' 7 ದಿನದಲ್ಲಿ ಬಂಗಲೆ ಬಿಡಿ, ಇಲ್ಲ ಅಂದ್ರೆ ನೀರು, ಕರೆಂಟ್ ಕಟ್ ಮಾಡ್ತೀವಿ'
ನವದೆಹಲಿ, ಆಗಸ್ಟ್ 19: ಏಳು ದಿನದಲ್ಲಿ ಬಂಗಲೆ ಬಿಡಿ ಇಲ್ಲ ಅಂದರೆ ಕರೆಂಟು, ನೀರು ಸೇವೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಮಾಜಿ ಸಂಸದರಿಗೆ ಕೇಂದ್ರ ಎಚ್ಚರಿಕೆ ನೀಡಿದೆ.
ಕಳೆದ ಲೋಕಸಭೆಯಲ್ಲಿ ಸೋಲನ್ನು ಅನುಭವಿಸಿರುವ ಇನ್ನೂರಕ್ಕೂ ಹೆಚ್ಚು ಮಂದಿಗೆ ಕೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಏಳು ದಿನಗಳಲ್ಲಿ ಬಂಗಲೆ ಖಾಲಿ ಮಾಡದಿದ್ದರೆ ವಿದ್ಯುತ್, ನೀರು ಸಂಪರ್ಕವನ್ನು ಕಡಿತಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.
'ಮಾಜಿ'ಗಳಾದರೂ ಸರಕಾರೀ ನಿವಾಸ ಖಾಲಿ ಮಾಡದ 200 ಸಂಸದರು: ಏನ್ ಹೇಳೋಣ ಇವರಿಗೆ?
ಸಂದಸರಿಗೆ 2014ರಲ್ಲಿ ಬಂಗಲೆ ಮಂಜೂರು ಮಾಡಲಾಗಿತ್ತು. ಮಾಜಿ ಸಂಸದರು ಹಿಂದಿನ ಲೋಕಸಭೆಯನ್ನು ವಿಸರ್ಜಿಸಿದ ಒಂದು ತಿಂಗಳೊಳಗೆ ತಮಗೆ ಕೊಟ್ಟಿರುವ ಬಂಗಲೆಯನ್ನು ಖಾಲಿ ಮಾಡಬೇಕಾಗಿತ್ತು. ಆದರೆ ಮೂರು ತಿಂಗಳು ಕಳೆದರೂ ಬಂಗಲೆ ಖಾಲಿ ಮಾಡುವಂತೆ ಕಾಣುತ್ತಿಲ್ಲ.
ಏಳು ದಿನ ಸಮಯ ನೀಡಿದ್ದರೂ ಮೂರು ದಿನ ಮುಗಿಯುತ್ತಿದ್ದಂತೆ ನೀರು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಹೇಳಿದೆ. ವಸತಿ ಸಮಿತಿ ಅಧ್ಯಕ್ಷ ಸಿಆರ್ ಪಾಟೀಲ್ ತಿಳಿಸಿದ್ದಾರೆ.
ಈ ಹಿಂದೆ ರಾಹುಲ್ ಗಾಂಧಿಗೂ ಕೂಡ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಹೊಸದಾಗಿ ಆಯ್ಕೆಯಾಗಿರುವ ಸಂಸದರಿಗೆ ಉಳಿದುಕೊಳ್ಳಲು ಬಂಗಲೆ ಇರದೆ ಪಂಚತಾರಾ ಹೋಟೆಲ್ನಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿತ್ತು.