ಹತ್ರಾಸ್ ಅತ್ಯಾಚಾರ ಪ್ರಕರಣದ ತನಿಖೆ ಆರಂಭಿಸಿದ ಸಿಬಿಐ ತಂಡ
ಲಕ್ನೋ,
ಅಕ್ಟೋಬರ್.10:
ಉತ್ತರ
ಪ್ರದೇಶ
ಹತ್ರಾಸ್
ನಲ್ಲಿ
19
ವರ್ಷದ
ಯುವತಿ
ಮೇಲೆ
ನಡೆದ
ಸಾಮೂಹಿಕ
ಅತ್ಯಾಚಾರ
ಪ್ರಕರಣವನ್ನು
ಕೇಂದ್ರ
ತನಿಖಾ
ತಂಡವು
ತೆಗೆದುಕೊಂಡಿದೆ.
ಶನಿವಾರ
ಸಂತ್ರಸ್ತೆ
ಗ್ರಾಮಕ್ಕೆ
ಭೇಟಿ
ನೀಡಿದ
ಅಧಿಕಾರಿಗಳ
ತಂಡವು
ವಿಚಾರಣೆಯನ್ನು
ಶುರು
ಮಾಡಿದೆ.
ಹತ್ರಾಸ್
ಜಿಲ್ಲೆ
ಬೂಲಘರ್ಹಿ
ಗ್ರಾಮಕ್ಕೆ
ಕೇಂದ್ರ
ತನಿಖಾ
ತಂಡದ
ಅಧಿಕಾರಿಗಳು
ಭೇಟಿ
ನೀಡಿದ್ದು,
ಸಂತ್ರಸ್ತೆ
ಕುಟುಂಬ
ಸದಸ್ಯರಿಂದ
ಮಾಹಿತಿ
ಪಡೆದುಕೊಂಡಿದ್ದಾರೆ.
ಹತ್ರಾಸ್
ಅತ್ಯಾಚಾರ
ಪ್ರಕರಣವನ್ನು
ಸುಪ್ರೀಂಕೋರ್ಟ್
ನ್ಯಾಯಾಂಗ
ತನಿಖೆ
ನಡೆಸುವ
ಒತ್ತಾಯ
ಕೇಳಿ
ಬಂದಿತ್ತು.
ಈ
ಹಿನ್ನೆಲೆ
ಉತ್ತರ
ಪ್ರದೇಶ
ಮುಖ್ಯಮಂತ್ರಿ
ಯೋಗಿ
ಆದಿತ್ಯನಾಥ್
ಪ್ರಕರಣವನ್ನು
ಸಿಬಿಐಗೆ
ವಹಿಸಿದ್ದರು.
ಹತ್ರಾಸ್ ಅತ್ಯಾಚಾರ ಆರೋಪಿಗಳ ಮನೆಗೆ ವಕೀಲ ಎ.ಪಿ ಸಿಂಗ್
ಕೇಂದ್ರ ತನಿಖಾ ತಂಡವು ಹತ್ರಾಸ್ ಪ್ರಕರಣದ ತನಿಖೆಯನ್ನು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಬಹುದು ಎಂದು ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಅಧಿಸೂಚನೆ ಹೊರಡಿಸಿತ್ತು. ಈ ಹಿನ್ನೆಲೆ ಶನಿವಾರ ಸಿಬಿಐ ಅಧಿಕಾರಿಗಳ ತಂಡವು ವಿಚಾರಣೆಯನ್ನು ಪ್ರಾರಂಭಿಸಿದೆ.
ಹತ್ರಾಸ್
ಸಾಮೂಹಿಕ
ಅತ್ಯಾಚಾರ
ಪ್ರಕರಣ:
ಕಳೆದ
ಸಪ್ಟೆಂಬರ್.14ರಂದು
ಉತ್ತರ
ಪ್ರದೇಶದ
ಹತ್ರಾಸ್
ನಲ್ಲಿ
ಹುಲ್ಲು
ಕತ್ತರಿಸುತ್ತಿದ್ದ
ಯುವತಿಯನ್ನು
ಠಾಕೂರ್
ಸಮುದಾಯದ
ನಾಲ್ವರು
ದುಷ್ಕರ್ಮಿಗಳು
ಅಪಹರಿಸಿ
ಅತ್ಯಾಚಾರ
ನಡೆಸಿದ್ದರು.
ಇಷ್ಟಕ್ಕೆ
ಸುಮ್ಮನಾಗದೇ
ಯುವತಿ
ಕತ್ತು
ಹಿಸುಕಿ,
ನಾಲಗೆ
ಕತ್ತರಿಸುವ
ಮೂಲಕ
ಕ್ರೌರ್ಯ
ಮೆರೆದಿದ್ದರು.
ಎರಡು
ವಾರ
ಸಾವು
ಬದುಕಿನ
ನಡುವೆ
ಹೋರಾಟ
ನಡೆಸಿದ
ದಲಿತ
ಯುವತಿ
ಸಪ್ಟೆಂಬರ್.29ರಂದು
ನವದೆಹಲಿಯ
ಸಫ್ದರ್
ಜಂಗ್
ಆಸ್ಪತ್ರೆದಲ್ಲಿ
ಕೊನೆಯುಸಿರೆಳೆದಿದ್ದಳು.
ಸಪ್ಟೆಂಬರ್.30ರ
ಮಧ್ಯರಾತ್ರಿ
2.30ರ
ಸಂದರ್ಭದಲ್ಲಿ
ಪೊಲೀಸರೇ
ಯುವತಿಯ
ಅಂತ್ಯ
ಸಂಸ್ಕಾರವನ್ನು
ನೆರವೇರಿಸಿದ್ದರು.