ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೌಕೀದಾರ್ ಕಳ್ಳ ಮಾತ್ರ ಅಲ್ಲ, ಹೆದರುಪುಕ್ಕಲ: ರಾಹುಲ್ ಗಾಂಧಿ ವಾಗ್ದಾಳಿ

|
Google Oneindia Kannada News

ಗಯಾ (ಬಿಹಾರ), ಏಪ್ರಿಲ್ 9: ನಾನು ಯಾವಾಗೆಲ್ಲ ಬಡವರಿಗೆ ಹಣ ನೀಡುವ ಮಾತನಾಡುತ್ತೇನೋ ಆಗ ನರೇಂದ್ರ ಮೋದಿ, ಎಲ್ಲಿಂದ ಹಣ ಬರುತ್ತದೆ ಎನ್ನುತ್ತಾರೆ. ನಾನು ಎಲ್ಲಿಂದ ಹಣ ಬರುತ್ತದೆ ಅಂತ ಹೇಳ್ತೀನಿ. ಅದು ಅನಿಲ್ ಅಂಬಾನಿ ಜೇಬಿನಿಂದ ಬರುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಬಿಹಾರದ ಗಯಾದಲ್ಲಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೋದಿ ಅವರು ಎರಡು ದೇಶ ಮಾಡಲು ಬಯಸಿದ್ದಾರೆ: ಒಂದು ಅಂಬಾನಿ ಹಾಗೂ ನೀರವ್ ಮೋದಿಗೆ ಮತ್ತು ಇನ್ನೊಂದು ನೀವು ಮತ್ತು ನಮಗೆ. ಈ ಚೌಕೀದಾರ್ ಕಳ್ಳ ಮಾತ್ರ ಅಲ್ಲ, ಹೆದರುಪುಕ್ಕಲ ಕೂಡ. ಈ ಚೌಕೀದಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ನನ್ನೊಂದಿಗೆ ಚರ್ಚೆ ಮಾಡಲು ಕರೆಯುತ್ತೇನೆ. ಅವರಿಗೆ ತಾಕತ್ತಿಲ್ಲ. ಮತ್ತು ಹೆದರಿ ಓಡಿಹೋದರು ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ನರೇಂದ್ರ ಮೋದಿ ಐದು ವರ್ಷ ಸರಕಾರ ನಡೆಸಿದ್ದು ಕೇವಲ ಹದಿನೈದು ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮತ್ತು ನಿರಂತರವಾಗಿ ದೇಶದ ಅತಿ ಶ್ರೀಮಂತರಿಗೆ ಹಣ ನೀಡುತ್ತಾ ಹೋದರು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆಗ ಹೆಡ್ ಲೈನ್: ಬಡ ಜನರಿಗೆ ಹಣ ನೀಡಲಾಯಿತು ಎಂದಿರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Chowkidar is not only chor, but also a coward, says Rahul Gandhi

ನೋಟು ನಿಷೇಧ ಹಾಗೂ ಜಿಎಸ್ ಟಿಯಿಂದ ಚೌಕೀದಾರ್ ನಿಮ್ಮ ಹಣ ಕಸಿದುಕೊಂಡರು. ಬ್ಯಾಂಕ್ ಗಳ ಕೀಗಳನ್ನು ಅನಿಲ್ ಅಂಬಾನಿಯಂಥ ಕಳ್ಳರ ಕೈಗೆ ಒಪ್ಪಿಸಲಾಯಿತು. ಒಂದು ಸಲ ನಾವು ಅಧಿಕಾರಕ್ಕೆ ಬಂದರೆ ಅನಿಲ್ ಅಂಬಾನಿ ಬಳಿಯಿರುವ ಕೀ ಕಸಿಯುತ್ತೇವೆ ಮತ್ತು ಅದನ್ನು ನೊಂದಿರುವ ಯುವಕರಿಗೆ ನೀಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

English summary
Chowkidar (PM Narendra Modi) is not only chor, but also a coward. I told the Chowkidar to debate with me as he talks about corruption. He does not have the guts and fled away, says Congress president Rahul Gandhi in Gaya, Bihar on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X