ಕೇಂದ್ರ ಸರ್ಕಾರ ಯಾವಾಗ ಬಂದರೂ ಚರ್ಚೆಗೆ ಸಿದ್ಧ: ರಾಕೇಶ್ ಟಿಕೈಟ್
ನವದೆಹಲಿ, ಫೆಬ್ರವರಿ.12: ವಿವಾದಿತ ಕೃಷಿ ಸಂಬಂಧಿತ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ನಾವು ಮನೆಗೆ ಹಿಂತಿರುಗುವ ಮಾತಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯ ಸಿಂಘು ಗಡಿಯಲ್ಲೇ ನಮ್ಮ ಕಚೇರಿಯಿದೆ. ಕೇಂದ್ರ ಸರ್ಕಾರವು ನಾಳೆ, ಇನ್ನೂ 10 ಅಥವಾ ಮುಂದಿನ ವರ್ಷ ಹೀಗೆ ಯಾವಾಗಲಾದರೂ ಮಾತುಕತೆಗೆ ಬರಬಹುದು. ಚರ್ಚಿಸುವುದಕ್ಕೆ ನಾವು ಸದಾ ಸಿದ್ಧರಾಗಿದ್ದೇವೆ. ಅದರ ಹೊರತಾಗಿ ದೆಹಲಿಯಲ್ಲಿ ಹಾಕಿರುವ ಕಬ್ಬಿಣದ ಸರಳುಗಳನ್ನು ತೆಗೆಯದೇ ನಾವು ವಾಪಸ್ ಹೋಗುವುದಿಲ್ಲ ಎಂದು ರಾಕೇಶ್ ತಿಕೈಟ್ ಹೇಳಿದ್ದಾರೆ.
ಕೃಷಿ
ಸಂಬಂಧಿತ
ಕಾಯ್ದೆ
ವಿರುದ್ಧ
ಸಿಂಘು
ಗಡಿ,
ಟಿಕ್ರಿ
ಗಡಿ
ಮತ್ತು
ಘಾಜಿಪುರ್
ಗಡಿ
ಪ್ರದೇಶಗಳಲ್ಲಿ
ರೈತರು
ಪ್ರತಿಭಟನೆ
ನಡೆಸುತ್ತಿದ್ದರು.
ಜನವರಿ.27ರ
ಗಣರಾಜ್ಯೋತ್ಸವದ
ದಿನವೇ
ನಡೆದ
ಹಿಂಸಾಚಾರದ
ಹಿನ್ನೆಲೆ
ಗಡಿಯಲ್ಲಿ
ಭದ್ರತೆ
ಹೆಚ್ಚಿಸಲಾಗಿತ್ತು.
ಗಡಿಯ
ರಸ್ತೆಗಳಲ್ಲಿ
ಬ್ಯಾರಿಕೇಡ್,
ಕಬ್ಬಿಣದ
ಸರಪಳಿ,
ರಸ್ತೆಗಳಲ್ಲಿ
ಮೊಳೆಗಳನ್ನು
ಹಾಕಲಾಗಿತ್ತು.
ಕೃಷಿ ಕಾಯ್ದೆ ವಾಪಸ್ ಪಡೆಯಿರಿ ಎಂದ ರಾಹುಲ್ ಗಾಂಧಿ:
ರೈತರ ಜೊತೆಗೆ ಮಾತನಾಡುವುದಾಗಿ ಹೇಳುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಎಂದು ಸಂಸದ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ರಾಜಸ್ಥಾನದ ಹನುಮಾನ್ ಘರ್ ನಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್ ಉದ್ದೇಶಿಸಿ ಅವರು ಮಾತನಾಡಿದರು. "ನಾವು ರೈತರ ಜೊತೆಗೆ ಚರ್ಚೆ ನಡೆಸುವುದಕ್ಕೆ ಸಿದ್ಧ ಎನ್ನುವ ಪ್ರಧಾನಮಂತ್ರಿಯವರು ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆ. ಮೊದಲು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಿರಿ. ತದನಂತರದಲ್ಲಿ ರೈತರ ಜೊತೆಗೆ ಮಾತನಾಡುವುದಕ್ಕೆ ಬನ್ನಿ. ಪ್ರಧಾನಿಯವರು ರೈತರ ಭೂಮಿ ಮತ್ತು ಭವಿಷ್ಯವನ್ನು ಕಿತ್ತುಕೊಂಡು ಮಾತುಕತೆ ನಡೆಸುತ್ತೇವೆ ಎಂದರೆ ಆಗುವುದಿಲ್ಲ. ಕೃಷಿ ಕಾಯ್ದೆ ರದ್ದುಗೊಳಿಸಿ ನಂತರ ರೈತರೊಂದಿಗೆ ಮಾತುಕತೆಗೆ ಮುಂದಾಗಿ" ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ಹೋರಾಟ:
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿಯಲ್ಲಿ ಸಾವಿರಾರು ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.