ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಭೇಟಿ ಮಾಡಲು ಯಡಿಯೂರಪ್ಪ ದೆಹಲಿಗೆ

|
Google Oneindia Kannada News

ನವದೆಹಲಿ, ಆಗಸ್ಟ್ 22: ದೆಹಲಿಗೆ ಹೊರಟು ನಿಂತಿದ್ದ ಯಡಿಯೂರಪ್ಪ ಅವರಿಗೆ ಅಮಿತ್ ಶಾ ದರ್ಶನ ತಡವಾಗುತ್ತಿದೆ..

ಖಾತೆ ಹಂಚಿಕೆಯಲ್ಲಿನ ಬಿಕ್ಕಟ್ಟು ಮತ್ತು ಅನರ್ಹ ಶಾಸಕರಿಗೆ ಸ್ಥಾನ-ಮಾನ ಕುರಿತು ಚರ್ಚೆ ಮಾಡಲು ಯಡಿಯೂರಪ್ಪ ದೆಹಲಿಗೆ ಹೊರಟಿದ್ದಾರೆ. ಅನರ್ಹ ಶಾಸಕರನ್ನು ನೇರವಾಗಿ ಅಮಿತ್ ಶಾ ಜೊತೆ ಮಾತನಾಡಿಸುವ ಉದ್ದೇಶವೂ ಯಡಿಯೂರಪ್ಪ ಅವರಿಗೆ ಇದೆ.

ಖಾತೆ ಹಂಚಿಕೆ ಕಗ್ಗಂಟು; ದೆಹಲಿಗೆ ಹೊರಟ ಯಡಿಯೂರಪ್ಪಖಾತೆ ಹಂಚಿಕೆ ಕಗ್ಗಂಟು; ದೆಹಲಿಗೆ ಹೊರಟ ಯಡಿಯೂರಪ್ಪ

ಅಮಿತ್ ಶಾ ಅವರು ಗೋವಾಕ್ಕೆ ತೆರಳಿರುವ ಕಾರಣ ಯಡಿಯೂರಪ್ಪ ಅವರಿಗೆ ಅಮಿತ್ ಶಾ ರನ್ನು ಭೇಟಿ ಮಾಡಲು ಸಮಯ ನೀಡಲಾಗಿಲ್ಲ. ಈಗಾಗಲೇ ಅನರ್ಹ ಶಾಸಕರು ದೆಹಲಿ ತಲುಪಿದ್ದು, ಅಮಿತ್ ಶಾ ಭೇಟಿಯಾಗಲು ಉತ್ಸುಕರಾಗಿದ್ದಾರೆ.

Yediyurappa waiting in New Delhi to meet Amit Shah

ಯಡಿಯೂರಪ್ಪ ಸಂಪುಟ ಆಯ್ತು; ಈಗ ಖಾತೆ ಹಂಚಿಕೆ ಕಗ್ಗಂಟು! ಯಡಿಯೂರಪ್ಪ ಸಂಪುಟ ಆಯ್ತು; ಈಗ ಖಾತೆ ಹಂಚಿಕೆ ಕಗ್ಗಂಟು!

ಅನರ್ಹ ಶಾಸಕರು ಅಮಿತ್ ಶಾ ಅವರನ್ನು ಭೇಟಿ ಮಾಡಿ, ಅವರಿಂದ ಸಚಿವ ಸ್ಥಾನದ ವಾಗ್ದಾನ ಪಡೆಯಲೆಂದು ನಿನ್ನೆಯೇ ದೆಹಲಿಗೆ ತೆರಳಿದ್ದಾರೆ. ಅವರನ್ನು ಭೇಟಿ ಮಾಡಿಸಲೆಂದು ಯಡಿಯೂರಪ್ಪ ಇಂದು ದೆಹಲಿಗೆ ತೆರಳಲಿದ್ದಾರೆ. ಸಂಜೆ 7:30 ಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಡಿಯೂರಪ್ಪ ಅವರು ನವದೆಹಲಿಗೆ ತೆರಳಲಿದ್ದಾರೆ.

English summary
Karnataka CM Yediyurappa waiting in New Delhi to meet BJP high command Amit Shah. Disqualified MLAs also waiting in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X