ಅಮಿತ್ ಶಾ ಭೇಟಿ ಮಾಡಲು ಯಡಿಯೂರಪ್ಪ ದೆಹಲಿಗೆ
ನವದೆಹಲಿ, ಆಗಸ್ಟ್ 22: ದೆಹಲಿಗೆ ಹೊರಟು ನಿಂತಿದ್ದ ಯಡಿಯೂರಪ್ಪ ಅವರಿಗೆ ಅಮಿತ್ ಶಾ ದರ್ಶನ ತಡವಾಗುತ್ತಿದೆ..
ಖಾತೆ ಹಂಚಿಕೆಯಲ್ಲಿನ ಬಿಕ್ಕಟ್ಟು ಮತ್ತು ಅನರ್ಹ ಶಾಸಕರಿಗೆ ಸ್ಥಾನ-ಮಾನ ಕುರಿತು ಚರ್ಚೆ ಮಾಡಲು ಯಡಿಯೂರಪ್ಪ ದೆಹಲಿಗೆ ಹೊರಟಿದ್ದಾರೆ. ಅನರ್ಹ ಶಾಸಕರನ್ನು ನೇರವಾಗಿ ಅಮಿತ್ ಶಾ ಜೊತೆ ಮಾತನಾಡಿಸುವ ಉದ್ದೇಶವೂ ಯಡಿಯೂರಪ್ಪ ಅವರಿಗೆ ಇದೆ.
ಖಾತೆ ಹಂಚಿಕೆ ಕಗ್ಗಂಟು; ದೆಹಲಿಗೆ ಹೊರಟ ಯಡಿಯೂರಪ್ಪ
ಅಮಿತ್ ಶಾ ಅವರು ಗೋವಾಕ್ಕೆ ತೆರಳಿರುವ ಕಾರಣ ಯಡಿಯೂರಪ್ಪ ಅವರಿಗೆ ಅಮಿತ್ ಶಾ ರನ್ನು ಭೇಟಿ ಮಾಡಲು ಸಮಯ ನೀಡಲಾಗಿಲ್ಲ. ಈಗಾಗಲೇ ಅನರ್ಹ ಶಾಸಕರು ದೆಹಲಿ ತಲುಪಿದ್ದು, ಅಮಿತ್ ಶಾ ಭೇಟಿಯಾಗಲು ಉತ್ಸುಕರಾಗಿದ್ದಾರೆ.
ಯಡಿಯೂರಪ್ಪ ಸಂಪುಟ ಆಯ್ತು; ಈಗ ಖಾತೆ ಹಂಚಿಕೆ ಕಗ್ಗಂಟು!
ಅನರ್ಹ ಶಾಸಕರು ಅಮಿತ್ ಶಾ ಅವರನ್ನು ಭೇಟಿ ಮಾಡಿ, ಅವರಿಂದ ಸಚಿವ ಸ್ಥಾನದ ವಾಗ್ದಾನ ಪಡೆಯಲೆಂದು ನಿನ್ನೆಯೇ ದೆಹಲಿಗೆ ತೆರಳಿದ್ದಾರೆ. ಅವರನ್ನು ಭೇಟಿ ಮಾಡಿಸಲೆಂದು ಯಡಿಯೂರಪ್ಪ ಇಂದು ದೆಹಲಿಗೆ ತೆರಳಲಿದ್ದಾರೆ. ಸಂಜೆ 7:30 ಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಡಿಯೂರಪ್ಪ ಅವರು ನವದೆಹಲಿಗೆ ತೆರಳಲಿದ್ದಾರೆ.