ಮರಣ ದಂಡನೆ ವಿರೋಧಿಗಳ ಸಾಲಿಗೆ ವರುಣ್ ಗಾಂಧಿ
ನವದೆಹಲಿ,ಆಗಸ್ಟ್ .2:ಭಾರತದಲ್ಲಿ ಮರಣ ದಂಡನೆ, ಗಲ್ಲು ಶಿಕ್ಷೆ ರದ್ದುಗೊಳಿಸಿ ಎಂಬ ಕೂಗಿದೆ ಬಿಜೆಪಿ ಮುಖಂಡ ವರುಣ್ ಗಾಂಧಿ ದನಿಗೂಡಿಸಿದ್ದಾರೆ, ಗಲ್ಲು ಶಿಕ್ಷೆ ವಿರೋಧಿಸುವವರ ಸಾಲಿಗೆ ಬಿಜೆಪಿ ಸಂಸದ ವರುಣ್ ಗಾಂಧಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇದು ನನ್ನ ಅಭಿಪ್ರಾಯ ಮಾತ್ರ ಎಂದು ವರುಣ್ ಸ್ಪಷ್ಟನೆ ನೀಡಿದ್ದಾರೆ.
ಇಲ್ಲಿ
ತನಕ
ಗಲ್ಲಿಗೇರುವವರಲ್ಲಿ
ಶೇ.94ರಷ್ಟು
ದಲಿತ
ಹಾಗೂ
ಅಲ್ಪಸಂಖ್ಯಾತರಾಗಿರುವುದು
ಆತಂಕಕಾರಿ
ಎಂದು
ಔಟ್ಲುಕ್
ನಿಯತಕಾಲಿಕದಲ್ಲಿ
ಬರೆದಿರುವ
ಲೇಖನದಲ್ಲಿ
ವರುಣ್
ಪ್ರತಿಪಾದಿಸಿದ್ದಾರೆ.
ಕೆಲ
ದಿನಗಳ
ಹಿಂದೆ
ಬಿಜೆಪಿ
ಸಂಸದ
ಶತ್ರುಘ್ನ
ಸಿನ್ಹಾ
ಕೂಡಾ
ಗಲ್ಲುಶಿಕ್ಷೆಯನ್ನು
ವಿರೋಧಿಸಿದ್ದನ್ನು
ಇಲ್ಲಿ
ಸ್ಮರಿಸಬಹುದು.
ಮರಣ ದಂಡನೆಗೊಳಗಾದವರ ವಿವರಗಳನ್ನು ಪರಿಶೀಲಿಸುವಾಗ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತುಳಿಯಲ್ಪಟ್ಟವರೇ ಶೇ.75ರಷ್ಟಿರುವುದು ಗಮನಕ್ಕೆ ಬರುತ್ತದೆ. ಮರಣ ದಂಡನೆಯು ಪ್ರತಿಹಿಂಸೆಯನ್ನು ಕಾನೂನುಬದ್ಧಗೊಳಿಸುತ್ತದೆ ಅಷ್ಟೇ. ಅದನ್ನು ರದ್ದುಗೊಳಿಸುವ ಅಗತ್ಯವಿದೆ. ಐತಿಹಾಸಿಕವಾಗಿ ಮರಣದಂಡನೆಯು ಪ್ರಜಾಪೀಡನೆಗೆ ಸಾಧನವಾಗಿತ್ತು ಮತ್ತು ಈಗಲೂ ಅದರ ಬಳಕೆ ಕಾಲ ವಿರೋಧಾತ್ಮಕವಾಗಿದೆ.
ಮರಣ ದಂಡನೆಗೆ ಗುರಿಯಾದವರನ್ನು ನೇಣಿಗೇರಿಸುವ ವಧಾಕಾರ ನಾಗರಿಕ ಸಮಾಜಕ್ಕೊಂದು ಅವಮಾನ ಎಂದೂ ಅವರು ಬಣ್ಣಿಸಿದ್ದಾರೆ. ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ನನ್ನು ಗಲ್ಲಿಗೇರಿಸಿರುವ ಹಿನ್ನೆಲೆಯಲ್ಲಿ ವರುಣ್ರ ಈ ಅಭಿಪ್ರಾಯ ಹೊರಬಿದ್ದಿದೆ.
ಮರಣ ದಂಡನೆಗಳಿಂದ ಅಪರಾಧ ಪ್ರವೃತ್ತಿ ತಗ್ಗುತ್ತದೆ ಎನ್ನುವುದು ಸಾಬೀತಾಗಿಲ್ಲ ಎಂದಿರುವ ಅವರು,ಭಾರತವು ಬದಲಾಗುತ್ತಿರುವ ಜಾಗತಿಕ ಚಿತ್ರಣವನ್ನು ಗುರುತಿಸುವ ಮತ್ತು ಮರಣ ದಂಡನೆಯನ್ನು ರದ್ದುಗೊಳಿಸುವ ಅಗತ್ಯವಿದೆ ಎಂದು ವಾದಿಸಿದ್ದಾರೆ.(ಐಎಎನ್ಎಸ್)