ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೇಜಸ್ವಿ ಒರಟಾಟಕ್ಕೆ ಬೇಸತ್ತು ಪಕ್ಷ ತೊರೆದ ಹಿರಿಯ ಮುಖಂಡ

|
Google Oneindia Kannada News

ಪಾಟ್ನಾ, ಏಪ್ರಿಲ್ 18: ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ಒರಟಾಟಕ್ಕೆ ಬೇಸತ್ತು ಆರ್ ಜೆಡಿ ಮುಖಂಡ ಮೊಹಮ್ಮದ್ ಅಲಿ ಅಶ್ರಫ್ ಫತ್ಮಿ ಅವರು ಬುಧವಾರದಂದು ಪಕ್ಷ ತೊರೆದಿದ್ದಾರೆ. ಮಧುಬನಿ ಲೋಕಸಭಾ ಕ್ಷೇತದಿಂದ ಸ್ಪರ್ಧಿಸಲು ಬಯಸಿದ್ದ ಅಶ್ರಫ್ ಅವರ ಕನಸು ಭಗ್ನಗೊಂಡಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆರ್ ಜೆಡಿ ಸಂಸದೀಯ ಮಂಡಳಿಯಂದ ಅಶ್ರಫ್ ರನ್ನು ಕಿತ್ತು ಹಾಕಿ, 6 ವರ್ಷಗಳ ಕಾಲಕ್ಕೆ ಅಮಾನತು ಮಾಡಲಾಗಿತ್ತು. ಆದರೆ, ಏಪ್ರಿಲ್ 18ರ ತನಕ ಕಾಯುತ್ತೇನೆ ಎಂದಿದ್ದ ಅಶ್ರಫ್ ಅವರು ಟಿಕೆಟ್ ಹಂಚಿಕೆ ವಿಷಯಕ್ಕೆ ಬೇಸರಗೊಂಡು ಪಕ್ಷ ತೊರೆದಿದ್ದಾರೆ. ಮಹಾಘಟಬಂದನ್ ನ ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ ಅಭ್ಯರ್ಥಿಯನ್ನು ಮಧುಬನಿಯಿಂದ ಕಣಕ್ಕಿಳಿಸಲಾಗುತ್ತಿದೆ.

ಖಾಸಗಿ ವಲಯದಲ್ಲೂ ಉದ್ಯೋಗ ಮೀಸಲಾತಿ : ಆರ್ ಜೆ ಡಿ ಭರವಸೆ ಖಾಸಗಿ ವಲಯದಲ್ಲೂ ಉದ್ಯೋಗ ಮೀಸಲಾತಿ : ಆರ್ ಜೆ ಡಿ ಭರವಸೆ

ದರ್ಭಾಂಗಾದಲ್ಲಿ ಅಬ್ದುಲ್ ಬಾರಿ ಸಿದ್ದಿಕಿಯನ್ನು ಕಣಕ್ಕಿಳಿಸಿರುವುದರ ಬಗ್ಗೆ ಅಶ್ರಫ್ ಅವರು ವಿರೋಧಿಸಿದ್ದರು. ಈಗ ಮಧುಬನಿಯಲ್ಲಿ ಸಂಸದ ಹುಕುಮ್ ದೇವ್ ನಾರಾಯಣ್ ಅವರ ಪುತ್ರ ಅಶೋಕ್ ಯಾದವ್ ಹಾಗೂ ವಿಐಪಿ ಪಕ್ಷದಿಂದ ಆರ್ ಜೆಡಿಯ ಮಾಜಿ ಮುಖಂಡ ಬದ್ರಿನಾಥ್ ಪುರ್ವೆ ಅವರು ಕಣದಲ್ಲಿದ್ದಾರೆ

Elections 2019: RJD Leader Alleges Tejashwi Yadav Was RoughTo Him, Quits Party

ಇನ್ನೊಂದೆಡೆ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಪಕ್ಷದ ವಿರುದ್ಧ ಸಿಡಿದೆದ್ದು ಪ್ರತ್ಯೇಕ ರಾಜಕೀಯ ಸಂಘಟನೆಯನ್ನು ಸ್ಥಾಪಿಸಿ, ಲಾಲೂ ರಾಬ್ಡಿ ಮೋರ್ಚಾ ಎಂಬ ಹೆಸರಿಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ಬಿಹಾರದಲ್ಲಿ ಏಪ್ರಿಲ್ 11ರಂದು ಔರಂಗಾಬಾದ್, ಗಯಾ, ನವಾಡಾ ಹಾಗೂ ಜಮುಯಿಯಲ್ಲಿ ಚುನಾವಣೆ ನಡೆಯಲಿದೆ. ದೇಶದೆಲ್ಲೆಡೆ ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಚುನಾವಣೆ ನಿಗದಿಯಾಗಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ.

English summary
Lok Sabha Elections 2019: "Tejashwi Yadav spoke to me on Tuesday and told me that I was being suspended from the party for a period of six years. He was so rough and rude...I was appalled," Mohd Ali Ashraf Fatmi told PTI over phone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X