ಬಿಹಾರದಲ್ಲಿ ಭೀಕರ ರೈಲು ದುರಂತ : ಸೀಮಾಂಚಲ ಎಕ್ಸ್ ಪ್ರೆಸ್ ಹಳಿತಪ್ಪಿ 6 ಸಾವು
ಪಟ್ನಾ, ಫೆಬ್ರವರಿ 03 : ದೆಹಲಿಗೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್ ಪ್ರೆಸ್ ರೈಲು ವೈಶಾಲಿ ಬಳಿ ಹಳಿತಪ್ಪಿದ ಪರಿಣಾಮ ಭಾರೀ ದುರ್ಘಟನೆ ಸಂಭವಿಸಿದ್ದು, ಕನಿಷ್ಠ 6 ಜನರು ಸಾವಿಗೀಡಾಗಿದ್ದಾರೆ.
ದುರ್ಘಟನೆ ಭಾನುವಾರ ಬೆಳಗಿನ ಜಾವ 3.52ಕ್ಕೆ ಸಂಭವಿಸಿದ್ದು, 9 ಬೋಗಿಗಳು ಧರೆಗುರುಳಿವೆ. ರೈಲು ದೆಹಲಿಗೆ ತೆರಳುತ್ತಿತ್ತು. ರೈಲಿನಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ನಿಖರವಾದ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
ಸೀಮಾಂಚಲ ಎಕ್ಸ್ ಪ್ರೆಸ್ ದುರಂತ: ಸಹಾಯವಾಣಿಗಳಿಗೆ ಕರೆ ಮಾಡಿ
ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗಲೇ ಜವರಾಯ ಎರಗಿದ್ದಾನೆ. ಸೋನಪುರ ಡಿವಿಜನ್ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. 9 ಬೋಗಿಗಳಲ್ಲಿ ಒಂದು ಜನರಲ್ ಬೋಗಿ, ಮೂರು ಸ್ಲೀಪರ್ ಬೋಗಿ, ಒಂದು ಎಸಿ ಕೋಚ್ ಇದೆ ಎಂದು ತಿಳಿದುಬಂದಿದೆ. ಸೋನಪುರ ಮತ್ತು ಬರೌನಿಯಲ್ಲಿರುವ ವೈದ್ಯರ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಸೋನಪುರ
ವಿಭಾಗ
-
06158221645
ಹಾಜಿಪುರ
-
06224272230
ಬರೌನಿ
-
0627923222