ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಾಹ್ನದ ಬಿಸಿಯೂಟ; ಮಕ್ಕಳ ಮನೆಗೆ ದಿನಸಿ ವಿತರಣೆ

|
Google Oneindia Kannada News

ಪಾಟ್ನಾ, ಜುಲೈ 06 : ಕೊರೊನಾ ವೈರಸ್ ಸೋಂಕಿನ ಭೀತಿಯಿಂದಾಗಿ ಶಾಲೆಗಳು ಮುಚ್ಚಿವೆ. ಶಾಲೆಗಳು ಸದ್ಯಕ್ಕೆ ಆರಂಭವಾಗುವ ಸಾಧ್ಯತೆ ಕಡಿಮೆ ಇದೆ. ಶಾಲೆಗಳಲ್ಲಿ ಬಿಸಿಯೂಟ ಮಾಡುತ್ತಿದ್ದ ಮಕ್ಕಳ ಮನೆಗೆ ದಿನಸಿ ತಲುಪಿಸಲು ಸರ್ಕಾರ ಮುಂದಾಗಿದೆ.

ಸೋಮವಾರ ಬಿಹಾರದ ಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ಕೊಟ್ಟಿದೆ. ಶಾಲೆಗಳಲ್ಲಿ ಬಿಸಿಯೂಟ ಮಾಡುತ್ತಿದ್ದ ಮಕ್ಕಳ ಮನೆಗೆ ದಿನಸಿ ಮತ್ತು ಹಣವನ್ನು ತಲುಪಿಸಲಾಗುತ್ತದೆ.

ಕೋಟಿ ಗೆದ್ದ ಬಿಸಿಯೂಟ ತಯಾರಕಿ, ಚು.ಆಯೋಗದಿಂದ ಹೊಸ ಆಫರ್ಕೋಟಿ ಗೆದ್ದ ಬಿಸಿಯೂಟ ತಯಾರಕಿ, ಚು.ಆಯೋಗದಿಂದ ಹೊಸ ಆಫರ್

Midday Meal Ration And Money For Children

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳ ಮನೆಗೆ 8 ಕೆಜಿ ದಿನಸಿ ಮತ್ತು 358 ರೂ.ಗಳನ್ನು ನೀಡಲಾಗುತ್ತದೆ. 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ 12 ಕೆಜಿ ದಿನಸಿ ಮತ್ತು 536 ರೂ.ಗಳನ್ನು ನೀಡಲಾಗುತ್ತದೆ.

ಮೊದಲು ಕಾಲೇಜು, ಪ್ರೌಢಶಾಲೆ, ಕೊನೆಗೆ ಪ್ರಾಥಮಿಕ ಶಾಲೆ ಓಪನ್ಮೊದಲು ಕಾಲೇಜು, ಪ್ರೌಢಶಾಲೆ, ಕೊನೆಗೆ ಪ್ರಾಥಮಿಕ ಶಾಲೆ ಓಪನ್

ಮೇ, ಜೂನ್ ಮತ್ತು ಜುಲೈ ತಿಂಗಳಿಗೆ ದಿನಸಿ ಮತ್ತು ಆಹಾರವನ್ನು ವಿತರಣೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ. ಶಾಲೆಗಳು ಬಂದ್ ಆಗಿದ್ದು, ಮಧ್ಯಾಹ್ನದ ಊಟಕ್ಕಾಗಿ ಮಕ್ಕಳು ಪರದಾಡುತ್ತಿರುವ ಹಲವು ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬಂದಿತ್ತು.

ವಾರಾಣಸಿಯಲ್ಲಿ ಹಸಿವಿನಿಂದ ಎಲೆ ತಿಂದರೆ ಈ ಆರು ಮಕ್ಕಳು?ವಾರಾಣಸಿಯಲ್ಲಿ ಹಸಿವಿನಿಂದ ಎಲೆ ತಿಂದರೆ ಈ ಆರು ಮಕ್ಕಳು?

ಮಕ್ಕಳು ಶಾಲೆಗೆ ಬರುತ್ತಿದ್ದಾಗ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿತ್ತು. ಆದರೆ, ಲಾಕ್ ಡೌನ್ ಪರಿಣಾಮ ಶಾಲೆಗಳು ಮುಚ್ಚಿದ್ದರಿಂದ ಮಧ್ಯಾಹ್ನದ ಬಿಸಿಯೂಟವಿಲ್ಲದೇ ಮಕ್ಕಳಿಗೆ ಪೌಷ್ಠಿಕವಾದ ಆಹಾರ ಸಿಗುತ್ತಿರಲಿಲ್ಲ. ಇದನ್ನು ಗಮನಿಸಿ ಮನೆಗೆ ದಿನಸಿ ಸರಬರಾಜು ಮಾಡಲು ಸೂಚನೆ ಕೊಡಲಾಗಿದೆ.

ಮನೆಯಲ್ಲಿಯೂ ಸರಿಯಾದ ಆಹಾರ ಸಿಗದೇ ಮಕ್ಕಳು ಭಿಕ್ಷಾಟನೆ, ಕಸ ಸಂಗ್ರಹದಂತಹ ಕೆಲಸದಲ್ಲಿ ತೊಡಗಿರುವ ವರದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದವು. ಆದ್ದರಿಂದ, ಸರ್ಕಾರ ಶಾಲೆ ಬಂದ್ ಆಗಿದ್ದರೂ ಮಕ್ಕಳ ಮನೆಗೆ ದಿನಸಿ ತಲುಪಿಸುವ ತೀರ್ಮಾನ ಕೈಗೊಂಡಿದೆ.

English summary
Under midday meal scheme Bihar education department to provide ration and money for the children studying in Class 1 to 5 and 6 to 8 for the month of May, June and July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X