ಅತ್ಯಾಚಾರಿಗಳ ಪರ ನಿಲ್ಲುವುದು ರಾಜಧರ್ಮವೇ: ಬಿಜೆಪಿಗೆ ಸೋನಿಯಾ ಗಾಂಧಿ ಪ್ರಶ್ನೆ
ನವದೆಹಲಿ,
ಅಕ್ಟೋಬರ್.18:
ಭಾರತದಲ್ಲಿ
ದಲಿತರ
ಮೇಲಿನ
ದೌರ್ಜನ್ಯ
ಹೆಚ್ಚಾಗುತ್ತಿದೆ.
ಇದರ
ಮಧ್ಯೆ
ಭಾರತೀಯ
ಜನತಾ
ಪಕ್ಷವು
ತುಳಿತಕ್ಕೊಳಗಾದ
ದಲಿತ
ಕುಟುಂಬಗಳ
ಮೇಲೆ
ದಬ್ಬಾಳಿಕೆ
ಮಾಡುತ್ತಿದೆ
ಎಂದು
ಎಐಸಿಸಿ
ಅಧ್ಯಕ್ಷೆ
ಸೋನಿಯಾ
ಗಾಂಧಿ
ಆರೋಪಿಸಿದ್ದಾರೆ.
ದೇಶದಲ್ಲಿ
ಹೆಣ್ಣು
ಮಕ್ಕಳ
ಪರವಾಗಿ
ರಕ್ಷಣೆ
ನಿಲ್ಲಬೇಕಾದ
ಸರ್ಕಾರವು
ಇಂದು
ಅಪರಾಧಿಗಳ
ಪರವಾಗಿ
ನಿಲ್ಲುತ್ತಿದೆ.
ಇದೇನು
ಹೊಸ
ರಾಜಧರ್ಮವೇ
ಎಂದು
ಸೋನಿಯಾ
ಗಾಂಧಿ
ಅವರು
ಕೇಂದ್ರ
ಸರ್ಕಾರವನ್ನು
ಪ್ರಶ್ನೆ
ಮಾಡಿದ್ದಾರೆ.
ಬಿಹಾರ:
ವರ್ಚುಯಲ್
ಪ್ರಚಾರಕ್ಕೆ
ಸೋನಿಯಾ,
ಎಂಎಂ
ಸಿಂಗ್
ಸೀಮಿತ!
ಉತ್ತರ
ಪ್ರದೇಶ
ಹತ್ರಾಸ್
ನಲ್ಲಿ
19
ವರ್ಷದ
ಯುವತಿ
ಸಾಮೂಹಿಕ
ಅತ್ಯಾಚಾರ
ಆರೋಪ
ಪ್ರಕರಣದ
ಬಗ್ಗೆ
ಸೋನಿಯಾ
ಗಾಂಧಿ
ಉಲ್ಲೇಖಿಸಿದ್ದಾರೆ.
ದಲಿತ
ಕುಟುಂಬದ
ಯುವತಿ
ಮೇಲೆ
ಮೇಲ್ಜಾತಿಗೆ
ಸೇರಿದ
ನಾಲ್ವರು
ದುಷ್ಕರ್ಮಿಗಳು
ಅತ್ಯಾಚಾರ
ನಡೆಸಿದ್ದಾರೆ.
ದೇಶಾದ್ಯಂತ
ದಲಿತರ
ಮೇಲಿನ
ದೌರ್ಜನ್ಯ
ಪ್ರಕರಣಗಳು
ಹೆಚ್ಚಾಗುತ್ತಿವೆ.
ಕೇಂದ್ರ
ಸರ್ಕಾರವು
ಹೆಣ್ಣು
ಮಕ್ಕಳನ್ನು
ರಕ್ಷಿಸುವ
ಮತ್ತು
ಕಾನೂನುಗಳನ್ನು
ಗೌರವಿಸುವ
ಬದಲಿಗೆ
ಅಪರಾಧಿಗಳ
ಪರ
ನಿಲ್ಲುತ್ತಿದೆ.
ಅಷ್ಟೇ
ಅಲ್ಲದೇ
ತುಳಿತಕ್ಕೆ
ಒಳಗಾದ
ದಲಿತ
ಕುಟುಂಬಗಳ
ಧ್ವನಿಯನ್ನೇ
ಅಡಗಿಸುವ
ಕೆಲಸವನ್ನು
ಮಾಡಲಾಗುತ್ತಿದೆ
ಎಂದು
ಸೋನಿಯಾ
ಗಾಂಧಿ
ದೂಷಿಸಿದ್ದಾರೆ.
ದೇಶದ
ಪ್ರಜಾಪ್ರಭುತ್ವ
ವ್ಯವಸ್ಥೆಗೆ
ಹೊಡೆತ:
ಭಾರತದ
ಪ್ರಜಾಪ್ರಭುತ್ವ
ವ್ಯವಸ್ಥೆಯು
"ಅತ್ಯಂತ
ಕಠಿಣ
ಹಂತ"
ದಲ್ಲಿದೆ
ಎಂದು
ಆರೋಪಿಸಿದ
ಸೋನಿಯಾ
ಗಾಂಧಿ,
ಸಂವಿಧಾನ
ಮತ್ತು
ಪ್ರಜಾಪ್ರಭುತ್ವ
ಸಂಪ್ರದಾಯಗಳ
ಮೇಲೆ
ವ್ಯವಸ್ಥಿತ
ದಾಳಿ
ನಡೆಸಲಾಗುತ್ತಿದೆ
ಎಂದು
ದೂರಿದ್ದಾರೆ.
"ನಮ್ಮ
ಪ್ರಜಾಪ್ರಭುತ್ವವು
ಅತ್ಯಂತ
ಪ್ರಕ್ಷುಬ್ಧ
ಪರಿಸ್ಥಿತಿಯಲ್ಲಿದೆ.
ಸಂವಿಧಾನದ
ಮೇಲೆ
ದಾಳಿ
ನಡೆಸಲಾಗುತ್ತಿದೆ.
ಸರ್ಕಾರವು
ಸಾರ್ವಜನಿಕರ
ಹಿತಾಸಕ್ತಿಯನ್ನು
ಬದಿಗೊತ್ತಿ
ಬಂಡವಾಳಶಾಹಿಗಳಿಗಾಗಿ
ಆಡಳಿತ
ನಡೆಸುತ್ತಿದೆ.
ಇತ್ತೀಚೆಗೆ
ಸಂಸತ್ತಿನಲ್ಲಿ
ಅಂಗೀಕರಿಸಲ್ಪಟ್ಟ
ಕೇಂದ್ರದ
ವಿವಾದಾತ್ಮಕ
ಕೃಷಿ
ಸಂಬಂಧಿತ
ಕಾನೂನುಗಳು
ರೈತ
ವಿರೋಧಿಯಾಗಿವೆ.
ಹಸಿರು
ಕ್ರಾಂತಿಯ
ಲಾಭ
ಸಿಗದಂತೆ
ತಡೆಯುವುದಕ್ಕಾಗಿ
ಈ
ಕಾನೂನುಗಳನ್ನು
ಜಾರಿಗೊಳಿಸಲಾಗುತ್ತಿದೆ
ಎಂದು
ಸೋನಿಯಾ
ಗಾಂಧಿಯವರು
ಆರೋಪಿಸಿದ್ದಾರೆ.