ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19: ಆಯುಷ್ ಸಚಿವ ಶ್ರೀಪಾದ್ ನಾಯಕ್ ಸ್ಥಿತಿ ಗಂಭೀರ

|
Google Oneindia Kannada News

ಪಣಜಿ, ಆಗಸ್ಟ್ 24: ಕೊರೊನಾ ಸೋಂಕಿನಿಂದ ಬಳಲುತ್ತಿರುವ ಕೇಂದ್ರದ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಸ್ಥಿತಿ ಚಿಂತಾಜನಕವಾಗಿದೆ.

Recommended Video

ತಮ್ಮನ ಅರ್ಹತೆ ಬಗ್ಗೆ ಮಾತನಾಡಿದ Priyanka Vadra... | Oneindia Kannada

ಆಗಸ್ಟ್​ 12ರಂದು ಶ್ರೀಪಾದ್​ ನಾಯ್ಕ್​ ಅವರು ಗೋವಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮಧ್ಯಾಹ್ನದಿಂದ ಅವರ ಆರೋಗ್ಯದಲ್ಲಿ ಏರಿಳಿತವುಂಟಾಗಿದೆ.

ಆಯುಷ್ ಸಚಿವ ಶ್ರೀಪಾದ್‌ ನಾಯಕ್‌ಗೆ ಕೊರೊನಾ ಸೋಂಕುಆಯುಷ್ ಸಚಿವ ಶ್ರೀಪಾದ್‌ ನಾಯಕ್‌ಗೆ ಕೊರೊನಾ ಸೋಂಕು

ಕೊವಿಡ್​-19 ರೋಗಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಆಯುಷ್​ ಇಲಾಖೆ ಸಚಿವ ಶ್ರೀಪಾದ್​ ನಾಯ್ಕ್​ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ತಿಳಿಸಿದ್ದಾರೆ.

Covid 19: Drop In AYUSH Minister Shripad naik Oxygen Saturation

ದೆಹಲಿಯಿಂದ ಆಗಮಿಸಿರುವ ವೈದ್ಯರ ತಂಡ ಸೂಚಿಸಿದರೆ ನಾಯ್ಕ್​ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೇ ಸ್ಥಳಾಂತರ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಶ್ರೀಪಾದ್​ ನಾಯ್ಕ್​ ಅವರ ರಕ್ತದಲ್ಲಿ ಆಮ್ಲಜನಕ ಶುದ್ಧತ್ವ ಮಟ್ಟ ಇಂದು ಕುಸಿದಿದೆ. ಇಂದು ಸಂಜೆ ದೆಹಲಿಯ ಏಮ್ಸ್​ ಮತ್ತು ಕಮಾಂಡ್​ ಆಸ್ಪತ್ರೆಯ ತಜ್ಞ ವೈದ್ಯರು ಗೋವಾಕ್ಕೆ ತೆರಳಿದ್ದು, ಸಚಿವರ ಆರೋಗ್ಯದ ಸಂಪೂರ್ಣ ವರದಿ ಪಡೆಯಲಿದ್ದಾರೆ. ಹಾಗೇ ಚಿಕಿತ್ಸೆ ನೀಡಲಿದ್ದಾರೆ ಎಂದೂ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.

English summary
Union AYUSH Minister Shripad Naik, who on August 12 announced that he was COVID-19 positive, and has been undergoing treatment in his home state of Goa, has suffered drop in oxygen saturation today, Chief Minister Pramod Sawant said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X