'ನೇಪಾಳ ಜೊತೆ ಸಂಬಂಧ ಬಲವಾಗಿದೆ': ಓರ್ವ ಭಾರತೀಯನ ಹತ್ಯೆ ಬಳಿಕ ಸೇನೆ ಮುಖ್ಯಸ್ಥ
ದೆಹಲಿ, ಜೂನ್ 13: 'ನೇಪಾಳದ ಜೊತೆ ಭಾರತದ ಸಂಬಂಧ ಬಲವಾಗಿದೆ' ಎಂದು ಭಾರತೀಯ ಸೇನೆ ಮುಖ್ಯಸ್ಥ ಎಂ ಎಂ ನರವಾಣೆ ಹೇಳಿದ್ದಾರೆ. ನೇಪಾಳದ ಗಡಿಯಲ್ಲಿ ಓರ್ವ ಭಾರತೀಯನನ್ನು ಗುಂಡಕ್ಕಿ ಹತ್ಯೆ ಮಾಡಲಾಗಿದೆ. ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
Recommended Video
ಈ ಘಟನೆ ಬಳಿಕ ನೇಪಾಳದ ಕುರಿತು ಮಾತನಾಡಿರುವ ಭಾರತೀಯ ಸೇನೆ ಮುಖ್ಯಸ್ಥ ಎಂ ಎಂ ನರವಾಣೆ ''ನೇಪಾಳದೊಂದಿಗೆ ನಮಗೆ ಬಲವಾದ ಸಂಬಂಧವಿದೆ. ನಮ್ಮ ನಡುವೆ ಭೌಗೋಳಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಹೋಲಿಕೆಗಳಿವೆ. ಅವರೊಂದಿಗಿನ ನಮ್ಮ ಸಂಬಂಧವು ಯಾವಾಗಲೂ ಪ್ರಬಲವಾಗಿದೆ ಮತ್ತು ಭವಿಷ್ಯದಲ್ಲಿ ಬಲವಾಗಿರಲಿದೆ'' ಎಂದಿದ್ದಾರೆ.
We have a very strong relationship with Nepal. We have geographical, cultural, historical, religious linkages. We have very strong people to people connect. Our relation with them has always been strong and will remain strong in the furture: Army chief General MM Naravane pic.twitter.com/rfiybiOrnE
— ANI (@ANI) June 13, 2020
ಶುಕ್ರವಾರ ಬೆಳಿಗ್ಗೆ 8.40ರ ಸಮಯದಲ್ಲಿ ನೇಪಾಳದ ಗಡಿಯಲ್ಲಿ ಓರ್ವ ಭಾರತೀಯನ ಮೇಲೆ ನೇಪಾಳ ಸೈನಿಕರು ಗುಂಡು ಹಾರಿಸಿದ್ದು, ಈ ಘಟನೆಯಲ್ಲಿ 25 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ.
ನೇಪಾಳ ಬಾರ್ಡರ್ನಲ್ಲಿ ಭಾರತೀಯನ ಹತ್ಯೆ : ನಿಜಕ್ಕೂ ಅಲ್ಲಿ ಏನಾಯಿತು?
ನೇಪಾಳದಲ್ಲಿರುವ ಸೊಸೆಯನ್ನು ನೋಡಲು ಮಗನ ಜೊತೆ ತಂದೆ ಭಾರತದ ಗಡಿ ಪ್ರದೇಶದಿಂದ ತೆರಳುತ್ತಿದ್ದ ಸಮಯದಲ್ಲಿ, ಅಲ್ಲಿನ ಪೊಲೀಸರ ಜೊತೆ ವಾಗ್ವಾದ ನಡೆದಿದೆ. ಪ್ರವೇಶ ನೀಡಲು ಸಾಧ್ಯವಿಲ್ಲ. ಭಾರತಕ್ಕೆ ಹಿಂತಿರುಗಿ ಹೋಗಿ ಎಂದು ಸೂಚಿಸಿದ್ದಾರೆ. ಆದರೆ, ಕುಟುಂಬ ಮತ್ತು ಸಿಬ್ಬಂದಿ ನಡುವಿನ ವಾಗ್ವಾದ ಕಡಿಮೆಯಾಗಿಲ್ಲ. ಆದ್ದರಿಂದ 15 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಈ ಘಟನೆಯಲ್ಲಿ 25 ವರ್ಷದ ಯುವಕ ವಿಕೇಶ್ ಯಾದವ್ ಮೃತಪಟ್ಟಿದ್ದಾನೆ ಎಂದು ತಿಳಿದಿದೆ.
ಬಳಿಕ, ಆತನ ತಂದೆಯನ್ನು ನೇಪಾಳ ಸೇನೆ ವಶಪಡಿಸಿಕೊಂಡಿತ್ತು. ಇಂದು ಆ ವ್ಯಕ್ತಿಯನ್ನು ಭಾರತಕ್ಕೆ ಕಳುಹಿಸಿಕೊಟ್ಟಿದೆ. ಆ ವ್ಯಕ್ತಿಯ ಮೇಲೆಯೂ ಹಲ್ಲೆ ನೇಪಾಳ ಸೈನಿಕರು ಹಲ್ಲೆ ಮಾಡಿದ್ದಾರೆ ಎಂದು ವ್ಯಕ್ತಿ ಆರೋಪಿಸಿದ್ದಾನೆ.