಅರ್ಜಿ

ಮದುವೆಯಾಗಿ 6 ತಿಂಗಳುಗಳಲ್ಲೇ ವಿಚ್ಛೇದನಕ್ಕೆ ಅರ್ಜಿ

ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಜೈಲುವಾಸಿಯಾಗಿದ್ದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರು ಪೆರೋಲ್ ಪಡೆದುಕೊಂಡು, ಮಗನ ಮದುವೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಮದುವೆಯಾದ 6 ತಿಂಗಳಿನಲ್ಲಿ ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ವಿವಾಹ ವಿಚ್ಛೇದನ ಕೋರಿ ಅರ್ಜಿ ಹಾಕಲಾಗಿತ್ತು ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ ಎಂದು ತೇಜ್ ಪ್ರತಾಪ್ ಪರ ವಕೀಲ ಯಶವಂತಕುಮಾರ್ ಶರ್ಮ ವಾದಿಸಿದ್ದರು

ಮನೆ ತೊರೆದಿದ್ದ ತೇಜ್ ಪ್ರತಾಪ್

ಮನೆ ತೊರೆದಿದ್ದ ತೇಜ್ ಪ್ರತಾಪ್

ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಬಳಿಕ ಮನೆ ತೊರೆದಿದ್ದ ತೇಜ್ ಪ್ರತಾಪ್ ಅವರು ವಾರಣಾಸಿಗೆ ತೆರಳಿದ್ದರು. ಯಾವುದೇ ಕಾರಣಕ್ಕೂ ಮತ್ತೆ ಐಶ್ವರ್ಯ ಜೊತೆ ಸಂಸಾರ ಸಾಧ್ಯವಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಆದರೆ, ಮಗನ ಮಾತು ಒಪ್ಪಲು ತಯಾರಿಲ್ಲದ ತೇಜ್ ಪ್ರತಾಪ್ ತಾಯಿ ರಾಬ್ರಿ ದೇವಿ, ಸೊಸೆಯ ಪರವಾಗಿ ನಿಂತಿದ್ದಾರೆ. ಜೊತೆಗೆ, ವಿಚ್ಛೇದನಕ್ಕೆ ಲಾಲೂ ಪ್ರಸಾದ್ ಯಾದವ್ ಕೂಡಾ ಸಮ್ಮತಿಸುತ್ತಿಲ್ಲ. ಹೀಗಾಗಿ, ಲಾಲೂ ಕುಟುಂಬದ ಕೌಟುಂಬಿಕ ಸಮಸ್ಯೆ, ದಿನದಿಂದ ದಿನಕ್ಕೆ ಕಗ್ಗಂಟಾಗಿದ್ದ ಸಮಸ್ಯೆಯನ್ನು ಹೇಗೋ ನಿಭಾಯಿಸಿದ್ದರು. ಮನೆಯಲ್ಲಿ ಶಾಂತಿಗಾಗಿ ಕುಟುಂಬಸ್ಥರು ದೇವರ ಮೊರೆಹೋಗಿದ್ದು, ವಿವಿಧ ಹೋಮ ಹವನಗಳನ್ನು ನಡೆಸಿದ್ದು ಈಗ ಫಲ ನೀಡಿತ್ತು.

ಸಂಸಾರದ ಗುಟ್ಟು ಟ್ವಿಟ್ಟರಲ್ಲಿ ರಟ್ಟಾಗಿತ್ತು

ಸಂಸಾರದ ಗುಟ್ಟು ಟ್ವಿಟ್ಟರಲ್ಲಿ ರಟ್ಟಾಗಿತ್ತು

"ನಮ್ಮಿಬ್ಬರ ನಡುವೆ ಯಾವುದೇ ಹೊಂದಾಣಿಕೆಯಿಲ್ಲ. ಇಬ್ಬರೂ ಒಟ್ಟಾಗಿ ಬದುಕುವುದು ಸಾಧ್ಯವಿಲ್ಲದ ಮಾತು. ನಮ್ಮಿಬ್ಬರ ಕುಟುಂಬದವರು ತಮ್ಮ ರಾಜಕೀಯ ಉಪಯೋಗಕ್ಕಾಗಿ ನಮ್ಮಿಬ್ಬರ ಮದುವೆ ಮಾಡಿದರು" ಎಂದು ತೇಜ್ ಪ್ರತಾಪ್ ಇತ್ತೀಚೆಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. "ಪ್ರೀತಿಯ ದಾರ ಎಂದಿಗೂ ಹರಿಯದಿರಲಿ, ಅದು ಹರಿದರೆ ಮತ್ತೆ ಸೇರಿಸುವುದಕ್ಕೆ ಸಾಧ್ಯವೇ ಇಲ್ಲ" ಎಂಬರ್ಥದ ದ್ವಿಪದಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತೇಜ್ ಪ್ರತಾಪ್ ಶೇರ್ ಮಾಡಿದ್ದಾರೆ. ಈ ಮೂಲಕ ತಾವು ಮತ್ತೆ ಐಶ್ವರ್ಯ ಜೊತೆ ಒಂದಾಗುವುದಿಲ್ಲ ಎಂಬ ಸುಳಿವು ನೀಡಿದ್ದರು.

Recommended Video

ಟೈಲರ್ ಶಿರಚ್ಛೇದ: ರಾಜಸ್ಥಾನದಲ್ಲಿ ನಿಷೇಧಾಜ್ಞೆ ಜಾರಿ, ಇಂಟರ್ನೆಟ್ ಸೇವೆ ಸ್ಥಗಿತ | *India | OneIndia Kannada
ದೂರಿನ ಸಾರಾಂಶದ ಪ್ರಕಾರ

ದೂರಿನ ಸಾರಾಂಶದ ಪ್ರಕಾರ

ದೂರಿನ ಸಾರಾಂಶದ ಪ್ರಕಾರ: ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಹಿಂಸೆಯ ಹೊರತಾಗಿಯೂ ತನ್ನ ಅತ್ತೆ- ಮಾವನ ಮನೆಯಲ್ಲಿ ವಾಸ ಇದ್ದುದಾಗಿ ಹಾಗೂ ನಿತ್ಯವೂ ಹಿಂಸೆ ಅನುಭವಿಸುತ್ತಿದ್ದುದಾಗಿ ಐಶ್ವರ್ಯಾ ಹೇಳಿಕೊಂಡಿದ್ದಾರೆ.

ಮಹಿಳೆಯರ ವಿರುದ್ಧದ ಕೌಟುಂಬಿಕ ಹಿಂಸೆ ವಿರೋಧಿ ಕಾಯ್ದೆ 2005ರ ಅಡಿಯಲ್ಲಿ ತನಗೆ ರಕ್ಷಣೆ ದೊರಕಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಐಶ್ವರ್ಯಾ ಹೇಳಿಕೊಂಡಿರುವ ಪ್ರಕಾರ: ತೇಜ್ ಮಾದಕ ವ್ಯಸನಿ ಎಂಬುದು ಗೊತ್ತಾಯಿತು. ಆತ ಮಾದಕ ಪದಾರ್ಥ ಸೇವನೆ ಮಾಡುತ್ತಿದ್ದರು. ಹಾಗೆ ಸೇವನೆ ಮಾಡಿದಾಗ ತಾನು ಶಿವನ ಅವತಾರ ಎನ್ನುತ್ತಿದ್ದುದಾಗಿ ಅಲವತ್ತುಕೊಂಡಿದ್ದಾರೆ.

English summary
RJD president Lalu Prasad's elder son Tej Pratap Yadav and his estranged wife Aishwarya Roy on Tuesday appeared before the Patna High Court for divorce counselling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X