ಜೆಡಿಯು ಸೇರಿದ RLSP ಮುಖಂಡ: ಎನ್ ಡಿಎಗೆ ನಿಟ್ಟುಸಿರು
ಪಾಟ್ನಾ, ಡಿಸೆಂಬರ್ 29: ಇತ್ತೀಚೆಗಷ್ಟೇ ಎನ್ ಡಿಎ ಮೈತ್ರಿಕೂಟದಿಂದ ಆರ್ ಎಲ್ ಎಸ್ಪಿ(ರಾಷ್ಟ್ರೀಯ ಲೋಕ ಸಮತಾ ಪಕ್ಷ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಹೊರನಡೆದು ಬಿಜೆಪಿಗೆ ಆಘಾತ ನೀದಿದ್ದರು. ಆದರೆ ಅದೇ ಪಕ್ಷದ ಉಪಾಧ್ಯಕ್ಷ ಭಗವಾನ್ ಸಿಂಗ್ ಕುಶ್ವಾಹ ಜೆಡಿಯು ಸೇರುವ ಮೂಲಕ ತಮ್ಮ ಬೆಂಬಲ ಎನ್ ಡಿಎ ಗೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.
ಬಿಜೆಪಿಗೆ ಮತ್ತೊಮ್ಮೆ ಭಾರೀ ಆಘಾತ ನೀಡಿದ ಕುಶ್ವಾಹ ನಡೆ
ಮಹಾಘಟಬಂಧನಕ್ಕೆ ಬೆಂಬಲ ನೀಡಿದ್ದ ಉಪೇಂದ್ರ ಕುಶ್ವಾಹ ಅವರಿಗೆ ಇದು ತೀವ್ರ ಮುಖಭಂಗವನ್ನುಂಟು ಮಾಡಿದೆ. ಆರ್ ಎಲ್ ಎಸ್ಪಿ ಯ ಉಪಾಧ್ಯಕ್ಷರಾದ ಭಗವಾನ್ ಸಿಂಗ್ ಕುಶ್ವಾಹ, ತಮ್ಮ ಬೆಂಬಲಿಗರೊಂದಿಗೆ ಶುಕ್ರವಾರ ಜೆಡಿಯು ಪಕ್ಷಕ್ಕೆ ಸೇರಿದರು.
2019 ರ ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಎನ್ ಡಿಎ ತೊರೆದು, ಆಘಾತ ನೀಡಲು ಉಪೇಂದ್ರ ಕುಶ್ವಾಹ ಮುಂದಾಗಿದ್ದರು. ಬಿಹಾರದಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ಎದ್ದ ಗೊಂದಲವೇ ತಾವು ಬಿಜೆಪಿ ಮೈತ್ರಿಕೂಟ ತೊರೆಯುವುದಕ್ಕೆ ಕಾರಣ ಎಂದಿದ್ದರು. ಆದರೆ ಅದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಭಗವಾನ್ ಕುಶ್ವಾಹ, 2019 ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎನ್ನುವ ಮೂಲಕ ಮಹಾಘಟಬಂಧನಕ್ಕೂ ಮುಖಭಂಗವನ್ನುಂಟು ಮಾಡಿದ್ದಾರೆ.
ಎನ್ ಡಿಎ ದೋಸ್ತಿ ಕುಸ್ತಿ: ಸೀಟು ಹಂಚಿಕೆ ಇಂದು ಅಂತಿಮ ನಿರ್ಧಾರ
ಭಗವಾನ್ ಕುಶ್ವಾಹ ಅವರ ನಡೆ ಎನ್ ಡಿಎ ಸರ್ಕಾರಕ್ಕೆ ಕೊಂಚ ನಿರಾಳತೆಯನ್ನುಂಟು ಮಾಡಿದೆ.