ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಕೊನೆಯ ಕ್ಷಣದಲ್ಲಾಗಿದ್ದೇನು? ಆನಂದ್ ಮಹೀಂದ್ರಾ ವಿಡಿಯೋ

|
Google Oneindia Kannada News

ನವದೆಹಲಿ, ನವೆಂಬರ್ 23: "ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಕೊನೆಯ ಕ್ಷಣದಲ್ಲಿ ಆಗಿದ್ದೇನು?" ಇದಕ್ಕೆ ಉತ್ತರ ಎಂಬಂತೆ ಉದ್ಯಮಿ ಆನಂದ್ ಮಹೀಂದ್ರಾ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ.

ಅಜಿತ್ ಪವಾರ್ ನಡೆಗೆ ಕುಟುಂಬವೇ ಒಡೆದು ಹೋಳಾಯಿತೇ?ಅಜಿತ್ ಪವಾರ್ ನಡೆಗೆ ಕುಟುಂಬವೇ ಒಡೆದು ಹೋಳಾಯಿತೇ?

"ಕೊನೆಯ ಕ್ಷಣದ ವರೆಗೂ ಭರವಸೆ ಕಳೆದುಕೊಳ್ಳಬಾರದು. ಸೋಲನ್ನೇ ಗೆಲುವನ್ನಾಗಿ ಪರಿವರ್ತಿಸುವುದಕ್ಕೆ ಸಾಧ್ಯವಿದೆ" ಎಂದು ಕಳೆದ ಕೆಲ ದಿನಗಳ ಹಿಂದೆ ಅವರೇ ಪೋಸ್ಟ್ ಮಾಡಿದ್ದ ಟ್ವೀಟ್ ಅನ್ನು ಮತ್ತೆ ಟ್ವೀಟ್ ಮಾಡುವ ಮೂಲಕ, ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯ ಈ ಹೊತ್ತಲ್ಲಿ ಈ ವಿಡಿಯೋ ಪ್ರಸ್ತುತ ಎಂದು ಅವರು ಹೇಳಿದ್ದಾರೆ.

ಅಷ್ಟಕ್ಕೂ ವಿಡಿಯೋದಲ್ಲೇನಿದೆ?

ಕಬ್ಬಡ್ಡಿ ಆಟದ ಈ ವಿಡಿಯೋದಲ್ಲಿ ಓರ್ವ ಕ್ರೀಡಾಪಟುವನ್ನು ಔಟ್ ಮಾಡುವ ಎದುರಾಳಿ, ಗೆರೆಯನ್ನು ಮುಟ್ಟದೆ, ಗೆರೆಯ ಬಳಿ ಹೋಗಿ ನಿಂತು ಸಮಯ ಕಳೆಯುತ್ತಿದ್ದಾನೆ. ಎದುರಾಳಿ ನಿಂತಲ್ಲಿಗೇ ಬಂದು ನಿಲ್ಲುವ ಔಟ್ ಆದ ಕ್ರೀಡಾಪಟು, ಅವನನ್ನು ಗೆರೆಯಿಂದ ಆಚೆ ತಳ್ಳುವಂತೆ ಹೋಗಿ ನಿಂತು, ಇದ್ದಕ್ಕಿದ್ದಂತೆ ಅವನನ್ನು ಎಳೆದುಕೊಂಡು ಅವನನ್ನೇ ಔಟ್ ಮಾಡುತ್ತಾನೆ. ತಂಡದ ಇತರ ಆಟಗಾರರೂ ಬಂದು ಅವನನ್ನು ತಡೆಯುವುದರಿಂದ ಆತ ಗೆರೆ ಮುಟ್ಟಲಾರದೆ ಔಟ್ ಆಗುತ್ತಾನೆ.

What does happen In Maharashtra Politics In Last Moment?

ಈ ವಿಡಿಯೋವನ್ನು ಕೆಲವು ದಿನಗಳ ಹಿಂದೆಯೇ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದರು. ಇದೀಗ ಮತ್ತೆ ಈ ವಿಡಿಯೋ ಸಕಾಲಿಕ ಎನ್ನಿಸಿ, ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ.

English summary
What does happen In Maharashtra Politics In Last Moment?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X